Publish Date: Tue, 15 May 2018 (09:49 IST)
Updated Date: Tue, 15 May 2018 (10:32 IST)
ಮಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೊದಲ ಗೆಲುವಿನ ಖಾತೆ ತೆರೆದಿದೆ. ಅದೂ ಭಾರೀ ಅಂತರದಿಂದ.
ಉಮಾನಾಥ್ ಕೋಟ್ಯಾನ್ ಮೂಡಬಿದ್ರಿಯಲ್ಲಿ ಗೆಲುವು ಸಾಧಿಸಿದ್ದಾರೆ. ಹಾಲಿ ಶಾಸಕ ಅಭಯ ಚಂದ್ರ ಜೈನ್ ಅವರನ್ನು 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಕೋಟ್ಯಾನ್ ಸೋಲಿಸಿದ್ದಾರೆ.
ಇದು ಬಿಜೆಪಿ ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿದೆ. ಸದ್ಯ ಒಟ್ಟಾರೆ ಮುನ್ನಡೆಯಲ್ಲಿರುವ ಬಿಜೆಪಿಗೆ ಇದು ಶುಭ ಸೂಚನೆಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.