Webdunia - Bharat's app for daily news and videos

Install App

ಮತ ನೀಡಲ್ಲ ಎಂದಿದ್ದಕ್ಕೆ ಏರ್ ಗನ್‌ನಿಂದ ಕೊಂದ ಬಿಜೆಪಿ ಅಧ್ಯಕ್ಷ

Webdunia
ಶನಿವಾರ, 21 ಏಪ್ರಿಲ್ 2018 (17:15 IST)
ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ರೊಬ್ಬರು ಬಿಜೆಪಿ ಪಕ್ಷಕ್ಕೆ ಮತ ಹಾಕುವಂತೆ ಮತಕೇಳಲು ಹೋಗಿ ಮತ ನೀಡಲು ನಿರಾಕರಿಸಿದ್ದಕ್ಕೆ ಮನೆಯಲ್ಲಿದ್ದ ನಾಯಿಯನ್ನು ಏರ್ ಗನ್ ನಿಂದ ಶೂಟ್ ಮಾಡಿ ಕೊಂದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೋಡಿಭಾಗ್ ನ ತಾಂತ್ಸೆವಾಡದಲ್ಲಿ ನಡೆದಿದೆ. 
ಕೋಡಿಭಾಗ್ ನ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸನೀಲ್ ತಾಮಸೆ ಎಂಬುವವರೇ ಏರ್ ಗನ್ ನಿಂದ ನಾಯಿ ಯನ್ನು ಶೂಟ್ ಮಾಡಿದ ವ್ಯಕ್ತಿ.  ಕಾರವಾರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯಾರ್ಥಿ ರೂಪಾಲಿ ನಾಯ್ಕಗೆ ಮತ ನೀಡುವಂತೆ ಕೋಡಿಭಾಗ್ ನ ಸಂತೋಷ್ ಕಾಂಬ್ಳೆ ಎಂಬುವವರಿಗೆ ಬೆದರಿಸಿದ್ದಾರೆ. 
 
ಇದಕ್ಕೆ ಒಪ್ಪದ ಅವರು ಮತಹಾಕುವುದಿಲ್ಲ ಎಂದು ನಿರಾಕರಿಸಿದ್ದಾರೆ. ಇದರಿಂದ ಕುಪಿತಗೊಂಡ ಸುನಿಲ್ ತಾಮಸೆ ತನ್ನ ಮನೆಯಲ್ಲಿದ್ದ ಏರ್ ಗನ್ ತಂದು ಬೆದರಿಸಿದ್ದಾನೆ. ಆಗ ಮನೆಯಲ್ಲಿದ್ದ ಸಾಕು ನಾಯಿ ಬೊಗಳಿದ್ದು ಇದರಿಂದಾಗಿ ಮತ್ತಷ್ಟು ಕುಪಿತಗೊಂಡು ಕೈಯಲ್ಲಿದ್ದ ಏರ್ ಗನ್ ನಿಂದ ನಾಯಿಗೆ ಶೂಟ್ ಮಾಡಿದ್ದಾನೆ . ಇದರಿಂದಾಗಿ ನಾಯಿ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ಕೊಡಿಸಿದರೂ ಬದುಕುಳಿಯಲಿಲ್ಲ. ಇನ್ನು ಈ ಬಗ್ಗೆ ಕಾರವಾರ ನಗರ ಠಾಣೆಯಲ್ಲಿ ಸುನೀಲ್ ತಾಮಸೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 
 
ಪ್ರಕರಣ ದಾಖಲಿಸುತ್ತಿದ್ದಂತೆ ಪ್ರತಿ ದೂರು ಸಹ ದಾಖಲಾಗಿದ್ದು ನಾಯಿಯ ಕಳೆಬರಹವನ್ನು ಅಂಕೋಲದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Siddaramaiah: ಕಾಳಿದಾಸನ ನಾಲಿಗೆ ಮೇಲೆ ಬ್ರಹ್ಮ ಅಕ್ಷರ ಬರೆದ ಅನ್ನೋದನ್ನೆಲ್ಲಾ ನಂಬಬೇಡಿ: ಸಿಎಂ ಸಿದ್ದರಾಮಯ್ಯ

ಕೆನಡಾದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಭಾರತದ ವಿದ್ಯಾರ್ಥಿನಿಗೆ ಗುಂಡು ತಗುಲಿ ಸಾವು

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ: ಮಿಥುನ್ ಚಕ್ರವರ್ತಿ

India's Project Cheetah: Botswanaನಿಂದ ಮುಂದಿನ ತಿಂಗಳೇ ಬರಲಿದೆ ನಾಲ್ಕು ಚೀತಾ

ಮುತ್ತಪ್ಪ ರೈ ಮಗ ರಿಕ್ಕಿ ಮೇಲೆ ಗುಂಡಿನ ದಾಳಿ: ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಪ್ರಕಾಶ್ ರೈ

ಮುಂದಿನ ಸುದ್ದಿ
Show comments