Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಒಬ್ಬ ಹುಚ್ಚ, ಕಾಂಗ್ರೆಸ್ ಮುನ್ನಡೆಸಲು ನಾಲಾಯಕ್ ಎಂದವರು ಯಾರು ಗೊತ್ತಾ?

ರಾಹುಲ್ ಗಾಂಧಿ ಒಬ್ಬ ಹುಚ್ಚ, ಕಾಂಗ್ರೆಸ್ ಮುನ್ನಡೆಸಲು ನಾಲಾಯಕ್ ಎಂದವರು ಯಾರು ಗೊತ್ತಾ?
ಲಕ್ನೋ , ಶನಿವಾರ, 29 ಸೆಪ್ಟಂಬರ್ 2018 (08:38 IST)
ಲಕ್ನೋ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒಬ್ಬ ಹುಚ್ಚ, ಅವರು ಕಾಂಗ್ರೆಸ್ ಮುನ್ನಡೆಸಲು ನಾಲಾಯಕ್ ಮನುಷ್ಯ ಎಂದು ಉತ್ತರ ಪ್ರದೇಶ ಸರ್ಕಾರದ ಸಚಿವರೊಬ್ಬರು ಹೇಳಿದ್ದಾರೆ.

ಉತ್ತರ ಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿರುವ ಸ್ವಾಮಿ ಪ್ರಸಾದ್ ಮೌರ್ಯ ಈ ರೀತಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನಂತಹ ದೇಶದ ಅತ್ಯಂತ ಹಳೆಯ ಪಕ್ಷವನ್ನು ಮುನ್ನಡೆಸಲು ರಾಹುಲ್ ಗಾಂಧಿಗೆ ಯೋಗ್ಯತೆಯಿಲ್ಲ ಎಂದು ಅವರು ಟೀಕಿಸಿದ್ದಾರೆ.

‘ರಾಹುಲ್ ಗಾಂಧಿ ಪ್ರಧಾನಿ ಮೋದಿಯವರನ್ನು ಆಗಾಗ ಕಳ್ಳ ಎಂದು ಕರೆಯುತ್ತಲೇ ಇದ್ದಾರೆ. ಆದರೆ ಮೋದಿಯವರ ಪ್ರಬುದ್ಧತೆ ನೋಡಿ, ಅವರು ಇಂತಹದ್ದಕ್ಕೆಲ್ಲಾ ಪ್ರತಿಕ್ರಿಯೆಯನ್ನೇ ನೀಡಿಲ್ಲ. ದೇಶದ ಪ್ರಧಾನಿ ಬಗ್ಗೆ ಹೀಗೆಲ್ಲಾ ಹೇಳುವುದಕ್ಕೆ ಅವರಿಗೆ ನಾಚಿಕೆಯಾಗಬೇಕು’ ಎಂದು ಸ್ವಾಮಿ ಪ್ರಸಾದ್ ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸಂಪೂರ್ಣ ಸಸ್ಯಾಹಾರಿ, ಧೂಮಪಾನ, ಮದ್ಯಪಾನ ಮಾಡದ ಪೊಲೀಸರಿಗೆ ಈಗ ಡಿಮ್ಯಾಂಡ್!