Webdunia - Bharat's app for daily news and videos

Install App

ಯುಪಿಎಸ್‌ಸಿ ಪರೀಕ್ಷೆಯಲ್ಲಿ 95ನೇ ರ್ಯಾಂಕ್ ಪಡೆದ ಬೀದರನ ಹೆಮ್ಮೆಯ ಪುತ್ರ

Webdunia
ಶನಿವಾರ, 28 ಏಪ್ರಿಲ್ 2018 (12:54 IST)
ಭಾರತೀಯ ನಾಗರಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ದೇಶಕ್ಕೆ 95ನೇ ರ್ಯಾಂಕ್ ಹಾಗೂ ರಾಜ್ಯಕ್ಕೆ ಮೊದಲ ಸ್ಥಾನ ಬೀದರ್ ನ ರಾಹುಲ್ ಸಿಂಧೆ ಪಡೆದಿದ್ದಾರೆ.
ಜಿಲ್ಲೆಯ ವಯಸ್ಕರ ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿ ನಿವೃತ್ತರಾಗಿರುವ ಶಂಕರರಾವ್ ಶಿಂಧೆ ಹಾಗೂ ವಂದನಾ ಶಿಂಧೆ ಅವರ ಪುತ್ರ ರಾಹುಲ್ ಶಿಂಧೆ ಅವರಾಗಿದ್ದಾರೆ. 
 
ಬೀದರ್ ನಗರದ ಗುರುನಾನಕ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವರೆಗೆ  ಹೈದ್ರಾಬಾದ್‌ನ ಫಿಟ್ಜಿಿಯಲ್ಲಿ ಪಿಯುಸಿ ಮುಗಿಸಿರುವ ರಾಹುಲ್ ಶಿಂಧೆ ಮುಂಬೈಯಲ್ಲಿ ಐಐಟಿಯನ್ನೂ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. 
 
ಐಐಟಿ ಮುಗಿಸಿದಾಕ್ಷಣ ಅರಸಿ ಬಂದ ಸೌದಿ ಅರೇಬಿಯಾದ ಅಂತರರಾಷ್ಟ್ರೀಯ ಕಂಪನಿಯೊಂದರ ಹುದ್ದೆಯನ್ನು ತಂದೆಯ ಸಲಹೆಯಂತೆ ಕೈಬಿಟ್ಟು, ಜಿಲ್ಲಾಾಧಿಕಾರಿಯಾಗುವಂಥ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದರು.
 
ಕಳೆದ ವರ್ಷ 2017ರಲ್ಲಿಯೇ ಭಾರತೀಯ ನಾಗರಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ರ್ಯಾಾಂಕ್ ಗಳಿಸುವ ಮೂಲಕ ಐಎಎಸ್ ಅಧಿಕಾರಿಯಾಗುವ ಭಾಗ್ಯ ಪಡೆದಿದ್ದ ಅವರು ಡೆಹ್ರಾಡೂನ್‌ನಲ್ಲಿ ತರಬೇತಿ ಮುಗಿಸುವ ಹಂತದಲ್ಲಿದ್ದಾರೆ.
 
ಆದರೆ ಮತ್ತೊಂದು ಬಾರಿ ಯುಪಿಎಸ್‌ಸಿ ಪರೀಕ್ಷೆ ಎದುರಿಸಿ ಇದೀಗ ಐಎಎಸ್ ಅಧಿಕಾರಿಯಾಗುವ ಪಾಲಕರ ಕನಸು ಈಡೇರಿಸುವಂಥ ರ್ಯಾಂಕ್ ಪಡೆದಿದ್ದು ಇಡೀ ಕುಟುಂಬದಲ್ಲಿ ಹರ್ಷ ಮೂಡಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಾಲಿವುಡ್ ಸಿನಿಮಾವಲ್ಲ ಇದು ರಿಯಲ್…ನೇಪಾಳದಲ್ಲಿ ಇದ್ದಕ್ಕಿದ್ದಂತೆ ರಾಕ್ಷಸನಂತೆ ನುಗ್ಗಿಬಂದ ಅಲೆಗಳು Shocking video

ದೆಹಲಿ ತಲುಪಿದ ಸಚಿವ ಬಿ ನಾಗೇಂದ್ರ, ಮುಂದಿನ ನಡೆ ನಿಗೂಢ

ದಿಡೀರ್ ಸಿಎಂ ಡಿಕೆ ಶಿವಕುಮಾರ್ ದೆಹಲಿಗೆ: ಈ ಭೇಟಿಯ ಹಿಂದಿದೆ ಮಹತ್ವದ ಕಾರಣ

ಪಾರ್ಸೆಲ್ ತಂದಿದ್ದು ಲೇಟ್ ಆಯ್ತು ಎಂದು ಹಲ್ಲೆ ಮಾಡಿದ ಮಹಿಳೆ: ನೋಡುವಷ್ಟು ನೋಡಿದ ಡೆಲಿವರಿ ಬಾಯ್ ಕೊನೆಗೆ ಮಾಡಿದ್ದೇನು Video

Video: ಗಂಡನನ್ನೇ ಉಸಿರುಗಟ್ಟಿಸಿ ಕೊಂದ ಹೆಂಡತಿ: ಶಾಕಿಂಗ್ ಘಟನೆಯ ವಿಡಿಯೋ ವೈರಲ್

ಮುಂದಿನ ಸುದ್ದಿ
Show comments