Select Your Language

Notifications

webdunia
webdunia
webdunia
webdunia

ಹಸೆಮಣೆ ಏರಬೇಕಿದ್ದ ಜೋಡಿ ಮಸಣ ಸೇರಿತು…

ಹಸೆಮಣೆ ಏರಬೇಕಿದ್ದ ಜೋಡಿ ಮಸಣ ಸೇರಿತು…
ಬೀದರ್ , ಶನಿವಾರ, 4 ನವೆಂಬರ್ 2017 (17:35 IST)
ಬೀದರ್: ಕಾರು ಪಲ್ಟಿಯಾದ ಪರಿಣಾಮ ಹಸೆಮಣೆ ಏರಬೇಕಿದ್ದ ಜೋಡಿ ಸೇರಿ ನಾಲ್ವರು ದುರ್ಮರಣಕ್ಕೀಡಾಗಿರುವ ಘಟನೆ ಹುಮ್ನಾಬಾದ್ ತಾಲೂಕು ಬಸವಂತಪುರ ಬಳಿ ನಡೆದಿದೆ.

ಪ್ರಿಯಾ(22), ಹಣಮಂತ(23), ಸಾವಿತ್ರಿ(45), ಅನುಸೂಯ(50) ಮೃತಪಟ್ಟಿದ್ದು, ಸುಲೋಚನಾ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಉದೀರ ನಿವಾಸಿಗಳು ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಮೃತಪಟ್ಟ ಪ್ರಿಯಾ ಹಾಗೂ ಹಣಮಂತಗೆ ಮುಂದಿನ ತಿಂಗಳು ಮದುವೆ ನಿಗದಿಯಾಗಿತ್ತು. ಹೀಗಾಗಿ ಕಲಬುರಗಿ ಜಿಲ್ಲೆಯ ದೇವಲಗಾಣಗಾಪುರದಲ್ಲಿರುವ ದತ್ತ ದಿಗಂಬರ ದರ್ಶನಕ್ಕೆ ತೆರಳಿದ್ರು. ದರ್ಶನ ಮಾಡಿ ವಾಪಸ್ ಬರುತ್ತಿರುವಾಗ ಹುಮ್ನಾಬಾದ್ ತಾಲೂಕು ಬಸವಂತಪುರ ಬಳಿ ಈ ಘಟನೆ ನಡೆದಿದೆ. ಈ ಕುರಿತು ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿಯರ ಮೇಲೆ ಆ್ಯಸಿಡ್ ಎರಚುವವರು ಅಲ್ಲಾವುದ್ದೀನ್ ಖಿಲ್ಜಿಯಂತವರು: ಉಮಾಭಾರತಿ