ಸೀತಾರಾಮ ಧಾರವಾಹಿ ಬಿಟ್ಟೇ ಬಿಟ್ರಾ ಅಶೋಕ್: ಅಭಿಮಾನಿಗಳಿಗೆ ಹೇಳಿದ್ದೇನು

Krishnaveni K
ಬುಧವಾರ, 24 ಜುಲೈ 2024 (08:43 IST)
Photo Credit: Instagram
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ಸೀತಾರಾಮದಲ್ಲಿ ನಾಯಕ-ನಾಯಕಿಯಷ್ಟೇ ಜನಪ್ರಿಯವಾಗಿರುವ ಇನ್ನೊಂದು ಪಾತ್ರವೆಂದರೆ ಅಶೋಕ್. ಕೆಲವು ದಿನಗಳಿಂದ ಅವರು ಧಾರವಾಹಿಯಲ್ಲಿ ನಾಪತ್ತೆಯಾಗಿದ್ದಾರೆ. ಇದಕ್ಕೀಗ ಅವರೇ ಸ್ಪಷ್ಟನೆ ನೀಡಿದ್ದಾರೆ.

ಸೀತಾರಾಮ ಧಾರವಾಹಿಯಲ್ಲಿ ನಟ ಅಶೋಕ್ ನಾಯಕನ ಸ್ನೇಹಿತನ ಪಾತ್ರ ಮಾಡುತ್ತಿದ್ದಾರೆ. ಧಾರವಾಹಿಯಲ್ಲೂ ಅಶೋಕ್ ಎಂದೇ ಅವರ ಪಾತ್ರದ ಹೆಸರು. ಇತ್ತೀಚೆಗಷ್ಟೇ ಸೀತಾರಾಮ ಧಾರವಾಹಿಯಲ್ಲಿ ನಾಯಕ ರಾಮ್ ಮತ್ತು ನಾಯಕಿ ಸೀತಾ ಮದುವೆ ಎಪಿಸೋಡ್ ಗಳು ಪ್ರಸಾರವಾಗಿದ್ದವು. ಈ ಎಪಿಸೋಡ್ ಗಳ ಬಳಿಕ ಅಶೋಕ್ ಕಳೆದ ಒಂದು ವಾರದಿಂದ ಧಾರವಾಹಿಯಲ್ಲಿ ಕಾಣಿಸಿಕೊಂಡೇ ಇಲ್ಲ.

ಮದುವೆ ಮುಗಿಸಿ ರಾಮ್-ಸೀತಾ ಮನೆಗೆ ಬಂದಾಗ ಅಶೋಕ್ ವಿದೇಶಕ್ಕೆ ಹೋಗಿದ್ದಾನೆ ಎಂದು ತೋರಿಸಲಾಗಿತ್ತು. ಇದಾದ ಬಳಿಕ ಕೆಲವು ಎಪಿಸೋಡ್ ಗಳಿಂದ ಅಶೋಕ್ ಇರಲಿಲ್ಲ. ಇದನ್ನು ನೋಡಿ ಅಶೋಕ್ ಸೀರಿಯಲ್ ಬಿಟ್ಟೇ ಬಿಟ್ರಾ ಎಂದು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು.

ಅಶೋಕ್ ಇಲ್ಲದೇ ಸೀರಿಯಲ್ ನೋಡಲು ಬೋರ್. ರಾಮ್ ಪಾತ್ರಕ್ಕೆ ಒಂದು ತೂಕ ಬರಬೇಕೆಂದರೆ ಅಶೋಕ್ ಇರಲೇಬೇಕು. ದಯವಿಟ್ಟು ಅಶೋಕ್ ರನ್ನು ರಿಪ್ಲೇಸ್ ಮಾಡಬೇಡಿ ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದರು. ಇದೀಗ ವೀಕ್ಷಕರ ಬೇಡಿಕೆಗೆ ಕೊನೆಗೂ ಅಶೋಕ್ ಸ್ಪಂದಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ಕೊಟ್ಟಿರುವ ಅಶೋಕ್, ನಾನು ಸೀರಿಯಲ್ ಬಿಟ್ಟಿಲ್ಲ. ನನ್ನನ್ನು ಮುಂದಿನ ಎಪಿಸೋಡ್ ಗಳಲ್ಲಿ ನೋಡಬಹುದು ಎಂದಿದ್ದಾರೆ. ಅಶೋಕ್ ಕೊಟ್ಟ ಉತ್ತರ ಅಭಿಮಾನಿಗಳಿಗೂ ಸಮಾಧಾನ ತಂದಿರಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ವಾರಣಾಸಿ ಮೂವಿ ಈವೆಂಟ್ ನಲ್ಲಿ ಆಂಜನೇಯ ಸ್ವಾಮಿಗೆ ಬೈದ ನಿರ್ದೇಶಕ ರಾಜಮೌಳಿ: ವಿವಾದ video

ಮನೆಗೆ ಗುಂಡೇಟು ಬೆನ್ನಲ್ಲೇ ನಟಿ ದಿಶಾ ಪಟಾನಿ ತಂದೆಗೆ ಶಸ್ತ್ರಾಸ್ತ್ರ ಪರವಾನಿಗೆ

ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್‌ಗೆ ಹೊಸ ಜವಾಬ್ದಾರಿ

ಕಿಚ್ಚನ್ ಮಾತು ಕೇಳಿ, ಗಿಲ್ಲಿ, ರಕ್ಷಿತಾಗೆ ಕ್ಲಾಸ್ ಪಕ್ಕಾ ಎಂದಾ ನೆಟ್ಟಿಗರು

ಮುಂದಿನ ಸುದ್ದಿ
Show comments