Select Your Language

Notifications

webdunia
webdunia
webdunia
webdunia

‘ಅಗ್ನಿಸಾಕ್ಷಿಯ’ ಸಿದ್ಧಾರ್ಥ್ ಸನ್ನಿಧಿಗೆ ಮೋಸ ಮಾಡಿದ್ರಂತೆ!

‘ಅಗ್ನಿಸಾಕ್ಷಿಯ’ ಸಿದ್ಧಾರ್ಥ್ ಸನ್ನಿಧಿಗೆ ಮೋಸ ಮಾಡಿದ್ರಂತೆ!
ಬೆಂಗಳೂರು , ಭಾನುವಾರ, 3 ಫೆಬ್ರವರಿ 2019 (09:12 IST)
ಬೆಂಗಳೂರು: ಕಿರುತೆರೆಯ ಮೋಸ್ಟ್ ವಾಂಟೆಡ್ ಬ್ಯಾಚುಲರ್, ಡಿಂಪಲ್ ಸ್ಟಾರ್  ‘ಅಗ್ನಿಸಾಕ್ಷಿ’ ಧಾರವಾಹಿಯ ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಮದುವೆಯಾಗುತ್ತಿರುವ ಸುದ್ದಿ ಈಗಾಗಲೇ ಓದಿದ್ದೀರಿ. ಆದರೆ ಅವರ ಅಭಿಮಾನಿಗಳು ಭಾರೀ ಬೇಸರದಲ್ಲಿದ್ದಾರೆ.


ಸಿದ್ಧಾರ್ಥ್ ಮದುವೆ ಸುದ್ದಿ ಕೇಳಿ ಅಭಿಮಾನಿಗಳು ನೀವು ಹೀಗೆ ಮೋಸ ಮಾಡಬಾರದಿತ್ತು ಎಂದು ಆಕ್ಷೇಪಿಸುತ್ತಿದ್ದಾರೆ. ಕಿರುತೆರೆಯ ಮೋಸ್ಟ್ ಫೇವರಿಟ್ ಜೋಡಿಯಾಗಿದ್ದ ಸಿದ್ಧಾರ್ಥ್-ಸನ್ನಿಧಿ ನಿಜ ಜೀವನದಲ್ಲೂ ಮದುವೆಯಾಗಬಹುದು ಎಂದೇ ಅಭಿಮಾನಿಗಳ ಆಶಯ ಮತ್ತು ನಿರೀಕ್ಷೆಯಾಗಿತ್ತು. ಇಬ್ಬರ ನಡುವಿನ ಕೆಮಿಸ್ಟ್ರಿ ಆ ಮಟ್ಟಿಗಿತ್ತು. ಎಷ್ಟೋ ಬಾರಿ ಇಬ್ಬರೂ ನಮ್ಮ ನಡುವೆ ಲವ್ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

ಹಾಗಿದ್ದರೂ ಅಭಿಮಾನಿಗಳಿಗೆ ಇವರೇ ರಿಯಲ್ ಲೈಫ್ ಲ್ಲೂ ಜೋಡಿಯಾಗಬೇಕೆಂಬ ಆಸೆ ಕಡಿಮೆಯಾಗಿರಲಿಲ್ಲ. ಆದರೆ ಇದೀಗ ವಿಜಯ್ ಸೂರ್ಯ ಚೈತ್ರಾ ಎನ್ನುವ ತಮ್ಮ ಸಂಬಂಧಿಯೊಬ್ಬರೊಂದಿಗೆ ಮದುವೆಯಾಗುತ್ತಿರುವ ಸುದ್ದಿ ಕೇಳಿ ಅಭಿಮಾನಿಗಳು ಸನ್ನಿಧಿಗೆ ನೀವು ಹೀಗೆ ಮೋಸ ಮಾಡಬಾರದಿತ್ತು. ನಮಗೆಲ್ಲಾ ಹೀಗೆ ನಿರಾಸೆ ಮಾಡಬಾರದಿತ್ತು ಎನ್ನುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಇಬ್ಬರ ಆನ್ ಸ್ಕ್ರೀನ್ ಕ್ಷಣಗಳ ಫೋಟೋ ಹಾಕಿ ನೀವೇ ರಿಯಲ್ ಲೈಫ್ ನಲ್ಲಿ ಜೋಡಿಯಾಗಿದ್ದರೆ ನಮಗೆ ಸಂತೋಷವಾಗುತ್ತಿತ್ತು ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ, ನೀವು ಯಾರನ್ನೇ ಮದುವೆಯಾದರೂ ನಮಗೆ ಮಾತ್ರ ನೀವು ಸನ್ನಿಧಿಯೇ ಬೆಸ್ಟ್ ಪೇರ್ ಎನ್ನುತ್ತಿದ್ದಾರೆ. ಫೆಬ್ರವರಿ 14 ರಂದು ವಿಜಯ್, ತಮ್ಮ ಸಂಬಂಧಿ ಚೈತ್ರಾ ಜತೆಗೆ ಹಸೆಮಣೆ ಏರುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಆನ್ ಲೈನ್ ಬುಕಿಂಗ್ ಶುರುವಾದ ಗಳಿಗೆಯಲ್ಲೇ ದಾಖಲೆ ಮಾಡಿದ ನಟಸಾರ್ವಭೌಮ