ಈ ವೀಕೆಂಡ್ ಯಾವ ಚಾನೆಲ್ ತಿರುಗಿಸಿದ್ರೂ ಹಬ್ಬನೇ!

Webdunia
ಶುಕ್ರವಾರ, 29 ಮಾರ್ಚ್ 2019 (08:52 IST)
ಬೆಂಗಳೂರು: ನಾಳೆ ಮತ್ತು ನಾಡಿದ್ದು ಕನ್ನಡ ಕಿರುತೆರೆ ವೀಕ್ಷಕರಿಗೆ ಫುಲ್ ಹಬ್ಬ. ಕಾರಣ ಕನ್ನಡದ ನಂ.1 ಮತ್ತು ನಂ.2 ನೇ ಸ್ಥಾನದಲ್ಲಿರುವ ಎರಡು ವಾಹಿನಿಗಳಲ್ಲಿ ಪ್ರೇಕ್ಷಕರಿಗೆ ಭರ್ಜರಿ ರಸದೌತಣ ನೀಡುವ ಕಾರ್ಯಕ್ರಮ ಮೂಡಿಬರಲಿದೆ.


ಜೀ ಕನ್ನಡದಲ್ಲಿ ನಾಳೆ ಮತ್ತು ನಾಡಿದ್ದು ಸಂಜೆ 7 ಗಂಟೆಯಿಂದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಸಮಾರಂಭದ ಪ್ರಸಾರ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ನಾಡಿನ ವಿವಿಧ ಕ್ಷೇತ್ರದ ಗಣ್ಯರಿಗೆ ಪ್ರಶಸ್ತಿ ನೀಡಲಾಗಿದೆ ಮತ್ತು ಪ್ರೇಕ್ಷಕರಿಗೆ ಮುದ ನೀಡುವಂತಹ ತಾರೆಯರ ಮನರಂಜನಾ ಕಾರ್ಯಕ್ರಮಗಳೂ ಇವೆ.

ಇನ್ನು, ಕಲರ್ಸ್ ಕನ್ನಡ ಸ್ಯಾಂಡಲ್ ವುಡ್ ಕಂಡ ಅತ್ಯಂತ ಯಶಸ್ವೀ ಚಿತ್ರ ‘ಕೆಜಿಎಫ್’ ಪ್ರಸಾರ ಮಾಡಲು ಇದೇ ಶನಿವಾರ 7 ಗಂಟೆಗೆ ಮುಹೂರ್ತ ನಿಗದಿ ಮಾಡಿದೆ. ಇದೇ ಮೊದಲ ಬಾರಿಗೆ ಕೆಜಿಎಫ್ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದು, ರಾಕಿ ಬಾಯ್ ನ ನೋಡಲು ವೀಕ್ಷಕರು ಉತ್ಸುಕರಾಗಿದ್ದಾರೆ. ಹಾಗಾಗಿ ಈ ವೀಕೆಂಡ್ ವೀಕ್ಷಕರಿಗೆ ಹಬ್ಬವಾಗುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದಿಢೀರನೇ ರಜತ್‌ ವಿರುದ್ಧ ಠಾಣೆ ಮೆಟ್ಟಿಲೇರಿದ ಡಾಗ್‌ ಸತೀಶ್‌, ಪ್ರಕರಣದ ಮಾಹಿತಿ ಇಲ್ಲಿದೆ

Video: ಯಶ್ ಜೊತೆ ರಾಧಿಕಾ ಪಂಡಿತ್ ಕೂಡಾ ಈಗ ಸಖತ್ ಸ್ಟೈಲಿಶ್: ಬರ್ತ್ ಡೇಗೆ ಎಲ್ಲಿದ್ದಾರೆ ರಾಕಿಂಗ್ ಜೋಡಿ

ವಿಚ್ಛೇಧನ ಕೋರಿ ಕೋರ್ಟ್ ಮೆಟ್ಟಿಲೇರಿರುವ ಸಂಗೀತಾಗೆ ವಿಜಯ್ ನೀಡಲಿರುವ ಜೀವನಾಂಶ ಕೇಳಿದ್ರೆ ಶಾಕ್

ಅಯೋದ್ಯೆಯಲ್ಲಿ ಮತ್ತೇ ₹35ಕೋಟಿ ಭೂಮಿ ಖರೀದಿಸಿದ ಅಮಿತಾಬ್ ಬಚ್ಚನ್

ಪತ್ನಿ ಜತೆಗಿನ ವಿಚ್ಛೇಧನ ಬಳಿಕ ನಟಿ ತ್ರಿಶಾ ಜತೆಗೆ ಮ್ಯಾಚಿಂಗ್ ಡ್ರೆಸ್‌ನಲ್ಲಿ ಒಟ್ಟಿಗೆ ಬಂದ ವಿಜಯ್‌, Video

ಮುಂದಿನ ಸುದ್ದಿ
Show comments