Webdunia - Bharat's app for daily news and videos

Install App

ಲಾಕ್ ಡೌನ್ ಹೊಡೆತಕ್ಕೆ ಸಿಕ್ಕ ಧಾರವಾಹಿ ಅರ್ಧಕ್ಕೇ ಸ್ಥಗಿತ

Webdunia
ಶುಕ್ರವಾರ, 14 ಮೇ 2021 (09:10 IST)
ಬೆಂಗಳೂರು: ಕಳೆದ ಬಾರಿ ಲಾಕ್ ಡೌನ್ ನಲ್ಲಿ ಸಾಕಷ್ಟು ಧಾರವಾಹಿಗಳು ಆರ್ಥಿಕ ಕುಸಿತದಿಂದ ಅರ್ಧಕ್ಕೇ ಸ್ಥಗಿತಗೊಂಡಿದ್ದವು. ಈ ಬಾರಿ ಮತ್ತೆ ಅದು ಸಣ್ಣ ಮಟ್ಟಿನಲ್ಲಿ ಪುನಾರವರ್ತನೆಯಾಗಲಿದೆ.


ಈಗಾಗಲೇ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ನಿರ್ಮಾಪಕ, ನಿರ್ದೇಶಕ ರಾಮ್ ಜಿ  ಅವರ ‘ರುಕ್ಕು’ ಧಾರವಾಹಿ ಅರ್ಧಕ್ಕೇ ಪ್ರಸಾರ ಕೊನೆಗೊಳಿಸುತ್ತಿದೆ. ಈ ವಾರ ಕೊನೆಯ ಸಂಚಿಕೆ ಪ್ರಸಾರವಾಗುತ್ತಿದೆ. ಈ ಮೂಲಕ ಈ ಬಾರಿಯ ಲಾಕ್ ಡೌನ್ ಹೊಡೆತದಿಂದಾಗಿ ಅರ್ಧಕ್ಕೇ ಪ್ರಸಾರ ನಿಲ್ಲಿಸುತ್ತಿರುವ ಮೊದಲ ಧಾರವಾಹಿ ಇದಾಗಿದೆ.

ಲಾಕ್ ಡೌನ್ ಜೊತೆಗೆ ಟಿಆರ್ ಪಿ ಇಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಧಾರವಾಹಿಗಳು ಸದ್ದಿಲ್ಲದೇ ತೆರೆ ಮರೆಗೆ ಸರಿಯುತ್ತವೆ. ಆದರೆ ಈ ಬಾರಿ ಲಾಕ್ ಡೌನ್ ಬಗ್ಗೆ ಮೊದಲೇ ಸೂಚನೆ ಇದ್ದಿದ್ದರಿಂದ ಹಲವಾರು ಧಾರವಾಹಿಗಳು ಸಾಕಷ್ಟು ಬ್ಯಾಂಕಿಂಗ್ ಎಪಿಸೋಡ್ ಮಾಡಿಕೊಂಡಿದ್ದವು. ಹಾಗಿದ್ದರೂ ಈಗಾಗಲೇ ಕಡಿಮೆ ಟಿಆರ್ ಪಿ ಇದ್ದಿದ್ದ ಧಾರವಾಹಿಗಳ ಕತೆ ಏನಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments