Webdunia - Bharat's app for daily news and videos

Install App

ಪುನೀತ್, ಸುದೀಪ್ ರಂತೆ ಧಾರವಾಹಿಗೆ ನಿರ್ಮಾಪಕರಾದ ರಮೇಶ್ ಅರವಿಂದ್

Webdunia
ಶನಿವಾರ, 2 ಮಾರ್ಚ್ 2019 (09:45 IST)
ಬೆಂಗಳೂರು: ಸ್ಪುರದ್ರೂಪಿ ನಟ, ನಿರ್ದೇಶಕ ರಮೇಶ್ ಅರವಿಂದ್ ಏನೇ ಮಾಡುವುದಿದ್ದರೂ ಪರ್ಫೆಕ್ಟ್ ಆಗಿ ಮಾಡುತ್ತಾರೆ. ಇದೀಗ ನಿರ್ದೇಶಕರಾಗಿ ಪರ್ಫೆಕ್ಟ್ ಎನಿಸಿಕೊಂಡ ರಮೇಶ್, ನಿರ್ಮಾಪಕರಾಗುತ್ತಿದ್ದಾರೆ.


ಅದೂ ಕಿರುತೆರೆಯಲ್ಲಿ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ‘ನಂದಿನಿ’ ಧಾರವಾಹಿಗೆ ಇನ್ನು ರಮೇಶ್ ಅರವಿಂದ್ ನಿರ್ಮಾಪಕ. ಅವರ ‘ವಂದನಾ’ ಮೀಡಿಯಾ ಕ್ರಿಯೇಷನ್ಸ ನಿರ್ಮಾಣ ಸಂಸ್ಥೆಯಡಿಯಲ್ಲಿ ಈ ಧಾರವಾಹಿಯ ಮುಂದಿನ ಭಾಗವನ್ನು ರಮೇಶ್ ಅರವಿಂದ್ ನಿರ್ಮಿಸಲಿದ್ದಾರೆ.

ಈಗಾಗಲೇ ನಂದಿನಿ ಧಾರವಾಹಿ ತನ್ನ ವಿಶಿಷ್ಟ ಗ್ರಾಫಿಕ್ಸ್, ವಿಶ್ಯುವಲ್ಸ್ ನಿಂದಾಗಿ ಜನಪ್ರಿಯವಾಗಿದೆ. ಕಿರುತೆರೆ ಲೋಕಕ್ಕೆ ನಿರ್ಮಾಪಕನಾಗಿ ಮೊದಲ ಬಾರಿಗೆ ಎಂಟ್ರಿ ಕೊಡುತ್ತಿರುವ ರಮೇಶ್ ಅರವಿಂದ್ ನಂದಿನಿ ಧಾರವಾಹಿಯ ಫ್ಯಾಂಟಸಿ ಕತೆಯನ್ನು ಮೆಚ್ಚಿ ನಿರ್ಮಾಣಕ್ಕಿಳಿದಿದ್ದಾರಂತೆ. ಅವರಿಗೆ ಇಂತಹ ಸೂಪರ್ ನ್ಯಾಚುರಲ್ ವಿಚಾರಗಳಿರುವ ಕತೆಗಳೆಂದರೆ ಬಹಳ ಇಷ್ಟವಂತೆ. ಅದೇ ಕಾರಣಕ್ಕೆ ನಿರ್ಮಾಣ ಮಾಡುತ್ತಿದ್ದೇನೆ ಎಂದಿದ್ದಾರೆ ರಮೇಶ್ ಅರವಿಂದ್. ಈಗಾಗಲೇ ಕಿಚ್ಚ ಸುದೀಪ್ ವಾರಸ್ದಾರ ಎನ್ನುವ ಧಾರವಾಹಿ ನಿರ್ಮಿಸಿದ್ದರು. ಪುನೀತ್ ರಾಜ್ ಕುಮಾರ್ ಕೂಡ ತಮ್ಮ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ಧಾರವಾಹಿ ನಿರ್ಮಾಣ ಮಾಡಿದ್ದರು. ಈಗ ರಮೇಶ್ ಅರವಿಂದ್ ಸರದಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments