Webdunia - Bharat's app for daily news and videos

Install App

ಪುಟ್ಟಗೌರಿ ಮದುವೆಗೆ ಅಭಿಮಾನಿಗಳು ತಮಾಷೆ ಮಾಡಿದರೂ ಡೋಂಟ್ ಕೇರ್ ಎಂದ ನಿರ್ದೇಶಕ

Webdunia
ಗುರುವಾರ, 19 ಅಕ್ಟೋಬರ್ 2017 (10:18 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಗೌರಿ ಮದುವೆ ಧಾರವಾಹಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗುತ್ತಿದ್ದರೂ ನಿರ್ದೇಶಕ ರಾಮ್ ಜೀ ಮಾತ್ರ ತಣ್ಣಗಿದ್ದಾರೆ.

 
ಪುಟ್ಟಗೌರಿಯ ಅತಿರೇಕವೆನಿಸುವ ಸಾಹಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮಾಷೆ ಮಾಡಲಾಗುತ್ತಿದೆ. ನಾಯಕಿ ಗೌರಿ ಹುಲಿಯೊಂದಿಗೆ ಸೆಣಸುವುದು, ಅಷ್ಟು ಎತ್ತರದಿಂದ ಬಿದ್ದರೂ ಸ್ವಲ್ಪವೂ ಗಾಯವಾಗದೇ ಇರುವುದು, ಬಿದ್ದ ಮೇಲೂ ಚಪ್ಪಲಿ, ಹೂವು ಕೊಂಚವೂ ಕೊಂಕದೇ ಇರುವುದು, ಹಾವಿನೊಂದಿಗೆ ಸೆಣಸುವುದು ಇತ್ಯಾದಿ ಬಗ್ಗೆ  ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ.

ಹಾಗಿದ್ದರೂ ಅದಕ್ಕೆಲ್ಲಾ ನಿರ್ದೇಶಕರು ತಲೆಯೇ ಕೆಡಿಸಿಕೊಂಡಿಲ್ಲವಂತೆ. ಈ ರೀತಿ ಅಭಿಮಾನಿಗಳು ಕಾಲೆಳೆಯುತ್ತಿರುವುದು ನಾಲ್ಕನೇ ಬಾರಿ. ಅದನ್ನು ನಾವು ಎಂಜಾಯ್ ಮಾಡುತ್ತಿದ್ದೇವೆ. ನಾಯಕಿ ಪಾತ್ರಧಾರಿಯನ್ನು ಬರಿಗಾಲಲ್ಲಿ ಕಾಡಿನಲ್ಲಿ ಓಡಿಸುವ ಯೋಜನೆ ಹೊಂದಿದ್ದೆವು. ಆದರೆ ಆಕೆ ಕಾಲಿಗೆ ಏಟು ಮಾಡಿಕೊಂಡಳು. ಹಾಗಾಗಿ ಚಪ್ಪಲಿ ಕೊಟ್ಟೆವು. ಇನ್ನು ಆಕೆಯ ಆತ್ಮ ಪರಿಶುದ್ಧವಾಗಿದೆ. ಹಾಗಾಗಿ ಹುಲಿಯೂ ಹೆದರಿ ಓಡಿತು ಎಂದು ತೋರಿಸಿದ್ದೇವಷ್ಟೇ ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ರಾಮ್ ಜಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments