Select Your Language

Notifications

webdunia
webdunia
webdunia
webdunia

ಅಬ್ಬಾ.. ಕೊನೆಗೂ ಮಹೇಶ ಪುಟ್ಟ ಗೌರಿ ಗೂಡು ಬಿಟ್ಟು ಹೊರಬಂದ! ಪುಟ್ಟಗೌರಿಯ ಮಹೇಶನ ಹೊಸ ಅವತಾರ

ಅಬ್ಬಾ.. ಕೊನೆಗೂ ಮಹೇಶ ಪುಟ್ಟ ಗೌರಿ ಗೂಡು ಬಿಟ್ಟು ಹೊರಬಂದ! ಪುಟ್ಟಗೌರಿಯ ಮಹೇಶನ ಹೊಸ ಅವತಾರ
ಬೆಂಗಳೂರು , ಗುರುವಾರ, 28 ಫೆಬ್ರವರಿ 2019 (09:19 IST)
ಬೆಂಗಳೂರು: ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಪುಟ್ಟ ಗೌರಿ ಮದುವೆ ಧಾರವಾಹಿ ಆರಂಭವಾಗಿ ಅದೆಷ್ಟೋ ಕಾಲವಾಯ್ತು. ಇನ್ನೂ ಮುಗಿಯುವ ಸೂಚನೆ ಕಾಣುತ್ತಿಲ್ಲ ಎಂದು ಅಭಿಮಾನಿಗಳು ಟ್ರೋಲ್ ಮಾಡುತ್ತಿರುವಾಗಲೇ ನಾಯಕ ಮಹೇಶ ಹೊಸದೊಂದು ಧಾರವಾಹಿಗೆ ನಾಯಕರಾಗುತ್ತಿದ್ದಾರೆ.


ಪುಟ್ಟಗೌರಿಯ ಮಹೇಶ್ ಅಲಿಯಾಸ್ ರಕ್ಷಿತ್ ಇದೀಗ ಜೀ ಕನ್ನಡ ವಾಹಿನಿಯ ಧಾರವಾಹಿಯೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಕ್ಷಿತ್ ‘ಗಟ್ಟಿಮೇಳ’ ಎನ್ನುವ ಧಾರವಾಹಿಯಲ್ಲಿ ಅಭಿನಯಿಸಲಿದ್ದು, ಇದು ಮಾರ್ಚ್ 11 ರಿಂದ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿದೆ.

ಅದೇನೇ ಇರಲಿ, ಮಹೇಶನ ಎಂಟ್ರಿ ಈಗಾಗಲೇ ಜೀ ಕನ್ನಡದ ‘ಪಾರು’ ಧಾರವಾಹಿ ಮೂಲಕ ಆಗಿದೆ. ಹೊಸ ಧಾರವಾಹಿಯಲ್ಲಿ ಉದ್ಯಮಿ ವೇದಾಂತ್ ವಸಿಷ್ಠ ಆಗಿ ಕಾಣಿಸಿಕೊಳ್ಳುತ್ತಿರುವ ಮಹೇಶನ ಎಂಟ್ರಿ ನೋಡಿ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಾರೆ.

ಅತ್ತ ಕಡೆ ಗೌರಿ, ಇತ್ತ ಕಡೆ ಹಿಮ ಕೈಯಲ್ಲಿ ಸಿಕ್ಕು ಒದ್ದಾಡಿ ಮಹೇಶ ಇಲ್ಲಿಗೆ ಬಂದ ಎಂದು ಹಲವರು ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಕೆಲವರು ಅಂತೂ ಪುಟ್ಟ ಗೌರಿಯಿಂದ ಹೊರಬಂದರು ಎನ್ನುತ್ತಿದ್ದಾರೆ. ಮತ್ತೆ ಕೆಲವರು ರಕ್ಷಿತ್ ಹೊಸ ಲುಕ್ ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಜಿಕಲ್ ಸ್ಟ್ರೈಕ್ ದಿನ ಇಡೀ ರಾತ್ರಿ ನಿದ್ರೆಗೆಟ್ಟಿದ್ದ ಪ್ರಧಾನಿ ಮೋದಿ ಟ್ರೋಲ್ ಮಾಡಿದ ನಟಿ ಸ್ವರ ಭಾಸ್ಕರ್