Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ: ನುಡಿದಂತೆ ನಡೆಯುತ್ತಾರಾ ಸುದೀಪ್?

ಬಿಗ್ ಬಾಸ್ ಕನ್ನಡ: ನುಡಿದಂತೆ ನಡೆಯುತ್ತಾರಾ ಸುದೀಪ್?
Bangalore , ಶನಿವಾರ, 19 ನವೆಂಬರ್ 2016 (15:17 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಮನೆಯಲ್ಲಿ ಪ್ರಥಮ್ ಮೇಲೆ ಹುಚ್ಚ ವೆಂಕಟ್ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುನಿಸಿಕೊಂಡಿದ್ದ ಸುದೀಪ್ ಕಾರ್ಯಕ್ರಮ ನಿರೂಪಣೆ ಮಾಡುವುದಿಲ್ಲ ಎಂದಿದ್ದರು. ಇಂದು ಅವರು ಮಾತು ಉಳಿಸಿಕೊಳ್ಳುತ್ತಾರಾ ಅಥವಾ ವಾಹಿನಿ ಮುಖ್ಯಸ್ಥರು ಅವರ ಮನವೊಲಿಸುತ್ತಾರಾ ಕಾದು ನೋಡಬೇಕು.

ಹುಚ್ಚ ವೆಂಕಟ್ ವರ್ತನೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದ ಸುದೀಪ್ ಆತನಿಗೆ ಶಿಕ್ಷೆಯಾಗುವವರೆಗೂ ತಾನು ಬಿಗ್ ಬಾಸ್ ಕಾರ್ಯಕ್ರಮ ನಿರೂಪಿಸುವುದಿಲ್ಲ ಎಂದು ವೀಕ್ಷಕರಿಗೆ ಭರವಸೆ ನೀಡಿದ್ದರು. ಇದನ್ನು ಟ್ವಿಟರ್ ನಲ್ಲಿ ಪ್ರಕಟಿಸಿದ್ದರು.

ಇಂದು ಶನಿವಾರವಾಗಿದ್ದು, ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಈವತ್ತು ಮತ್ತು ನಾಳೆ ಕಿಚ್ಚ ಸುದೀಪ್ ಬಿಗ್ ಬಾಸ್ ಸ್ಪರ್ಧಿಗಳ ಜತೆ ವಾರದ ಕತೆ ಕಿಚ್ಚನ ಜತೆ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಹಾಗಾಗಿ ಇಂದಿನ ಎಪಿಸೋಡ್ ನ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ.  ಮೋಹನ್, ಮಾಳವಿಕಾ, ಪ್ರಥಮ್, ಭುವನ್ ಮತ್ತು ಕಾರುಣ್ಯಾ ರಾಂ ನಾಮಿನೇಟ್ ಆಗಿದ್ದು, ಡೇಂಜರ್ ಝೋನ್ ನಲ್ಲಿದ್ದಾರೆ. ಆದರೆ ಇವರಲ್ಲಿ ಯಾರು ಉಳಿಯುತ್ತಾರೆ, ಯಾರು ಹೊರಹೋಗುತ್ತಾರೆಂದು ಹೇಳಲು ಸುದೀಪ್ ಬರುತ್ತಾರೋ ಅಥವಾ ಸುದೀಪ್ ಬರದೇ ನಾಮಿನೇಟ್ ಆದವರೆಲ್ಲಾ ಈ ವಾರದ ಮಟ್ಟಿಗೆ ಸೇಫ್ ಆಗುತ್ತಾರೋ ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನನ್ನನ್ನು ಕೆಡವುದು ಅಷ್ಟೊಂದು ಸುಲಭವಲ್ಲ ಎಂದ ಮಲ್ಲಿಕಾ ಶೆರಾವತ್