Webdunia - Bharat's app for daily news and videos

Install App

ಬಿಗ್ ಬಾಸ್ ಕನ್ನಡ: ಒಂದು ಸೇಬಿಗಾಗಿ ಮನೆಯೇ ಇಬ್ಬಾಗವಾಯಿತು!

Webdunia
ಶುಕ್ರವಾರ, 25 ಅಕ್ಟೋಬರ್ 2019 (10:39 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ನಿನ್ನೆಯಿಡೀ ಒಂದು ಸೇಬಿಗಾಗಿ ಕಿತ್ತಾಟ ನಡೆದಿದೆ.

 

ಅಡುಗೆ ಮನೆಯ ಇನ್ ಚಾರ್ಜ್ ತೆಗೆದುಕೊಂಡಿರುವ ಸುಜಾತ ಅವರ ಪರ್ಮಿಷನ್ ತೆಗೆದುಕೊಳ್ಳದೇ ಸಹಾಯಕರಾಗಿರುವ ಚಂದನ್ ಆಚಾರ್ ಬಳಿ ಕೇಳಿ ಚೈತ್ರಾ ಕೋಟೂರು ಆಪಲ್ ಸೇವಿಸಿದ್ದು ಮನೆಯಲ್ಲಿ ಕಿತ್ತಾಟಕ್ಕೆ ಕಾರಣವಾಯಿತು. ಬೆಳಿಗ್ಗೆಯಿಂದಲೂ ಇದೇ ವಿಚಾರವಾಗಿ ಕಿರಿ ಕಿರಿ ಆರಂಭವಾಗಿತ್ತು.

ಆದರೆ ಸುಜಾತಗೆ ಈ ವಿಚಾರ ಗೊತ್ತೇ ಇರಲಿಲ್ಲ. ಹೀಗಾಗಿ ಕಾಮನ್ ಸೆನ್ಸ್ ಇಲ್ವಾ? ಯಾಕೆ ಒಪ್ಪಿಗೆ ಕೇಳದೇ ಬೇಕಾಗಿದ್ದನ್ನು ತೆಗೆದು ತಿಂತಾ ಇದ್ದೀರಾ? ಇನ್ನು ಮುಂದೆ ಯಾರೂ ಒಪ್ಪಿಗೆಯಿಲ್ಲದೇ ಅಡುಗೆ ಮನೆ ಪ್ರವೇಶಿಸಬಾರದು ಎಂದರು. ಈ ವೇಳೆ ಚಂದನ್ ನಾನು ಸುಜಾತ ಬಳಿ ಕೇಳಿ ತಿಂದೆ ಎಂದಿದ್ದೆ ಎಂದರು. ಜತೆಗೆ ಚಂದನ್ ಡೀಸೆನ್ಸಿ ಇಲ್ವಾ ಎಂದಿದ್ದು ಚೈತ್ರಾ ಸಿಟ್ಟಿಗೆ ಕಾರಣವಾಯಿತು.

ತೀರಾ ಕೂಗಾಡಿದ ಚೈತ್ರಾ ಬಳಿಕ ಅತ್ತಿದ್ದೂ ಆಯ್ತು, ಮನೆಯವರೆಲ್ಲಾ ಸಮಾಧಾನ ಮಾಡುವ ಸೀನ್ ಕೂಡಾ ಆಯ್ತು. ಹಾಗಿದ್ದರೂ ಯಾಕೋ ದಿನವಿಡೀ ಇದೇ ವಿಚಾರವೇ ಬಿಗ್ ಬಾಸ್ ಮನೆಯಲ್ಲಿ ಸುತ್ತಾಡುತ್ತಾ ಕೆಲವರು ಚಂದನ್ ಪರ, ಇನ್ನು ಕೆಲವರು ಚೈತ್ರಾ ಪರ ಮಾತನಾಡುತ್ತಿದ್ದುದು ಕಂಡುಬಂತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Anurag Kashyap: ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುತ್ತೇನೆ ಏನಿವಾಗ ಎಂದ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ದೂರು

ಸಲ್ಮಾನ್‌ ಖಾನ್‌ ಮತ್ತಷ್ಟು ಗಟ್ಟಿಯಾಗಿ ವಾಪಾಸ್ಸಾಗುತ್ತಾರೆ: ಇಮ್ರಾನ್ ಹಸ್ಮಿ ಹೀಗಂದಿದ್ಯಾಕೆ

ಕ್ರೈಸ್ತರ ಭಾವನೆಗೆ ಅಗೌರವ: ನಟ ಸನ್ನಿ ಡಿಯೋಲ್, ರಣದೀಪ್ ವಿರುದ್ಧ ಪ್ರಕರಣ ದಾಖಲು

ವಿಶೇಷ ಬೇಡಿಕೆಯನ್ನು ಮುಂದಿಟ್ಟ ಬಳುಕುವ ಬಳ್ಳಿ ಊರ್ವಸಿ, ಟ್ರೋಲ್ ಆದ ನಟಿ

ವಿದೇಶಿ ಹುಡುಗನ ಜತೆ ಅರ್ಜುನ್ ಸರ್ಜಾ ಎರಡನೇ ಪುತ್ರಿ ನಿಶ್ಚಿತಾರ್ಥ, ಹುಡುಗ ಯಾರು

ಮುಂದಿನ ಸುದ್ದಿ
Show comments