Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ: ಅನುಪಮಾ ಗೌಡಗೆ ಚಂದನ್ ಶೆಟ್ಟಿ ಮೇಲೆ ಅಸಮಾಧಾನ ಹುಟ್ಟಿದ್ದೇಕೆ ಗೊತ್ತಾ?

ಬಿಗ್ ಬಾಸ್ ಕನ್ನಡ
ಬೆಂಗಳೂರು , ಸೋಮವಾರ, 22 ಜನವರಿ 2018 (10:08 IST)
ಬೆಂಗಳೂರು: ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿ ಹೊರಬಂದ ಅನುಪಮಾ ಗೌಡ ಕಿಚ್ಚ ಸುದೀಪ್ ಜತೆ ವೇದಿಕೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಚಂದನ್ ಶೆಟ್ಟಿ ಜತೆಗಿನ ತಮ್ಮ ವೈಮನಸ್ಯದ ಬಗ್ಗೆ ಮಾತಾಡಿದರು.
 

ನಿಮ್ಮ ಮತ್ತು ಚಂದನ್ ಶೆಟ್ಟಿ ನಡುವೆ ಆಗಾಗ ಪ್ರೀತಿ-ಧ್ವೇಷ ನಡೀತಾ ಇತ್ತಲ್ವಾ? ಎಂದು ಸುದೀಪ್ ಕೇಳಿದಾಗ ತಾವೇಕೆ ಚಂದನ್ ಮೇಲೆ ಅಸಮಾಧಾನಗೊಂಡೆ ಎಂದು ಅನುಪಮಾ ಹೇಳಿಕೊಂಡಿದ್ದಾರೆ.

‘ನಾವಿಬ್ಬರೂ ಮೊದಲು ಚೆನ್ನಾಗಿಯೇ ಇದ್ದೆವು. ಆದರೆ ಮಧ್ಯೆ ಯಾವಾಗಲೋ ಚಂದನ್ ಲೆಕ್ಕಾಚಾರ ಹಾಕುತ್ತಿದ್ದಾರೆ ಎಂದು ಅನಿಸಲು ಶುರುವಾಯ್ತು. ನಾನು ಹೀಗೆ ಮಾತನಾಡಬಾರದು, ನಾನು ಹೀಗೆ ಮಾಡಿದ್ರೆ ಕ್ಯಾಮರಾ ನೋಡುತ್ತೆ, ವೀಕ್ಷಕರು ನೋಡ್ತಾರೆ ಎಂದೆಲ್ಲಾ ಲೆಕ್ಕಾಚಾರ ಹಾಕಿ ಆಡಲು ಶುರು ಮಾಡಿದ. ಆಗಿಂದ ನನಗೆ ಅಸಮಾಧಾನ ಹುಟ್ಟಿಕೊಂಡಿತು’ ಎಂದು ಅನುಪಮಾ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಾಕಿ ನಟಿ, ಮಲಯಾಳಿ ಕುಟ್ಟಿ ಭಾವನಾ ಮೆನನ್ ಅದ್ಧೂರಿ ವಿವಾಹ (ಫೋಟೋ ಗ್ಯಾಲರಿ)