ಬಿಗ್ ಬಾಸ್: ಕಿಚ್ಚ ಸುದೀಪ್ ಕೊಟ್ಟ ಶಾಕ್ ಗೆ ಪ್ರಿಯಾಂಕ, ಭೂಮಿ ಬೇಸ್ತು!

Webdunia
ಸೋಮವಾರ, 13 ಜನವರಿ 2020 (10:06 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರ ಎಲಿಮಿನೇಷನ್ ಇಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದರೂ ಮನೆಯ ಸದಸ್ಯರಿಗೆ ಇದರ ಅರಿವಿರಲಿಲ್ಲ. ಹೀಗಾಗಿ ಕಿಚ್ಚ ಮನೆಯ ಸದಸ್ಯರನ್ನು ಸರಿಯಾಗಿಯೇ ಬೇಸ್ತು ಬೀಳಿಸಿದ್ದಾರೆ.


ಈ ವಾರ ಎಲಿಮಿನೇಷನ್ ಇಲ್ಲ ಎಂಬ ಅರಿವಿರದ ಸದಸ್ಯರು ಯಾರು ಹೊರ ಹೋಗುತ್ತಾರೋ ಎಂಬ ಭೀತಿಯಲ್ಲಿದ್ದರು. ಕೊನೆಯಲ್ಲಿ ಸುದೀಪ್ ಪ್ರಿಯಾಂಕ ಮತ್ತು ಭೂಮಿ ಶೆಟ್ಟಿ ಇಬ್ಬರೂ ಈ ವಾರ ಮನೆಯಿಂದ ಎಲಿಮಿನೇಟ್ ಆಗುತ್ತೀರಿ ಎಂದರು.

ಇದನ್ನು ಕೇಳಿ ಇಬ್ಬರೂ ಶಾಕ್ ಆದರಲ್ಲದೆ, ಅತ್ತು ಕರೆದು ಇನ್ನು ಮುಂದೆ ಬಿಗ್ ಬಾಸ್ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಹೊರ ಹೋಗಲು ಸಿದ್ಧರಾಗಿದ್ದರು. ಆ ವೇಳೆ ಕಿಚ್ಚ ಮತ್ತೊಂದು ಶಾಕ್ ಕೊಟ್ಟಿದ್ದು ಯಾರೂ ಹೊರಹೋಗಬೇಕಿಲ್ಲ ಎಂದರು. ಕಿಚ್ಚ ಕೊಟ್ಟ ಶಾಕ್ ಗೆ ಮನೆಯವರೆಲ್ಲಾ ಶಾಕ್ ಆದರು. ಸುಧಾರಿಸಿಕೊಳ್ಳಲು ಕೆಲವು ಸಮಯವೇ ಹಿಡಿಯಿತು. ಆದರೆ ಮನೆಯವರು ನಿರಾಳವಾಗಬೇಕಿಲ್ಲ. ಯಾಕೆಂದರೆ ಮುಂದಿನ ವಾರ ಡಬಲ್ ಎಲಿಮಿನೇಷನ್ ಗ್ಯಾರಂಟಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ವಿಧಿವಶ

ಜಸ್ಟ್ ಫ್ರೆಂಡ್ಸ್ ಎನ್ನುತ್ತಲೇ ದಾಂಪತ್ಯ ಜೀವನಕ್ಕಿಡಲು ಸಜ್ಜಾದ ಮಾನಸ ಶಿವು ಜೋಡಿ

ಮುಂದಿನ ಸುದ್ದಿ
Show comments