Webdunia - Bharat's app for daily news and videos

Install App

ಬಿಬಿಕೆ10: ಎಲಿಮಿನೇಷನ್ ಭಯದಿಂದ ಹೊಸ ನಿರ್ಧಾರ ಕೈಗೊಂಡ ವಿನಯ್

Webdunia
ಮಂಗಳವಾರ, 26 ಡಿಸೆಂಬರ್ 2023 (10:55 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಇಷ್ಟು ದಿನ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದ ವಿನಯ್ ಗೌಡ ಇದ್ದಕ್ಕಿದ್ದಂತೆ ತಣ್ಣಗಾಗಲು ನಿರ್ಧರಿಸಿದ್ದಾರೆ.

ವಿನಯ್ ಗೌಡ ಈ ಸೀಸನ್ ನಲ್ಲಿ ಹಲವಾರು ಬಾರಿ ಅಗ್ರೆಸಿವ್ ವರ್ತನೆಗಳಿಂದಲೇ ವಿವಾದಕ್ಕೀಡಾಗಿದ್ದರು. ಮನೆಯವರೂ ಅವರ ಮೇಲೆ ಸಾಕಷ್ಟು ಬಾರಿ ಆಕ್ರೋಶ ವ್ಯಕ್ತಪಡಿಸಿದ್ದೂ ಇದೆ.

ಆದರೆ ವೀಕ್ಷಕರಿಗೂ ವಿನಯ್ ವರ್ತನೆ ಅಸಮಾಧಾನ ತಂದಿತ್ತು. ಕಿಚ್ಚ ಸುದೀಪ್ ಒಮ್ಮೆಯಾದರೂ ಅವರ ವರ್ತನೆಯನ್ನು ಪ್ರಶ್ನಿಸಬೇಕು ಎಂದು ಅಭಿಪ್ರಾಯಪಟ್ಟಿದ್ದೂ ಇದೆ. ಇದೀಗ ಮನೆಗೆ ಈ ವಾರಂತ್ಯದಲ್ಲಿ ಭೇಟಿ ಕೊಟ್ಟಿದ್ದ ಶೈನ್ ಶೆಟ್ಟಿ ವಿನಯ್ ಗೆ ಇದನ್ನು ಸೂಕ್ಷ್ಮವಾಗಿ ಹೇಳಿದ್ದರು. ಅಗ್ರೆಸಿವ್ ಆಗಿದ್ದರೆ ಪರಿಣಾಮ ಸರಿ ಇರಲ್ಲ, ಎಚ್ಚರಿಕೆಯಿಂದ ಆಡಿದರೆ ಉಳಿದುಕೊಳ್ಳಬಹುದು ಎಂದು ಸಂದೇಶ ರವಾನಿಸಿದ್ದರು.

ಹೀಗಾಗಿ ಬಳಿಕ ವಿನಯ್ ನಾನು ಇನ್ನು ಮುಂದೆ ಯಾವುದೇ ಕಾರಣಕ್ಕೂ ಅಗ್ರೆಸಿವ್ ಆಗಿರುವುದಿಲ್ಲ. ಯಾವುದೇ ಕಾರಣಕ್ಕೂ ಪ್ರವೋಕ್ ಆಗಲ್ಲ ಎಂದು ಮನೆಯ ಸದಸ್ಯರಿಗೆ ಹೇಳಿಕೊಂಡಿದ್ದಾರೆ. ಅದನ್ನು ತಮ್ಮ ವರ್ತನೆ ಮೂಲಕವೂ ತೋರಿಸುತ್ತಿದ್ದಾರೆ. ಎಲ್ಲರ ಜೊತೆಗೆ ಚೆನ್ನಾಗಿರಲು ಪ್ರಯತ್ನಿಸುತ್ತಿದ್ದಾರೆ. ಎಲ್ಲವನ್ನೂ ತಮಾಷೆಯಾಗಿಯೇ ಸ್ವೀಕರಿಸುತ್ತಿದ್ದಾರೆ. ಅವರ ಈ ಬದಲಾವಣೆ ಎಷ್ಟು ದಿನ ಕಾದು ನೋಡಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments