Webdunia - Bharat's app for daily news and videos

Install App

ಬಿಬಿಕೆ10: ಈ ವಾರ ಕಿಚ್ಚ ಸುದೀಪ್ ಬದಲಿಗೆ ನ್ಯಾಯ ತೀರ್ಪು ಕೊಡಲು ಬಂದ ಶ್ರುತಿ!

Webdunia
ಶನಿವಾರ, 23 ಡಿಸೆಂಬರ್ 2023 (09:20 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರಂತ್ಯಕ್ಕೆ ಕಿಚ್ಚ ಸುದೀಪ್ ಬರುತ್ತಿಲ್ಲ. ಅವರ ಬದಲು ನಟಿ, ಬಿಗ್ ಬಾಸ್ ಕನ್ನಡ ಸೀಸನ್ ನ ಏಕೈಕ ಮಹಿಳಾ ವಿನ್ನರ್ ಶ್ರುತಿ ಕೃಷ್ಣ ಬಂದಿದ್ದಾರೆ.

ಕಿಚ್ಚ ಸುದೀಪ್ ಕೆಸಿಸಿ ಕ್ರಿಕೆಟ್ ಟೂರ್ನಿಯಲ್ಲಿ ಬ್ಯುಸಿಯಾಗಿರುವುದರಿಂದ ಗೈರಾಗಿದ್ದಾರೆ. ಅವರ ಬದಲು ನ್ಯಾಯಾಧೀಶೆಯಾಗಿ ಶ್ರುತಿ ಕಾರ್ಯನಿರ್ವಹಿಸಿದ್ದು, ಸ್ಪರ್ಧಿಗಳ ಬಗ್ಗೆ ಆರೋಪ, ಪ್ರತ್ಯಾರೋಪಗಳ ನ್ಯಾಯ ತೀರ್ಮಾನ ಮಾಢುವ ಕೆಲಸ ಮಾಡಲಿದ್ದಾರೆ.

ಶ್ರುತಿ 2016 ರಲ್ಲಿ ನಡೆದಿದ್ದ ಬಿಗ್ ಬಾಸ್ ಕನ್ನಡ ಶೋನ ವಿನ್ನರ್. ಇದುವರೆಗೆ ನಡೆದ ಎಲ್ಲಾ 10 ಬಿಗ್ ಬಾಸ್ ಗಳಲ್ಲಿ ಮಹಿಳೆಯೊಬ್ಬರು ಬಿಗ್ ಬಾಸ್ ಗೆದ್ದಿದ್ದಾರೆ ಎಂದರೆ ಅದು ಶ್ರುತಿ ಮಾತ್ರ.

ಶ್ರುತಿ ಈಗ ಬಿಗ್ ಬಾಸ್ ಮನೆಯೊಳಗೆ ನ್ಯಾಯ ತೀರ್ಮಾನ ಕೊಡಲು ಪ್ರವೇಶ ಮಾಡಿದ್ದಾರೆ. ನ್ಯಾಯಪೀಠದಲ್ಲಿ ಕುಳಿತು ಸ್ಪರ್ಧಿಗಳ ಬಗ್ಗೆ ದೂರು-ದುಮ್ಮಾನಗಳನ್ನು ಆಲಿಸಲಿದ್ದಾರೆ. ಇದೀಗ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಮನೆಯ ಸದಸ್ಯರಾದ ಸಂಗೀತಾ, ನಮ್ರತಾ ವಿನಯ್ ವಿರುದ್ಧ ನಮ್ಮೆದುರಿಗೆ ಕಟುವಾಗಿರ್ತಾರೆ, ಕಿಚ್ಚ ಸುದೀಪ್ ಎದುರಿಗೆ ಅತಿಯಾಗಿ ವಿನಯವಂತಿಕೆ ತೋರಿಸುತ್ತಾರೆ ಎಂದು ಆರೋಪ ಮಾಡಿದ್ದಾರೆ.

ಇದಕ್ಕೆ ಕಟಕಟೆಯಲ್ಲಿ ನಿಂತು ಪ್ರತಿಕ್ರಿಯಿಸಿರುವ ವಿನಯ್, ನಾನು ಇವರ ಎದುರಿಗೆಲ್ಲಾ ನಾಟಕ ಮಾಡಬೇಕಾಗಿಲ್ಲ ಎಂದಿದ್ದಾರೆ. ಅವರು ಏರು ಧ್ವನಿಯಲ್ಲಿ ಮಾತನಾಡಿದ್ದಕ್ಕೆ ಕೋಪಗೊಂಡ ಶ್ರುತಿ, ‘ನನ್ನ ಮುಂದೆಯೇ ಏರು ಧ‍್ವನಿಯಲ್ಲಿ ಮಾತನಾಡುತ್ತೀರಾ’ ಎಂದು ಪ್ರಶ್ನಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Rashmika Mandhana: ಚೆನ್ನೈಗೆ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದ ನ್ಯಾಷನಲ್ ಕ್ರಶ್‌

Kareena Kapoor: ವಯಸ್ಸು 44 ಆದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಕರೀನಾ ಕಪೂರ್‌ ಫಿಟ್‌ನೆಸ್ ಗುಟ್ಟು ಇದು

Deepika Padukone: ಅಪ್ಪನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ದೀಪಿಕಾ ಪಡುಕೋಣೆ

Ramayana Film: ಇಂದ್ರ ದೇವನ ಪಾತ್ರಕ್ಕೆ ಆಯ್ಕೆಯಾದ ಕುನಾಲ್ ಲುಕ್‌ಗೆ ಫ್ಯಾನ್ಸ್‌ ಫಿದಾ

ಮದುವೆಯಾಗಿ ಇಷ್ಟು ದಿನಕ್ಕೆ ನಟಿ ರಶ್ಮಿ ಪ್ರಭಾಕರ್ ಕೊನೆಗೂ ಕೊಟ್ರು ಗುಡ್ ನ್ಯೂಸ್

ಮುಂದಿನ ಸುದ್ದಿ
Show comments