Select Your Language

Notifications

webdunia
webdunia
webdunia
webdunia

ರಾಜ ರಾಣಿ ಶೋನಿಂದ ಹೊರಹೋಗಿದ್ದೇಕೆ? ಸ್ಪಷ್ಟನೆ ಕೊಟ್ಟ ಅನುಪಮಾ ಗೌಡ

ರಾಜ ರಾಣಿ ಶೋನಿಂದ ಹೊರಹೋಗಿದ್ದೇಕೆ? ಸ್ಪಷ್ಟನೆ ಕೊಟ್ಟ ಅನುಪಮಾ ಗೌಡ
ಬೆಂಗಳೂರು , ಸೋಮವಾರ, 13 ಜೂನ್ 2022 (10:00 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ನೆಚ್ಚಿನ ರಿಯಾಲಿಟಿ ಶೋ ರಾಜ ರಾಣಿ ಸೀಸನ್ 2 ನಲ್ಲಿ ನಟಿ ಅನುಪಮಾ ಗೌಡ ನಿರೂಪಣೆ ಮಾಡುತ್ತಿಲ್ಲ. ಇದರ ಬಗ್ಗೆ ಅಭಿಮಾನಿಗಳು ಅವರನ್ನು ಪ್ರಶ್ನಿಸುತ್ತಲೇ ಇದ್ದರು. ಇದಕ್ಕೀಗ ಅವರು ಲೈವ್ ಬಂದು ಸ್ಪಷ್ಟನೆ ನೀಡಿದ್ದಾರೆ.

‘ರಾಜ ರಾಣಿ ಶೋನಲ್ಲಿ ನಾನು ಯಾಕೆ ಈ ಬಾರಿ ಇಲ್ಲ ಎಂಬುದು ನನಗೂ ಗೊತ್ತಿಲ್ಲ. ಕಾಲ್ ಬಂದಿದ್ದರೆ ಖಂಡಿತವಾಗಿ ಇಷ್ಟಪಟ್ಟು ನಿರೂಪಣೆ ಮಾಡುತ್ತಿದ್ದೆ. ನಾನಾಗಿಯೇ ಈ ಶೋನಿಂದ ಹೊರಬಂದಿಲ್ಲ. ವೈಯಕ್ತಿಕವಾಗಿ ನಾನು ಬೇರೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಿದ್ದೆ. ಹಾಗಿದ್ದರೂ ಕೆಲವು ವಿಚಾರಗಳ ಬಗ್ಗೆ ಮಾತನಾಡಲು ನಾನು ಇಲ್ಲಿ ಇಷ್ಟಪಡುವುದಿಲ್ಲ. ಇಲ್ಲಿ ಅವುಗಳನ್ನು ಮಾತನಾಡುವುದು ಸರಿಯಲ್ಲ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಡ್ರಗ್ಸ್ ಪಾರ್ಟಿ: ನಟಿ ಶ್ರದ್ಧಾ ಕಪೂರ್ ಸಹೋದರ ಅರೆಸ್ಟ್