Webdunia - Bharat's app for daily news and videos

Install App

ಐಪಿಎಲ್ ನಲ್ಲಿ ಆರ್ ಸಿಬಿ ಸೋಲಲು ಅಗ್ನಿಸಾಕ್ಷಿ ಧಾರವಾಹಿಯೇ ಕಾರಣವಂತೆ! ಹೇಗೆ ಗೊತ್ತಾ?!

Webdunia
ಗುರುವಾರ, 28 ಫೆಬ್ರವರಿ 2019 (09:30 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಧಾರವಾಹಿ ಮತ್ತೆ ಪ್ರೇಕ್ಷಕರ ಟ್ರೋಲ್ ಗೆ ತುತ್ತಾಗಿದೆ. ಈಗ ವಿಲನ್ ಚಂದ್ರಿಕಾ ಬಣ್ಣ ಬಯಲಾಗಿದೆ. ಇನ್ನಾದರೂ ಸೀರಿಯಲ್ ಮುಗಿಸಿ ಎಂದು ಪ್ರೇಕ್ಷಕರು ಗೋಳು ಹೊಯ್ದುಕೊಳ್ಳುತ್ತಿದ್ದಾರೆ.


ಇನ್ನೇನು ಐಪಿಎಲ್ ಶುರುವಾಗುತ್ತದೆ. ಅದೂ ಅಗ್ನಿಸಾಕ್ಷಿ ಧಾರವಾಹಿ ಪ್ರಸಾರವಾಗುವ ಎಂಟು ಗಂಟೆ ಹೊತ್ತಿಗೇ ಮ್ಯಾಚ್ ನಡೆಯುತ್ತದೆ. ಐಪಿಎಲ್ ಗೆ ಮೊದಲು ಅಗ್ನಿಸಾಕ್ಷಿ ಮುಗಿದಿಲ್ಲ ಎಂದರೆ ನಮಗೆ ಅಮ್ಮ ರಿಮೋಟ್ ಕೊಡಲ್ಲ ಎಂದು ಕೆಲವು ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಗೋಳು ಹೇಳಿಕೊಂಡಿದ್ದಾರೆ.

ಇನ್ನು, ಕೆಲವರು ಇನ್ನೂ ಅಗ್ನಿಸಾಕ್ಷಿ ಮುಗಿಸಿಲ್ಲಾಂದ್ರೆ ಸೆಟ್ ಗೇ ಬಂದು ಸರ್ಜಿಕಲ್ ಸ್ಟ್ರೈಕ್ ಮಾಡಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಆರ್ ಸಿಬಿ ತಂಡ ಐಪಿಎಲ್ ನಲ್ಲಿ ಪ್ರತೀ ಬಾರಿ ಸೋಲಲು ಅಗ್ನಿಸಾಕ್ಷಿಯೇ ಕಾರಣ ಎಂದು ಕೆಲವು ವೀಕ್ಷಕರು ಹೊಸ ಆರೋಪ ಮಾಡಿದ್ದಾರೆ. ಅದಕ್ಕೆ ಕಾರಣ ನಾವು ಧಾರವಾಹಿ ನೋಡಲು ಬಿಡಲ್ಲ ಅಂತ ಆರ್ ಸಿಬಿ ಮೇಲೆ ಮನೆಯಲ್ಲಿರುವ ಹೆಣ್ಣು ಮಕ್ಕಳು ಶಾಪ ಹಾಕುತ್ತಿರುತ್ತಾರೆ ಎಂದೂ ಕೆಲವರು ಹೊಸ ಬಾಂಬ್ ಸಿಡಿಸಿದ್ದಾರೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments