ಲಂಡನ್ ಓಲಂಪಿಕ್ಸ್ನಲ್ಲಿ ಕುಸ್ತಿ ಪಟು ಯೋಗೇಶ್ವರ್ ಗೆದ್ದಿದ್ದ ಕಂಚು ಬೆಳ್ಳಿ ಪದಕಕ್ಕೆ ಬಡ್ತಿ ಹೊಂದಿತ್ತು. ಅದನ್ನು ನಯವಾಗಿ ನಿರಾಕರಿಸಿದ್ದ ಅವರು ಮತ್ತಷ್ಟು ಗೌರವಕ್ಕೆ ಪಾತ್ರರಾಗಿದ್ದರು. ಆದರೆ ಅವರೆಷ್ಟು ನಿರಾಕರಿಸಿದರೂ ಅದೃಷ್ಟ ಅವರ ಬೆನ್ನು ಬಿಡುವ ಲಕ್ಷಣಗಳು ಗೋಚರಿಸುತ್ತಿಲ್ಲ. ಮತ್ತೀಗ ಅವರ ಕಂಚಿನ ಪದಕ ಚಿನ್ನಕ್ಕೆ ಬಡ್ತಿ ಹೊಂದುವ ಸುದ್ದಿ ಹರಿದು ಬಂದಿದೆ.
ಅದು ಹೇಗೆ ಅಂತೀರಾ? 2012ರ ಓಲಂಪಿಕ್ಸ್ನಲ್ಲಿ ಕುಸ್ತಿ ಪಂದ್ಯದಲ್ಲಿ (60 ಕೆಜಿ. ಫ್ರಿಸ್ಟೈಲ್) ಮೊದಲ ಸ್ಥಾನ ಗಳಿಸಿದ್ದ ಅಜರ್ಬೈಜಾನ್ನ ತೊಗರುಲ್ ಅಸ್ಗರೊವ್ ಸಹ ನಿಷೇಧಿತ ಮದ್ದು ಸೇವಿಸಿದ್ದಾರೆ ಎನ್ನಲಾಗುತ್ತಿದೆ. ಇದೇ ಪಂದ್ಯಾವಳಿಯಲ್ಲಿ ಬೆಳ್ಳಿ ಗೆದ್ದಿದ್ದ ಬೆಸಿಕ್ ಕುದುಕೊವ್ ಉದ್ದೀಪನಾ ಮದ್ದು ಸೇವಿಸಿರುವುದು ಕಳೆದ ನಾಲ್ಕು ದಿನಗಳ ಹಿಂದೆ ಸಾಬೀತಾಗಿತ್ತು. ಹೀಗಾಗಿ ಆ ಪದಕವನ್ನು ಯೋಗೇಶ್ವರ್ ಅವರಿಗೆ ಹಸ್ತಾಂತರಿಸುವ ಬಗ್ಗೆ ವರದಿ ಬಂದಿತ್ತು. ಆದರೆ ಮೃತ ಕುದುಕೊವ್ ಅವರ ಗೌರವಾರ್ಥ ಯೋಗೇಶ್ವರ್ ನಯವಾಗಿ ಬೆಳ್ಳಿ ಪದಕವನ್ನು ತಳ್ಳಿ ಹಾಕಿದ್ದರು.
ಮತ್ತೀಗ ಚಿನ್ನ ಗೆದ್ದಿದ್ದ ಅಸ್ಗರೊವ್ ಸಹ ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾದರೆ ಭಾರತಕ್ಕೆ ದೊರೆತ ಕಂಚು ಚಿನ್ನಕ್ಕೆ ಬಡ್ತಿ ಪಡೆಯುವುದಂತೂ ಖಚಿತ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ