ಪ್ರೊ ಕಬಡ್ಡಿ ಲೀಗ್ ಜಾಹೀರಾತಿನಲ್ಲಿ ಕಿಚ್ಚ ಸುದೀಪ್, ಬೆಂಗಳೂರು ಬುಲ್ಡೋಜರ್ ಗೆ ಸಾಥ್

Krishnaveni K
ಬುಧವಾರ, 9 ಅಕ್ಟೋಬರ್ 2024 (17:06 IST)
ಬೆಂಗಳೂರು: ಪ್ರೊಕಬಡ್ಡಿಲೀಗ್ (ಪಿಕೆಎಲ್) ನಅಧಿಕೃತ ಪ್ರಸಾರಕರಾದ ಸ್ಟಾರ್ಸ್ಪೋರ್ಟ್ಸ್ ನ ಪಿಕೆಎಲ್ಸೀಸನ್ 1ರಜಾಹೀರಾತಿನಲ್ಲಿ ಕನ್ನಡದಸೂಪರ್‌ಸ್ಟಾರ್ ಕಿಚ್ಚಸುದೀಪ್ ಅವರು ಕಾಣಿಸಿಕೊಂಡಿದ್ದು,  ಅತಿ ಹುಮ್ಮಸ್ಸಿನ ಈ ಚಿತ್ರವು ಪ್ರಸಾರ ಆರಂಭಿಸಿದೆ.

ಬೆಂಗಳೂರು ಬುಲ್ಡೋಜರ್ಸ್ ತಂಡದ ಬಲ, ದೃಢತೆಯನ್ನು ಈ ಜಾಹೀರಾತಿನಲ್ಲಿ ಕಿಚ್ಚ ಸುದೀಪ್ ತೋರಿಸಿದ್ದಾರೆ.

ಜಾಹೀರಾತು ಚಿತ್ರದ ಪ್ರೋಮೋದಲ್ಲಿ, ಕಿಚ್ಚಸುದೀಪ್ ಅವರು ಕರ್ನಾಟಕದ ಜನತೆಯ ಪೂಜ್ಯ ನಂದಿಯಶಕ್ತಿಮತ್ತುಹುಮ್ಮಸ್ಸನ್ನುಪ್ರತಿನಿಧಿಸಿರುವುದನ್ನುಕಾಣಬಹುದು.  ಪ್ರೋಮೋದಲ್ಲಿ ಅವರುಬಲಶಾಲಿ ಎದುರಾಳಿ ತಂಡಗಳನ್ನು ಪ್ರತಿನಿಧಿಸುವ ಆನೆಯ ವಿರುದ್ಧ ಮುಖಾಮುಖಿ ಆಗುತ್ತಾರೆ.
ದೊಡ್ಡದಾದ ಬಲಶಾಲಿ ಆನೆಯು ತನ್ನ ಸೊಂಡಿಲಿನ ಮೂಲಕ ಅವರನ್ನು ಹಿಡಿದು ಹಿಂದಕ್ಕೆ ಎಳೆಯುತ್ತಿದ್ದಂತೆ ಅವರು ಇಡುವ ಪ್ರತೀಹೆಜ್ಜೆಯೂ ಅದ್ಭುತ ಶಕ್ತಿಪರೀಕ್ಷೆಯಾಗುತ್ತದೆ. ಬಸವನ ಉತ್ಕೃಷ್ಟಶಕ್ತಿ ಮತ್ತು ಆನೆಯ ಪರಾಕ್ರಮದ ನಡುವಿನ ಭೀಕರ ಹೋರಾಟವನ್ನುಈ ಪ್ರೋಮೋ ತೋರಿಸುತ್ತದೆ.

ಕಿಚ್ಚಸುದೀಪ್ ಅವರು ತಮ್ಮ ದೃಢವಾದ ಧ್ವನಿಯಲ್ಲಿ "ಕಬಡ್ಡಿ, ಕಬಡ್ಡಿ, ಕಬಡ್ಡಿ" ಎನ್ನುತ್ತಿದ್ದರೆ ಆ ಧ್ವನಿ ಹಿನ್ನೆಲೆಯಲ್ಲಿ ಅನುರಣಿಸುತ್ತಿರುತ್ತದೆ.  ಆ ಧ್ವನಿಯೇ ಶಕ್ತಿ ಮತ್ತು ಹುಮ್ಮಸ್ಸನ್ನು ತುಂಬುತ್ತಿರುತ್ತದೆ.

ಆ ಧ್ವನಿ ಶಕ್ತಿಯ ನೆರವಿನಿಂದ ಅವರು ಬಲಶಾಲಿ ಆನೆಯನ್ನು ಹಿಮ್ಮೆಟ್ಟಿಸಲು ಯಶಸ್ಸುಗಳಿಸುತ್ತಾರೆ. ಈ ಕಬಡ್ಡಿ ಕಬಡ್ಡಿ ಎಂಬ ಅದ್ಭುತ ಶಕ್ತಿ ಮಂತ್ರಪಠಣವು ಈ ತೀವ್ರವಾದ' ಉಸಿರಿನ ಯುದ್ಧದ ವಿಜಯವನ್ನು ಪ್ರತಿನಿಧಿಸುತ್ತದೆ.
Link to Promo - Instagram

ಪಂದ್ಯಾವಳಿಯ ಎಲ್ಲಾ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ ಆಗಲಿದೆ.
ಅಕ್ಟೋಬರ್ 18, 2024 ರಿಂದ ಸಂಜೆ 7 ರಿಂದ ಲೈವ್ಆಗಿವೀಕ್ಷಿಸಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಟೀಂ ಇಂಡಿಯಾ ಇಂದು ಸರಣಿ ಗೆಲ್ಲಲು ಈ ಬದಲಾವಣೆ ಮಾಡಲೇಬೇಕು

ವಿರಾಟ್ ಕೊಹ್ಲಿಯಲ್ಲಿ ಆಗಿದೆ ಈ ಒಂದು ಬದಲಾವಣೆ

ಮೊಹಮ್ಮದ್ ಶಮಿ ಎಲ್ಲಿ; ಅಜಿತ್ ಅಗರ್ಕರ್ ವಿರುದ್ಧ ಮುಗಿಬಿದ್ದ ಮಾಜಿ ಆಟಗಾರರು

ಏನೂ ಸಾಧಿಸದವರೆಲ್ಲಾ ಕೊಹ್ಲಿ, ರೋಹಿತ್ ಭವಿಷ್ಯ ನಿರ್ಧರಿಸುತ್ತಿದ್ದಾರೆ, ನನಗೂ ಹೀಗೇ ಆಗಿದೆ ಎಂದ ಹರ್ಭಜನ್

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ರಾಹುಲ್‌: ಬೌಲರ್‌ಗಳನ್ನು ಪ್ರಶಂಸಿಸಿದ ನಾಯಕ

ಮುಂದಿನ ಸುದ್ದಿ
Show comments