Select Your Language

Notifications

webdunia
webdunia
webdunia
webdunia

ಪದಕ ಗೆಲ್ಲಲಾಗದ್ದಕ್ಕೆ ಭಾರತೀಯರ ಕ್ಷಮೆ ಕೇಳಿದ ಅತನು ದಾಸ್

ಪದಕ ಗೆಲ್ಲಲಾಗದ್ದಕ್ಕೆ ಭಾರತೀಯರ ಕ್ಷಮೆ ಕೇಳಿದ ಅತನು ದಾಸ್
ಟೋಕಿಯೋ , ಭಾನುವಾರ, 1 ಆಗಸ್ಟ್ 2021 (11:08 IST)
ಟೋಕಿಯೋ: ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಆರ್ಚರಿ ತಾರೆಯರು ಈ ಬಾರಿಯ ಒಲಿಂಪಿಕ್ಸ್ ನಲ್ಲಿ ನಿರಾಸೆ ಮೂಡಿಸಿದ್ದಾರೆ. ಅದರಲ್ಲೂ ದೀಪಿಕಾ ಕುಮಾರಿ ಮತ್ತು ಅತನು ದಾಸ್ ದಂಪತಿ ಮೇಲೆ ಭಾರೀ ನಿರೀಕ್ಷೆಯಿತ್ತು. ಆದರೆ ಇಬ್ಬರೂ ಸೋತು ನಿರ್ಗಮಿಸಿದ್ದಾರೆ.


ಪ್ರಿ ಕ್ವಾರ್ಟರ್ ಫೈನಲ್ ಗೇರಿದ್ದ ಅತನು ದಾಸ್ ಸೋತು ಪದಕದ ಭರವಸೆ ಭಗ್ನಗೊಳಿಸಿದ್ದಕ್ಕೆ ಭಾರತೀಯರ ಕ್ಷಮೆ ಕೇಳಿದ್ದಾರೆ. ‘ಸಾರಿ ಇಂಡಿಯಾ. ನನಗೆ ಒಲಿಂಪಿಕ್ಸ್ ಮೆಡಲ್ ಭಾರತಕ್ಕೆ ತರಲು ಸಾಧ್ಯವಾಗಲಿಲ್ಲ. ಆದರೆ ನಮಗೆ ಸಿಕ್ಕ ಬೆಂಬಲಕ್ಕೆ ಅಭಾರಿಯಾಗಿದ್ದೇವೆ. ನಾವು ಭವಿಷ್ಯದ ಬಗ್ಗೆ ನೋಟಹರಿಸಬೇಕು ಎಂದಷ್ಟೇ ಹೇಳಬಲ್ಲೆ’ ಎಂದು ಅತನು ಟ್ವೀಟ್ ಮೂಲಕ ಕ್ಷಮೆ ಯಾಚಿಸಿದ್ದಾರೆ.

ವಿಶ್ವ ನಂ.1 ತಾರೆ ದೀಪಿಕಾ ಕೂಡಾ ಕ್ವಾರ್ಟರ್ ಫೈನಲ್ ನಲ್ಲಿ ಸೋತಿದ್ದರು. ಹೀಗಾಗಿ ಆರ್ಚರಿ ವಿಭಾಗದಲ್ಲಿ ಭಾರತ ಪದಕದ ಸಮೀಪ ಬಂದು ಮುಗ್ಗರಿಸಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಟೋಕಿಯೊ ಒಲಿಂಪಿಕ್ಸ್: ಭಾರತ ವನಿತೆಯರು ಕ್ವಾರ್ಟರ್ ಗೆ ಲಗ್ಗೆ