Select Your Language

Notifications

webdunia
webdunia
webdunia
webdunia

ಜನರಿಗೆ ಟೀ, ಬನ್ಸ್ ವಿತರಿಸುತ್ತಿರುವ ಶ್ರೀಲಂಕಾದ ಮಾಜಿ ಕ್ರಿಕೆಟಿಗ!

ಜನರಿಗೆ ಟೀ, ಬನ್ಸ್ ವಿತರಿಸುತ್ತಿರುವ ಶ್ರೀಲಂಕಾದ ಮಾಜಿ ಕ್ರಿಕೆಟಿಗ!
bengaluru , ಭಾನುವಾರ, 19 ಜೂನ್ 2022 (21:21 IST)

ಶ್ರೀಲಂಕಾದ ಮಾಜಿ ಕ್ರಿಕೆಟಿಗ ರೋಶನ್ ಮಹಾನಾಮ ಪೆಟ್ರೋಲ್ ಬಂಕ್ ಮುಂದೆ ಸರದಿಯಲ್ಲಿ ನಿಂತಿರುವ ಜನರಿಗೆ ಟೀ ಮತ್ತು ಬನ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲಿರುವ ಶ್ರೀಲಂಕಾದಲ್ಲಿ ಜನರು ಪ್ರತಿನಿತ್ಯ ಪೆಟ್ರೋಲ್, ಡೀಸೆಲ್, ಆಹಾರ ಸೇರಿದಂತೆ ಹಲವೆಡೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಅಗತ್ಯ ವಸ್ತುಗಳಿಗೆ ಜನರು ಸರದಿಯಲ್ಲಿ ನಿಂತಿದ್ದರಿಂದ ಮಾಜಿ ಕ್ರಿಕೆಟಿಗ ಅವರಿಗೆ ನೆರವು ನೀಡುತ್ತಿದ್ದಾರೆ.

ನಾವು ಒಂದು ತಂಡವಾಗಿ ಪ್ರತಿನಿತ್ಯ ಜನರಿಗೆ ಟೀ ಬನ್ಸ್ ವಿತರಿಸುತ್ತಿದ್ದೇವೆ. ಕೆಲವು ಬಾರಿ ಸಂಜೆ ಊಟದ ವ್ಯವಸ್ಥೆ ಮಾಡುತ್ತಿದ್ದೇವೆ. ಜನರು ಅಗತ್ಯ ವಸ್ತುಗಳಿಗಾಗಿ ಇಡೀ ದಿನ ರಸ್ತೆಯಲ್ಲಿ ನಿಂತಿರುವುದು ನೋಡುವುದು ಕಷ್ಟ ಎಂದು ಅವರು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತಕ್ಕೆ ಆರಂಭಿಕ ಆಘಾತ: ಬೆಂಗಳೂರು ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿ