Webdunia - Bharat's app for daily news and videos

Install App

ರೇಖಾ ಕದಿರೇಶ್ ಕೊಲೆ ನಡೆಯೋಕೆ ಕಾರಣವಾದ ಅಂಶಗಳು

Webdunia
ಸೋಮವಾರ, 28 ಜೂನ್ 2021 (13:59 IST)
2018 ರಲ್ಲಿ ಕದಿರೇಶ್ ನ ಕೊಲೆಯಾಗುತ್ತೆ.ಕದಿರೇಶ್ ಬದುಕಿದ್ದಾಗ ಸರಿಸುಮಾರು 200 ಸ್ಥಳೀಯ ಯುವಕರನ್ನ ಕಟ್ಟುಮಸ್ತಾಗಿ ಸಾಕಿದ್ದ ಅದರಲ್ಲಿ ಸೆಂಥಿಲ್ ಅಲಿಯಾಸ್ ಕ್ಯಾಪ್ಟನ್,ಸೀನ,ಪೀಟರ್ ಪ್ರಮುಖರಾಗಿದ್ದರು.
ಆದ್ರೆ, ಕದಿರೇಶನ ಕೊಲೆಯಲ್ಲಿ ಗಾರ್ಡನ್ ಶಿವ ಹಾಗೂ ಶೋಭನ್ ಬಾಗಿಯಾಗಿರೋದು ಖಚಿತವಾಗುತ್ತೆ.
ಕದಿರೇಶ್ ಕೊಲೆಯಾದ ಒಂದೇ ತಿಂಗಳಿನಲ್ಲಿ ಶೋಭನ್ ನನ್ನ ಕದಿರೇಶನ ಹುಡುಗ್ರೇ ಹೊಡೆದುರುಳಿಸ್ತಾರೆ.
ಶೋಭನ್ ಕೊಲೆ ಪ್ರಕರಣದಲ್ಲಿ ಕದಿರೇಶನ ಅಕ್ಕ(ಮಾಲಾ) ಮಗ ಅರುಳ್ ,ಸೂರ್ಯ ಸೇರಿ ಒಟ್ಟು 11 ಮಂದಿ ಜೈಲುಹಾದಿ ಹಿಡೀತಾರೆ.
ಯಾವಾಗ ಕದಿರೇಶ ರಸ್ತೆಯಲ್ಲಿ ಹೆಣವಾಗ್ತಾನೋ ಆಗಿನಿಂದಲೇ ರೇಖಾ ಕದಿರೇಶನ ಗ್ಯಾಂಗನ್ನ ದೂರ ಇಡೋದಕ್ಕೆ ಶುರುಮಾಡ್ತಾಳೆ.
ರೇಖಾ ಮಗ ಹಾಗೂ ಮಗಳನ್ನ ಡೈರಿಸರ್ಕಲ್ ಬಳಿಯಲ್ಲಿರೋ ಕಾನ್ವೆಂಟ್ ನಲ್ಲೇ ಇರಿಸಿ ಓದಿಸುವಂತಹ ಕೆಲಸವನ್ನ ಮಾಡ್ತಾಳೆ.
ರೇಖಾ ಕದಿರೇಶನ ತರಹ ಸಾವಿರಾರು ರೂಪಾಯಿ ಹಣವನ್ನ ಕದಿರೇಶನ ಸಹಚರರಿಗೆ ನೀಡ್ತಿರಲಿಲ್ಲ.
ಕದಿರೇಶನ ಕಿರೀತಮ್ಮ ಸುರೇಶ ಹಾಗೂ ಪೀಟರ್ ಗೆ ಗಲಾಟೆಯೊಂದರಲ್ಲಿ ಚಪ್ಪಲಿ ಏಟನ್ನ ರೇಖಾ ನೀಡಿದ್ದಳು.
ಕದಿರೇಶ ಸತ್ತ ಬಳಿಕ ಯಾವೊಬ್ಬ ಕ್ರಿಮಿನಲ್ ಬ್ಯಾಗ್ರೌಂಡ್ ಇರೋ ವ್ಯಕ್ತಿಯನ್ನ ಕೂಡ ರೇಖಾ ತನ್ನ ಬಳಿ ಬಿಟ್ಕೊಳ್ತಿರಲಿಲ್ಲ.
ಯಾವುದೇ ಹಣಕಾಸಿನ ಸಹಾಯ ಮಾಡದೇ ರೇಖಾ ತನ್ನ ಪಾಡಿಗೆ ತಾನಿದ್ದಳು
ಕದಿರೇಶನನ್ನ ಕೊಲೆಗೈದ ಕೆಲ ಆರೋಪಿಗಳನ್ನ ಮುಗಿಸೋಕೆ ರೇಖಾ ಹಣ ನೀಡಿಲ್ಲ ಅನ್ನೋ ವಿಚಾರಕ್ಕೂ ಕದಿರೇಶನ ಗ್ಯಾಂಗ್ ರೇಖಾಳನ್ನ ವಿರೋಧಿಸ್ತಿತ್ತು.
ರೇಖಾ ಬೇರೊಬ್ಬರ ಜೊತೆ ಓಡಾಡ್ತಿದ್ದಾಳೆ ನಮ್ಮ ಕದಿರೇಶಣ್ಣನಿಗೆ ಮೋಸ ಆಗ್ತಿದೆ ಎಂದು ಅಪೋಸ್ ಮಾಡೋ ಗ್ಯಾಂಗ್ ಹುಟ್ಟಿಕೊಂಡಿತ್ತು
ರಾಜಕೀಯವಾಗಿ ಬೆಳೆದು ನಮ್ಮನ್ನೇ ತುಳೀತಾಳೆ ಎಂಬ ಉದ್ದೇಶದಿಂದ ಸಿಟ್ಟಾಗಿದ್ದ ನಾದಿನಿ ಮಾಲಾ
ಕೊಲೆಯ ಒಂದು ವಾರದ ಹಿಂದೆ ಪೀಟರ್ ಜೊತೆ ಅರುಣ ಸೇರಿಕೊಂಡು ರೇಖಾಳ ಕೊಲೆಗೆ ಸ್ಕೆಚ್ ಹಾಕಿದ್ದರು.
ಅರುಳ್ ಯಾವಾಗ ರೇಖಾಳ ಕೊಲೆ ವಿಚಾರ ಪ್ರಸ್ತಾಪಿಸಿದ್ನೋ ಆಗ್ಲೇ ಪೀಟರ್ ತಾನೇ ರೇಖಾಳನ್ನ ಮುಗಿಸೋಕೆ ಪ್ಲ್ಯಾನ್ ರೂಪಿಸಿಕೊಂಡಿದ್ದ.
ಅದರಂತೆ ಚಿಕ್ಕ ಚಿಕ್ಕ ಹುಡುಗರನ್ನ ಕರೆದುಕೊಂಡು ಹೋಗಿ ರೇಖಾಳನ್ನ ಕೊಲೆಗೈದರಂತೆ.
ಆದ್ರೆ, ಕೊಲೆಗೆ ಸ್ಕೆಚ್ ಹಾಕಿ ದಿನ ನಿಗಧಿ ಮಾಡೋಕು ಮುಂಚೆ ರೇಖಾಳನ್ನ ಮುಗಿಸಿಬಿಟ್ರು ಅನ್ನೋ ಹೇಳಿಕೆಯನ್ನ ಇದೀಗ ಮಾಲಾ ಮಗ ಅರುಳ್ ತನಿಖೆಯ ವೇಳೆ ಬಾಯ್ಬಿಟ್ಟಿದ್ದಾನೆ.
ಸದ್ಯ ಅರುಳ್ ನನ್ನ ಅರೆಸ್ಟ್ ಮಾಡಿದ ಕಾಟನ್ ಪೇಟೆ ಪೊಲೀಸರು
ಅರುಳ್ ನನ್ನು ಕೋರ್ಟ್ ಗೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಿರುವ ಖಾಕಿ ಪಡೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments