Webdunia - Bharat's app for daily news and videos

Install App

ಇತಿಹಾಸಪ್ರಸಿದ್ಧ ಧರ್ಮಸ್ಥಳ ದೇವಾಲಯ

Webdunia
ಬುಧವಾರ, 22 ಜೂನ್ 2016 (16:23 IST)
ಬೆಳ್ತಂಗಡಿ ತಾಲೂಕಿನ ನೇತ್ರಾವತಿ ನದಿ ದಂಡೆಯಲ್ಲಿ ಧರ್ಮಸ್ಥಳ ಪಟ್ಟಣವಿದೆ. ಈ ಪಟ್ಟಣದಲ್ಲಿರುವ ಧರ್ಮಸ್ಥಳ ದೇವಾಲಯ ಶಿವ, ಮಂಜುನಾಥ, ಅಮ್ಮನವರು, ಚಂದ್ರನಾಥ ಮತ್ತು ಧರ್ಮ ದೈವಗಳಿಗೆ ಆವಾಸಸ್ಥಾನವಾಗಿದೆ. ಈ ದೈವಗಳನ್ನು ಕಲಾರಾಹು, ಕಲಾರಕಾಯಿ, ಕುಮಾರಸ್ವಾಮಿ ಮತ್ತು ಕನ್ಯಾಕುಮಾರಿ ಎಂದು ಕರೆಯಲಾಗುತ್ತದೆ.
 
ನವೆಂಬರ್-ಡಿಸೆಂಬರ್‌ ವೇಳೆಯಲ್ಲಿ ಧರ್ಮಸ್ಥಳದಲ್ಲಿ ದೀಪಗಳ ಉತ್ಸವ ಲಕ್ಷದೀಪ ನಡೆಯುತ್ತದೆ. ಪ್ರತಿದಿನ 10000ಕ್ಕೂ ಹೆಚ್ಚು ಯಾತ್ರಿಗಳು ಇಲ್ಲಿಗೆ ದರ್ಶನ ನೀಡಿ ಮಂಜುನಾಥನ ಆಶೀರ್ವಾದ ಪಡೆಯುತ್ತಾರೆ. ಯಾಂತ್ರಿಕ ಅಡುಗೆಮನೆ ಎಲ್ಲಾ ಯಾತ್ರಿಗಳಿಗೂ ಉಚಿತ ಆಹಾರ ಒದಗಿಸುತ್ತದೆ ಮತ್ತು ಆಧುನಿಕ ಸೌಲಭ್ಯಗಳೊಂದಿಗೆ ಅತಿಥಿ ಗೃಹಗಳೂ ಇವೆ. 
 
ಸ್ಥಳೀಯ ದಂತಕಥೆಯೊಂದರ ಪ್ರಕಾರ ಧರ್ಮಸ್ಥಳದ ಶಿವಲಿಂಗವನ್ನು ಅಣ್ಣಪ್ಪ ಎಂಬ ದಿವ್ಯಶಕ್ತಿಯನ್ನು ಹೊಂದಿದ್ದ ಸ್ಥಳೀಯ ವ್ಯಕ್ತಿ ತಂದಿದ್ದ. ಅಣ್ಣಪ್ಪ ಹೆಗ್ಗಡೆ ಕುಟುಂಬದಲ್ಲಿ ಕೆಲಸ ಮಾಡುತ್ತಿದ್ದು,  ಹೆಗ್ಗಡೆಯವರು ಭಗವಾನ್ ಶಿವನನ್ನು ಪೂಜಿಸಲು ಬಯಸಿದ್ದರು. ಅಣ್ಣಪ್ಪ ಅವರಿಗೆ ಲಿಂಗವನ್ನು ತಂದುಕೊಡುವ ಭರವಸೆ ನೀಡಿ ಅಲ್ಲಿಂದ ಅದೃಶ್ಯನಾದ.

ಮರುದಿನ ಬೆಳಿಗ್ಗೆ ಹೆಗ್ಗಡೆಯವರ ಮನೆಗೆ ಕೆಲವೇ ಮೀಟರ್ ದೂರದಲ್ಲಿ ಲಿಂಗ ಪ್ರತಿಷ್ಠಾಪನೆಯಾಗಿತ್ತು.  ಈ ಲಿಂಗವು ಮಂಗಳೂರಿನ ಕದ್ರಿ ದೇವಾಲಯಕ್ಕೆ ಸೇರಿದ್ದೆಂದು ನಂತರ ಗೊತ್ತಾಯಿತು. ಅಷ್ಟರಲ್ಲಿ ಅಣ್ಣಪ್ಪ ಮಾಯವಾಗಿದ್ದು, ಮತ್ತೆ ಕಾಣಿಸಲಿಲ್ಲ. ಧರ್ಮಸ್ಥಳದ ಜನರು ಅಣ್ಣಪ್ಪನನ್ನು ಅಣ್ಣಪ್ಪ ಪಂಜುರ್ಲಿ ಎಂದು ಪೂಜಿಸುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

 

ಸಂಬಂಧಿಸಿದ ಸುದ್ದಿ

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

ಮುಂದಿನ ಸುದ್ದಿ