Webdunia - Bharat's app for daily news and videos

Install App

ಸ್ವಾದಿಷ್ಠ ಓಟ್ಸ್ ಇಡ್ಲಿ

Webdunia
ಶುಕ್ರವಾರ, 22 ಮಾರ್ಚ್ 2019 (19:36 IST)
ಒಟ್ಸ್ ಪೌಷ್ಟಿಕಾಂಶವುಳ್ಳ ಪದಾರ್ಥ. ಇದನ್ನು ತಿನ್ನುವುದರಿಂದ ಶಕ್ತಿ ಹೆಚ್ಚಾಗುವುದರೊಂದಿಗೆ ಮಧುಮೇಹವು ಸಮತೋಲನಕ್ಕೆ ಬರುತ್ತದೆ ಮತ್ತು ತೂಕವನ್ನು ಇಳಿಸುವಲ್ಲಿ ಸಹಕಾರಿಯಾಗಿದೆ.
   ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಓಟ್ಸ್ 1 ಕಪ್
* ಚಿರೋಟಿ ರವೆ 1/2 ಕಪ್
* ಮೊಸರು 1 ಕಪ್
* ಕ್ಯಾರೆಟ್ ತುರಿ 1/2 ಕಪ್
* ಸಾಸಿವೆ 1/2 ಟೀ ಚಮಚ
* ಉದ್ದಿನಬೇಳೆ 1/2 ಟೀ ಚಮಚ
* ಕಡಲೆಬೇಳೆ 1/2 ಟೀ ಚಮಚ
* ಜೀರಿಗೆ 1/2 ಟೀ ಚಮಚ
* ಎಣ್ಣೆ ಅಥವಾ ತುಪ್ಪ 2 ಟೀ ಚಮಚ
* ಕೊತ್ತಂಬರಿ, ಕರಿಬೇವು ಸ್ವಲ್ಪ
* ಸೋಡಾ 1/2 ಟೀ ಚಮಚ
* ಗೋಡಂಬಿ ಸ್ವಲ್ಪ
* ಉಪ್ಪು ರುಚಿಗೆ ತಕ್ಕಷ್ಚು
 
   ತಯಾರಿಸುವ ವಿಧಾನ:
  ಮೊದಲು ಬಾಣಲೆಯಲ್ಲಿ ಒಟ್ಸ್ ಅನ್ನು ಹಾಕಿ 2 ರಿಂದ 3 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಹುರಿಯಬೇಕು. ಅದನ್ನು ಆರಲು ಬಿಡಬೇಕು. ನಂತರ ಮಿಕ್ಸಿಯಲ್ಲಿ ತರಿತರಿಯಾಗಿ ಪುಡಿ ಮಾಡಿಕೊಳ್ಳಬೇಕು. ನಂತರ ಬಾಣಲೆಯಲ್ಲಿ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಅದು ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕಡಲೇಬೇಳೆ, ಸಣ್ಣದಾಗಿ ಹೆಚ್ಚಿದ ಕರಿಬೇವನ್ನು ಹಾಕಿ ಹುರಿದುಕೊಳ್ಳಬೇಕು. ನಂತರ ಈಗಾಗಲೇ ತುರಿದುಕೊಂಡ ಕ್ಯಾರೆಟ್ ಅನ್ನು ಹಾಕಿ ಹುರಿಯಬೇಕು. ನಂತರ ಚಿರೋಟ್ ರವೆಯನ್ನು ಸೇರಿಸಿ ಕೆಂಬಣ್ಣ ಬರುವವರೆಗೆ ಹುರಿದುಕೊಂಡು ಒಲೆಯನ್ನು ಆರಿಸಬೇಕು.

ಹುರಿದ ಪದಾರ್ಥಗಳು ಆರಿದ ನಂತರ ಓಟ್ಸ್, ಮೊಸರು, ಉಪ್ಪು, ನೀರು, ಕೊತ್ತಂಬರಿ ಸೊಪ್ಪು, ಸೋಡಾವನ್ನು ಹಾಕಿ ಮಿಶ್ರಣ ಮಾಡಬೇಕು. ಅದನ್ನು ಕಾಲು ಗಂಟೆ ಹಾಗೆಯೇ ಮುಚ್ಚಿಡಬೇಕು. ನಂತರ ಇಡ್ಲಿ ತಟ್ಟೆಗೆ ತುಪ್ಪವನ್ನು ಸವರಿ ಒಂದೊಂದು ಗೋಡಂಬಿಯನ್ನು ಅದರಲ್ಲಿ ಇಡಬೇಕು. ನಂತರ ಕಲೆಸಿಕೊಂಡ ಹಿಟ್ಟನ್ನು ಹಾಕುತ್ತಾ ಬರಬೇಕು. ನಂತರ ಅದನ್ನು ಇಡ್ಲಿ ಕುಕ್ಕರ್‌ನಲ್ಲಿಟ್ಟು ಮುಚ್ಚಿಟ್ಟು ಬೇಯಿಸಬೇಕು. ಕಾಲು ಗಂಟೆ ಬಿಟ್ಟರೆ ಇಡ್ಲಿ ಬೆಂದಿರುತ್ತದೆ. ನಂತರ ಈ ಇಡ್ಲಿಗೆ ತೆಂಗಿನಕಾಯಿ ಚಟ್ನಿ, ಅಲೂಗಡ್ಡೆ ಸಾಗುವಿನೊಂದಿಗೆ ಸವಿಯಸು ರುಚಿಯಾಗಿರುತ್ತದೆ. 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments