Webdunia - Bharat's app for daily news and videos

Install App

ನವರಾತ್ರಿ ಸ್ಪೆಷಲ್ : ನೈವೇದ್ಯಕ್ಕೆ ನವಧಾನ್ಯ ಉಸ್ಲಿ

Webdunia
ಮಂಗಳವಾರ, 4 ಅಕ್ಟೋಬರ್ 2022 (14:16 IST)
ನವರಾತ್ರಿ ಹಬ್ಬದಲ್ಲಿ ನೈವೇದ್ಯಕ್ಕೆ ಮಾಡುವ ನವಧಾನ್ಯ ಉಸ್ಲಿ ಎಲ್ಲ ಬಗೆಯ ವಿಟಮಿನ್ಗಳನ್ನು ಒಳಗೊಂಡಿದೆ.

ಈ ಉಸ್ಲಿಗೆ 9 ಬಗೆಯ ಕಾಳುಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ಬೇಕಾಗುವ ಪ್ರೋಟಿನ್ ಅಂಶವನ್ನು ಒದಗಿಸುತ್ತದೆ. ಬನ್ನಿ ನವಧಾನ್ಯ ಉಸ್ಲಿ ಮಾಡುವ ವಿಧಾನವನ್ನು ನೋಡೋಣ.

ಬೇಕಾಗುವ ಸಾಮಗ್ರಿಗಳು

* ಹೆಸರು – ಅರ್ಧ ಕಪ್
* ಕಾಬೂಲ್ ಕಡ್ಲೆ- ಅರ್ಧ ಕಪ್
* ಹುರುಳಿ ಕಾಳು- ಅರ್ಧ ಕಪ್
* ಅಲಸಂದೆ ಕಾಳು- ಅರ್ಧ ಕಪ್
* ಕಡ್ಲೆ-ಅರ್ಧ ಕಪ್
* ಬಿಳಿ ಬಟಾಣಿ- ಅರ್ಧ ಕಪ್
* ಬಿಳಿ ಅಲಸಂದೆ ಕಾಳು-ಅರ್ಧ ಕಪ್
* ಶೇಂಗಾ- ಅರ್ಧ ಕಪ್
* ಹಸಿರು ಬಟಾಣಿ- ಅರ್ಧ ಕಪ್
* ಒಣಮೆಣಸು- 2
* ಜೀರಿಗೆ- 1 ಟೀ ಸ್ಪೂನ್
* ತೆಂಗಿನ ಕಾಯಿ- ಅರ್ಧ ಕಪ್
* ಸಾಸಿವೆ- 1 ಟೀ ಸ್ಪೂನ್
* ಹಸಿಮೆಣಸು- 2
* ಕೊತ್ತಂಬರಿ- ಸ್ವಲ್ಪ
* ಇಂಗು- ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಎಣ್ಣೆ- 1 ಕಪ್
* ಕರೀಬೇವು- ಸ್ವಲ್ಪ
* ಉದ್ದಿನ ಬೆಳೆ, ಕಡ್ಲೆ ಬೆಳೆ- 1 ಟೀ ಸ್ಪೂನ್ 

ಮಾಡುವ ವಿಧಾನ

* ಈ 9 ನವಧಾನ್ಯ ಕಾಳುಗಳನ್ನು 6 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ ಇಟ್ಟಿರಬೇಕು. ನಂತರ ಇದನ್ನು ಕುಕ್ಕರ್ನಲ್ಲಿ ಹಾಕಿ 2 ವಿಶಿಲ್ ಕುಗಿಸಿಕೊಳ್ಳಬೇಕು.
* ಜೀರಿಗೆ, ತೆಂಗಿನ ಕಾಯಿಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. 

* ಬಾಣಲೆ ಇಟ್ಟು ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಸಾಸಿವೆ, ಉದ್ದಿನ ಬೆಳೆ, ಕಡ್ಲೆಬೆಳೆ, ಇಂಗು, ಕರಿಬೇವು, ಹಸಿಮೆಣಸು, ಒಣಮೆಣಸು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
* ನಂತರ ಈ ಮೊದಲೇ ಬೇಯಿಸಿಕೊಂಡ ಕಾಳನ್ನು ನೀರಿನಿಂದ ಬೇರ್ಪಡಿಸಿ ಕಾಳುಗಳನ್ನು ಮಾತ್ರ ಈ ಒಗ್ಗರಣೆಯ ಪಾತ್ರೆಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಫ್ರೈ ಮಾಡಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments