Webdunia - Bharat's app for daily news and videos

Install App

ತೊಟ್ಟಿಲಲ್ಲಿ ಮಲಗಿದ್ದ ಮಗುವಿಗೆ ಬರೆ ಹಾಕಿದ ಅಕ್ಕ!

Webdunia
ಮಂಗಳವಾರ, 14 ಡಿಸೆಂಬರ್ 2021 (15:19 IST)
ಭುವನೇಶ್ವರ : 5 ವರ್ಷದ ಬಾಲಕಿಯೊಬ್ಬಳು 1 ತಿಂಗಳ ತನ್ನ ತಂಗಿಗೆ ಬಿಸಿಯಾದ ಫೋರ್ಕ್ನಿಂದ ಬರೆ ಹಾಕಿ ಚಿತ್ರಹಿಂಸೆ ನೀಡಿದ ಘಟನೆ ಒಡಿಶಾದಲ್ಲಿ ನಡೆದಿದೆ.
 
ಮಗುವಿನ ಮೈಮೇಲೆ ಇದ್ದ ಕೆಂಪು ಬಣ್ಣದ ಗುರುತು ನೋಡಿದ ಪೋಷಕರು ಕಂಗಾಲಾಗಿದ್ದರು. ಮಗು ಪ್ರತಿನಿತ್ಯವೂ ನೋವಿನಿಂದ ಅಳುತ್ತಿರುವುದನ್ನು ಕಂಡು ಏನು ಮಾಡಬೇಕೆಂದು ತೋಚದೆ, ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಮಗು ಆರೋಗ್ಯವಾಗಿದೆ ಈ ಗುರುತು ಹೇಗೆ ಆಗುತ್ತಿದೆ ಎನ್ನುವುದನ್ನು ತಿಳಿದಿಲ್ಲ. ಆಗ ಮಗುವಿನ ಪೋಷಕರಿಗೆ ಮನೆಯೊಳಗೆ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸುವಂತೆ ಸಲಹೆ ನೀಡಿದ್ದಾರೆ.
ಆರಂಭದಲ್ಲಿ ಅವರು ಮಗುವಿಗೆ ಸೆಪ್ಸಿಸ್ ಅಥವಾ ಕೆಲವು ಅಲರ್ಜಿಯ ಕಾರಣದಿಂದಾಗಿ ಕಲೆಗಳು ಉಂಟಾಗುತ್ತವೆ ಎಂದು ಭಾವಿಸಿದ್ದರು. ಹೀಗಾಗಿ ಮಗುವಿಗೆ ಒಂದು ತಿಂಗಳ ಕಾಲ ಚಿಕಿತ್ಸೆ ನೀಡಲಾಯಿತು. ಆದರೆ ದೇಹದ ಬೇರೆ ಭಾಗಗಳಲ್ಲೂ ಗಾಯಗಳು ಹೆಚ್ಚುತ್ತಲೇ ಇತ್ತು.

ಕೆಲವು ದಿನಗಳಾದಾಗ ಆ ಕೆಂಪು ಗಾಯವಾದ ಜಾಗದಲ್ಲಿ ಸುಟ್ಟು ಒಣಗಿದ ಗುರುತುಗಳಿದ್ದವು. ಹೀಗಾಗಿ ಇದು ಸುಟ್ಟ ಗಾಯವೆಂದು ವೈದ್ಯರಿಗೆ ಖಚಿತವಾಯಿತು. ಇದು ಯಾರ ಕೆಲಸವೆಂದು ತಿಳಿಯಲು ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಮಗುವಿನ ಪೋಷಕರಿಗೆ ಸೂಚಿಸಿದರು. 

ಮನೆಯಲ್ಲಿರುವ ಸಿಸಿಟಿವಿ ಫೂಟೇಜ್ ನೋಡಿದಾಗ ಅದರಲ್ಲಿ ತಮ್ಮ ಮಗಳು ಯಾರು ಇಲ್ಲದ ಸಮಯವನ್ನು ನೋಡಿ ತೊಟ್ಟಿಲಲ್ಲಿ ಮಲಗಿದ್ದ 1ತಿಂಗಳ ಮಗುವಿನ ಮೇಲೆ ಪ್ರತಿ ದಿನವೂ ಫೋರ್ಕ್ ಅನ್ನು ಬಿಸಿ ಮಾಡಿ ಸುಡುತ್ತಿದ್ದಳು. ಇದನ್ನು ನೋಡಿ ಅವರು ಆಘಾತಕ್ಕೊಳಗಾದರು. ತನ್ನ ತಾಯಿ ಮನೆಯ ಕೆಲಸದಲ್ಲಿ ನಿರತರಾಗಿದ್ದಾಗ, ಅಪ್ಪ ಹೊರಗೆ ಹೋಗಿದ್ದಾಗ ಅವರ ದೊಡ್ಡ ಮಗಳು ಅಡುಗೆಮನೆಗೆ ಹೋಗಿ, ಫೋರ್ಕ್ ಬಿಸಿ ಮಾಡಿ ಮಗುವಿನ ದೇಹದ ಮೇಲೆ ಆ ಚಮಚವನ್ನು ಇಡುತ್ತಿದ್ದಳು. ಆಕೆ ಹುಟ್ಟಿದ ಮೇಲೆ ಅಪ್ಪ-ಅಮ್ಮ ತನ್ನ ಬಗ್ಗೆ ಪ್ರೀತಿ ತೋರಿಸುತ್ತಿಲ್ಲ ಎಂದು ಆಕೆ ಈ ರೀತಿ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುತ್ತಪ್ಪ ರೈ ಮಗ ರಿಕ್ಕಿ ಮೇಲೆ ಗುಂಡಿನ ದಾಳಿ: ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಪ್ರಕಾಶ್ ರೈ

Bappanadu Viral Video: ಬಪ್ಪನಾಡು ದುರ್ಗಾಪರಮೇಶ್ವರಿ ರಥ ಏಕಾಏಕಿ ಕುಸಿತ: ಮೇಲಿದ್ದ ಅರ್ಚಕರನ್ನು ದೇವಿಯೇ ಕಾಪಾಡಿದ್ಳು

Kannada Viral Video: ಬೆಂಗಳೂರಲ್ಲಿ ಬದುಕಬೇಕೆಂದರೆ ಹಿಂದಿ ಕಲಿ: ಕನ್ನಡಿಗ ಆಟೋ ಚಾಲಕನಿಗೆ ಹಿಂದಿವಾಲ ಧಮ್ಕಿ

Arecanut price today: ಅಡಿಕೆಗೂ ಇಲ್ಲ, ಕಾಳುಮೆಣಸಿಗೂ ಇಲ್ಲ, ಇಂದಿನ ಬೆಲೆ ಎಷ್ಟಾಗಿದೆ ನೋಡಿ

DK Shivakumar: ಡಿಕೆ ಶಿವಕುಮಾರ್ ಭೇಟಿಯಾದ ಯಡಿಯೂರಪ್ಪ ಪುತ್ರ ಸಂಸದ ರಾಘವೇಂದ್ರ: ವಿವಾದ ಮಾಡ್ಬೇಡಿ ಎಂದು ರಿಕ್ವೆಸ್ಟ್

ಮುಂದಿನ ಸುದ್ದಿ
Show comments