Publish Date: Wed, 13 Feb 2019 (08:24 IST)
Updated Date: Wed, 13 Feb 2019 (08:26 IST)
ವಿಶಾಖಪಟ್ಟಣಂ: ಮಹಿಳೆಯೊಬ್ಬಳು ತನ್ನ ಮಾತಿಗೆ ವಿರೋಧ ವ್ಯಕ್ತಪಡಿಸಿದ ಆರು ವರ್ಷದ ಹೆಣ್ಣು ಮಗುವನ್ನು ಕೊಲೆ ಮಾಡಿದ್ದಲ್ಲದೇ ಆಕೆಯ ರಕ್ತ ಕುಡಿದ ಭೀಕರ ಘಟನೆ ಆಂದ್ರ ಪ್ರದೇಶದ ವಿಶಾಖ ಪಟ್ಟಣಂನಲ್ಲಿ ನಡೆದಿದೆ.
ವಂತಲಾ ರಶ್ಮು ಇಂತಹ ಕೃತ್ಯ ಎಸಗಿದ ರಾಕ್ಷಸ ಮಹಿಳೆ. ಈಕೆ ತನ್ನ ಆರು ವರ್ಷದ ಸೋದರ ಸಂಬಂಧಿಗೆ ಕಟ್ಟಿಗೆ ತುಂಡುಗಳನ್ನು ತೆಗೆದುಕೊಂಡು ಬರುವಂತೆ ತಿಳಿಸಿದ್ದಾಳೆ. ಇದಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕೋಪಗೊಂಡ ಆಕೆ ರಾಕ್ಷಸಿಯಂತೆ ಆಕೆಯನ್ನು ಕೊಲೆ ಮಾಡಿ ರಕ್ತವನ್ನು ಕುಡಿದಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.