ಗುಜರಾತ್ ರಾಜ್ಯವನ್ನು ಭಾರತದ ಮಾದರಿ ರಾಜ್ಯವನ್ನಾಗಿಸುತ್ತೇವೆ- ಆನಂದಿ ಬೆನ್ ಅವರಿಂದ ತೆರವಾದ ಗುಜರಾತ್ ಮುಖ್ಯಮಂತ್ರಿ ಸ್ಥಾನದ ಅಧಿಕಾರ ವಹಿಸಿಕೊಂಡು ವಿಜಯ್ ರೂಪಾನಿ ಆಡಿದ ಮಾತುಗಳಿವು.
ರಾಜ್ಯದ ಹಿರಿಯ ಸಚಿವ ನಿತಿನ್ ಪಟೇಲ್ ಉಪಮುಖ್ಯಮಂತ್ರಿಯಾಗಿ ನೇಮಕವಾಗುವವರೆಗೂ ಅವರೇ ಗುಜರಾತ್ ಸಿಎಂ ಎನ್ನಲಾಗುತ್ತಿತ್ತು. ಆದರೆ ಕೊನೆಯ ಕ್ಷಣದಲ್ಲಿ ರೂಪಾನಿಯವರೇ ಸಿಎಂ ಸ್ಥಾನವನ್ನಲಂಕರಿಸಿದರು. ರೂಪಾನಿ ಅವರ ಆಯ್ಕೆ ಅವಿರೋಧವಾಗಿತ್ತು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸ್ಪಷ್ಟ ಪಡಿಸಿದ್ದಾರೆ.
ನಮಗಿತ್ತ ಜವಾಬ್ದಾರಿ ಉನ್ನತವಾದದ್ದು. ಇದಕ್ಕೆ ನಾವಿಬ್ಬರು( ತಾನು ಮತ್ತು ನಿತಿನ್ ಪಟೇಲ್)ಆಭಾರಿಯಾಗಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ರೂಪಾನಿ ಹೇಳಿದ್ದಾರೆ.
ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಲಿದ್ದೇವೆ. ಈ ಅವಕಾಶವನ್ನು ನೀಡಿರುವುದಕ್ಕೆ ಕೃತಜ್ಞರಾಗಿದ್ದೇವೆ. ರಾಜ್ಯವನ್ನು ದೇಶಕ್ಕೆ ಮಾದರಿಯಾಗಿಸುವಲ್ಲಿ ನಮ್ಮಿಂದಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ರೂಪಾನಿ ಘೋಷಿಸಿದ್ದಾರೆ.
ಪ್ರಧಾನಿ ಸೇರಿದಂತೆ ಎಲ್ಲರ ಜತೆ ಚರ್ಚೆ ಮಾಡಿ ಅಂತಿಮವಾಗಿ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ' ಸಬ್ಕಾ ಸಾಥ್, ಸಬ್ಕಾ ವಿಕಾಸ್ ' ಬಿಜೆಪಿ ನೀತಿ. ವಿಜಯ್ ರೂಪಾನಿ ಮತ್ತು ನಿತಿನ್ ಪಟೇಲ್ ಎಲ್ಲರನ್ನು ಜತೆಯಾಗಿಸಿಕೊಂಡು ಮುನ್ನಡೆಯಲಿದ್ದಾರೆ ಎಂದು ಗಡ್ಕರಿ ಹೇಳಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.