Select Your Language

Notifications

webdunia
webdunia
webdunia
webdunia

ಇನ್ನು ಮುಂದೆ ಗುಜರಾತ್‌ನಲ್ಲಿ ಅಮಿತ್ ಶಾ ಸರ್ಕಾರ: ಹಾರ್ದಿಕ್

Gujarat
ಉದೈಪುರ , ಶನಿವಾರ, 6 ಆಗಸ್ಟ್ 2016 (14:18 IST)
ಅಮಿತ್ ಶಾ ಅವರ ನಿಷ್ಠಾವಂತ ಎನ್ನಿಸಿಕೊಂಡಿರುವ ವಿಜಯ್ ರೂಪಾನಿ ಮುಖ್ಯಮಂತ್ರಿಯಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ಪಟೇಲ್ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್ ಪಟೇಲ್,  ಇನ್ನು ಮೇಲೆ ಗುಜರಾತ್ ಸರ್ಕಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಂದ ನಡೆಸಲ್ಪಡುತ್ತದೆ ಎಂದು ಹೇಳಿದ್ದಾರೆ.

ರೂಪಾನಿ ಕೇವಲ ನಾಮಕಾವಸ್ತೆ ಮುಖ್ಯಮಂತ್ರಿ. ವಾಸ್ತವವಾಗಿ ಎಲ್ಲಾ ಅಧಿಕಾರ ಶಾ ಕೈಯಲ್ಲಿರುತ್ತದೆ ಎಂದು ಗುಜರಾತ್‌ನಿಂದ ದೂರ ಉಳಿಯುವಂತೆ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಉದೈಪುರದಲ್ಲಿ ವಾಸವಾಗಿರುವ ಹಾರ್ದಿಕ್ ಆರೋಪಿಸಿದ್ದಾರೆ.

ಬಿಜೆಪಿ ಸರ್ಕಾರ ರಾಜ್ಯದ ಪಟೇಲ್ ಸಮುದಾಯದವರನ್ನು ತಪ್ಪುದಾರಿಗೆಳೆಯುತ್ತಿದೆ. ರೂಪಾನಿ ಸಹಾಯಕರನ್ನಾಗಿ ಆಯ್ಕೆಯಾಗಿರುವ ನಿತಿನ್ ಪಟೇಲ್, ಪಟೇಲ್ ಸಮದಾಯದಲ್ಲಿ ತಮ್ಮ ವರ್ಚಸ್ಸನ್ನು ಉಳಿಸಿಕೊಳ್ಳುವ ಬಯಕೆ ಹೊಂದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು  ಎಂದು ಹಾರ್ದಿಕ್ ಸಲಹೆ ನೀಡಿದ್ದಾರೆ.

ನಿತಿನ್ ಪಟೇಲ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿಸುವುದರ ಮೂಲಕ ಶಾ ಹೊಸ ರೀತಿಯ ರಾಜಕೀಯವನ್ನು ಪ್ರಾರಂಭಿಸಿದ್ದಾರೆ, ಪಟೇಲ್ ಸಮುದಾಯಕ್ಕೆ ರಾಜ್ಯದಲ್ಲಿ ಮತ್ತೊಮ್ಮೆ ಅವಮಾನವಾಗಿದೆ ಎಂದು ಕಿಡಿಕಾರಿರುವ ಅವರು ಮೀಸಲಾತಿಗಾಗಿ ಹೋರಾಟವನ್ನು ಮುಂದುವರೆಸುವುದಾಗಿ ಪ್ರತಿಜ್ಞೆಗೈದಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಲಿಂಟನ್ ಭ್ರಷ್ಟಾಚಾರದ ರಾಣಿ : ಟ್ರಂಪ್