Webdunia - Bharat's app for daily news and videos

Install App

ಪತಿಯಿಂದಲೇ ಕೊಲೆಯಾದ ಪತ್ನಿ ಕೊನೆಯ ಬಾರಿಗೆ ಅಂಗಲಾಚಿದ್ದು ಏನು?!

Webdunia
ಗುರುವಾರ, 15 ನವೆಂಬರ್ 2018 (09:11 IST)
ನವದೆಹಲಿ: ಬೇರೆ ಹೆಣ್ಣಿನ ಸಹವಾಸಕ್ಕೆ ಬಿದ್ದು, ಪತ್ನಿಯನ್ನು ಬಾಲ್ಕನಿಯಿಂದ ನೂಕಿ ಹತ್ಯೆಗೈದ ಪತಿಯ ಬಳಿ ಆಕೆ ಅಂತಿಮವಾಗಿ ಹೇಳಿದ್ದೇನು ಗೊತ್ತಾ?

ಗುರುಗಾಂವ್ ನಲ್ಲಿ ಅಕ್ಟೋಬರ್ 27 ರಂದು ಪತಿಯೇ ಪತ್ನಿಯನ್ನು ತಮ್ಮ ಅಪಾರ್ಟ್ ಮೆಂಟ್ ನ ಬಾಲ್ಕನಿಯಿಂದ ನೂಕಿ ಹತ್ಯೆಗೈದ ಘಟನೆ ನಡೆದಿತ್ತು. ಈ ಪ್ರಕರಣದ ಆರೋಪಿ ಪತಿ ವಿಕ್ರಮ್ ಚೌಹಾನ್ (35) ಮತ್ತು ಆತನ ಪ್ರೇಯಸಿ ಶಿಫಾಲಿ ಭಾಸಿನ್ ಎಂಬಾಕೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಪತಿ ವಿಕ್ರಮ್ ಪತ್ನಿ ಹೇಳಿದ ಕೊನೆ ಮಾತೇನೆಂದು ಬಾಯ್ಬಿಟ್ಟಿದ್ದಾನೆ. ವಿಕ್ರಮ್ ಶಿಫಾಲಿ ಜತೆಗೆ ಅಕ್ರಮ ಸಂಬಂಧ ಹೊಂದಿದ್ದನ್ನು ತಿಳಿದ ಪತ್ನಿ ದೀಪಿಕಾ ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ಪತಿ ಪ್ರೇಯಸಿಯ ಸಹಾಯದಿಂದ ಆಕೆಯನ್ನು ಕೊಲೆ ಮಾಡಿದ್ದ. ಬಳಿಕ ಆಕೆ ಬಾಲ್ಕನಿಯಿಂದ ಬಿದ್ದಳೆಂದು ನಾಟಕವಾಡಿದ್ದ. ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ನಿಜ ತಿಳಿದುಬಂದಿತ್ತು.

ಬಾಲ್ಕನಿಯಿಂದ ಪತ್ನಿಯನ್ನು ನೂಕಿ ಕೊಲೆ ಮಾಡುವ ಮೊದಲು ‘ದಯವಿಟ್ಟು ನನ್ನ ಸಾಯಿಸಬೇಡ. ನಮ್ಮ ಮಕ್ಕಳನ್ನು ನಾನು ಇಷ್ಟಪಡುತ್ತೇನೆ’ ಎಂದು ಪತಿ ವಿಕ್ರಮ್ ಬಳಿ ದೀಪಿಕಾ ಅಂಗಲಾಚಿದ್ದಳಂತೆ. ಆದರೂ ಕಟುಕ ಪತಿ ಈ ಕೃತ್ಯವೆಸಗಿದ್ದಾನೆ. ವಿಪರ್ಯಾಸವೆಂದರೆ ಕೊಲೆಗೆ ಸಹಾಯ ಮಾಡಿದ ಆರೋಪದಲ್ಲಿ ಬಂಧಿತಳಾಗಿರುವ ವಿಕ್ರಮ್ ಪ್ರೇಯಸಿ ಶಿಫಾಲಿ ಕೂಡಾ ಗರ್ಭಿಣಿ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಲ್ಲಿಕಾರ್ಜುನ ಖರ್ಗೆ ಪುತ್ರನ ಆರೋಗ್ಯ ಸ್ಥಿತಿ ಗಂಭೀರ

ಎಸ್ ಎಂ ಕೃಷ್ಣರಿಂದಾಗಿ ನನಗೆ ಸಿಎಂ ಸ್ಥಾನ ಸಿಗಲಿಲ್ಲ: ಮಲ್ಲಿಕಾರ್ಜುನ ಖರ್ಗೆ ಬೇಸರ

ಹೆಣ್ಮಕ್ಳು ಸೇಫ್ಟಿಗಾಗಿ ತಪ್ಪದೇ ಈ ಆಪ್ ಡೌನ್ ಲೋಡ್ ಮಾಡಿ

Karnataka Rains: ಈ ವಾರ ತಗ್ಗುತ್ತಾ ಮಳೆಯ ಅಬ್ಬರ

ಅತ್ಯಾಚಾರ ಪ್ರಕರಣದಲ್ಲಿ ಬಿಜೆಡಿ ಕಾರ್ಪೊರೇಟರ್ ಬಂಧನ, ಪಕ್ಷದಿಂದ ಅಮಾನತು

ಮುಂದಿನ ಸುದ್ದಿ
Show comments