Webdunia - Bharat's app for daily news and videos

Install App

ದುಬೈನಿಂದ ಬಂದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಹತ್ಯೆಗೈದು ಸೂಟ್‌ಕೇಸ್‌ನಲ್ಲಿ ತುಂಬಿದ ಪತ್ನಿ

Sampriya
ಮಂಗಳವಾರ, 22 ಏಪ್ರಿಲ್ 2025 (14:12 IST)
ಗೋರಖ್​ಪುರ: ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ತನ್ನ ಪತಿಯಲ್ಲಿ ಹತ್ಯೆಗೈದು ಸೂಟ್‌ಕೇಸ್‌ನಲ್ಲಿ ತುಂಬಿಸಿಟ್ಟು ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.   

10 ದಿನಗಳ ಹಿಂದೆ ದುಬೈನಿಂದ ಬಂದಿದ್ದ ವ್ಯಕ್ತಿಯನ್ನು ಆತನ ಪತ್ನಿ ಮತ್ತು ಪ್ರಿಯಕರ ಸೇರಿ ಕೊಲೆ ಮಾಡಿದ್ದಾರೆ.  ಶವವನ್ನು ಎರಡು ಭಾಗಗಳಾಗಿ ಕತ್ತರಿಸಿ ಸೂಟ್‌ಕೇಸ್‌ನಲ್ಲಿ ತುಂಬಿಸಿ ಮನೆಯಿಂದ ದೂರದ ಹೊಲದಲ್ಲಿ ಎಸೆದಿದ್ದರು.

ಭಾನುವಾರ ಬೆಳಗ್ಗೆ ದಿಯೋರಿಯಾ ಜಿಲ್ಲೆಯ ಪತ್ಖೌಲಿ ಗ್ರಾಮದ ರೈತನೊಬ್ಬರ ಹೊಲದಲ್ಲಿ ಟ್ರಾಲಿ ಬ್ಯಾಗ್ ಪತ್ತೆಯಾಗಿತ್ತು. ಅದನ್ನು ತೆರೆದು ನೋಡಿದಾಗ ವ್ಯಕ್ತಿಯೊಬ್ಬರ ದೇಹದ ಮೇಲ್ಭಾಗ ಮತ್ತು ಕೆಳಭಾಗ ಕತ್ತರಿಸಿ ಇಟ್ಟಿದ್ದನ್ನು ಕಂಡರು ಎಂದು ಪೊಲೀಸರು ತಿಳಿಸಿದ್ದಾರೆ. ಸೂಟ್‌ಕೇಸ್‌ಗೆ ಜೋಡಿಸಲಾಗಿದ್ದ ಏರ್‌ಲೈನ್ ಟ್ಯಾಗ್ ಮೂಲಕ ಪೊಲೀಸರು ಮೃತ ವ್ಯಕ್ತಿ ನೌಶಾದ್ ಅಹ್ಮದ್ (38) ಅವರನ್ನು ಗುರುತಿಸಿದ್ದಾರೆ.

ನೌಶಾದ್ ಅವರ ಮನೆಗೆ ಪೊಲೀಸರು ತೆರಳಿ ಪತ್ನಿ ರಜಿಯಾ (30) ಎಂಬಾಕೆಯನ್ನು ವಿಚಾರಿಸಿದ್ದಾರೆ. ಮನೆಯೊಳಗಿದ್ದ ರಕ್ತದ ಕಲೆಗಳು ಮತ್ತು ಇನ್ನೊಂದು ಸೂಟ್‌ಕೇಸ್ ಅನುಮಾನಕ್ಕೆ ಕಾರಣವಾಯಿತು. ಆಗ ವಿಚಾರಣೆ ಮಾಡಿದಾಗ ನೌಶಾದ್ ಅವರ ಸೋದರಳಿಯ ರುಮಾನ್ (28) ಸಹಾಯದಿಂದ ತನ್ನ ಗಂಡನನ್ನು ಕೊಂದಿದ್ದಾಗಿ ಪತ್ನಿ ಒಪ್ಪಿಕೊಂಡಿದ್ದಾಳೆ. ರಜಿಯಾ ಮತ್ತು ರುಮಾನ್ ವಿವಾಹೇತರ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ.

ಭಾನುವಾರ ಬೆಳಗಿನಜಾವ 2 ಗಂಟೆ ಸುಮಾರಿಗೆ ಈ ಕೊಲೆ ನಡೆದಿದೆ. ರಜಿಯಾ, ರುಮಾನ್ ಮತ್ತು ಅವರ ಸ್ನೇಹಿತ ಹಿಮಾಂಶು ಅವರು ಸಂಚು ರೂಪಿಸಿದ್ದಾರೆ. ನೌಶಾದ್​ ಅಹ್ಮದ್​ ಅವರ ದೇಹವನ್ನು ಎರಡು ಭಾಗಗಳಾಗಿ ಕತ್ತರಿಸಿ, ಸೂಟ್‌ಕೇಸ್‌ನಲ್ಲಿ ತುಂಬಿಸಿ ವಾಹನದ ಮೂಲಕ ಸಾಗಿಸಿ ಮನೆಯಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ಹೊಲದಲ್ಲಿ ಎಸೆದಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Hizab vs Janeu: ನಿಮಗೆ ಜನಿವಾರ ಎಷ್ಟು ಮುಖ್ಯವೋ ನಮಗೆ ಹಿಜಾಬ್ ಕೂಡಾ ಮುಖ್ಯ: ಅಲಿಯಾ ಅಸ್ಸಾದಿ ಟ್ವೀಟ್ ಕಿಡಿ

Mallikarjun Kharge: ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮಕ್ಕೆ ಜನರೇ ಇಲ್ಲ: ಕಾಂಗ್ರೆಸ್ ಜಿಲ್ಲಾಧ್ಯಕ್ಷನೇ ಸಸ್ಪೆಂಡ್

DGP Om Prakash Murder case: ಓಂ ಪ್ರಕಾಶ್ ಹತ್ಯೆಗೆ ಪ್ಲ್ಯಾನ್ ನಡೆದಿದ್ದು ಈಗಲ್ಲ: ಅಮ್ಮ, ಮಗಳ ಮಾಸ್ಟರ್ ಪ್ಲ್ಯಾನ್ ರಿವೀಲ್

Bengaluru DRDO officer: ಡಿಆರ್ ಡಿಒ ಆಫೀಸರ್ ನ ಅರೆಸ್ಟ್ ಮಾಡಿ ಎಂದ ಕನ್ನಡಿಗರು

Arecanut Price today: ಅಡಿಕೆ ಬೆಲೆ ಇಂದು ಎಷ್ಟಾಗಿದೆ ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments