Select Your Language

Notifications

webdunia
webdunia
webdunia
webdunia

Rahul Gandhi: ಗಾಂಧೀಜಿ ಬಗ್ಗೆ ತಪ್ಪು ಮಾಹಿತಿ ಕೊಟ್ರಾ ರಾಹುಲ್ ಗಾಂಧಿ: ಲೆಹರ್ ಸಿಂಗ್ ಟ್ವೀಟ್ ನಲ್ಲಿ ಏನಿದೆ ನೋಡಿ

Rahul Gandhi

Krishnaveni K

ನವದೆಹಲಿ , ಭಾನುವಾರ, 20 ಏಪ್ರಿಲ್ 2025 (20:25 IST)
ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಪಾಡ್ ಕಾಸ್ಟ್ ಒಂದರಲ್ಲಿ ಮಾತನಾಡುವ ಎಡವಟ್ಟು ಮಾಡಿಕೊಂಡಿದ್ದಾರೆ. ಮಹಾತ್ಮಾ ಗಾಂಧೀಜಿಯವರನ್ನು ದಕ್ಷಿಣ ಆಫ್ರಿಕಾ ಬದಲು ಇಂಗ್ಲೆಂಡ್ ನಲ್ಲಿ ರೈಲಿನಿಂದ ಇಳಿಸಲಾಯಿತು ಎಂದಿದ್ದು ಬಿಜೆಪಿ ಟ್ರೋಲ್ ಮಾಡಿದೆ.

ಸಂದೀಪ್ ದೀಕ್ಷಿತ್ ಅವರೊಂದಿಗಿನ ಪಾಡ್ ಕಾಸ್ಟ್ ನಲ್ಲಿ ರಾಹುಲ್ ಗಾಂಧಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮುತ್ತಜ್ಜ ಜವಹರಲಾಲ್ ನೆಹರೂ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಬಗ್ಗೆ ಮಾತನಾಡಿದ್ದಾರೆ.

ಆದರೆ ಗಾಂಧೀಜಿಯವರ ಬಗ್ಗೆ ಮಾತನಾಡುವಾಗ ಯಡವಟ್ಟು ಮಾಡಿಕೊಂಡಿದ್ದಾರೆ. ಅಸಲಿಗೆ ಗಾಂಧೀಜಿಯವರನ್ನು ಕರಿಯ ಎಂಬ ಕಾರಣಕ್ಕೆ ದಕ್ಷಿಣ ಆಫ್ರಿಕಾದಲ್ಲಿ ರೈಲಿನಿಂದ ಮಧ್ಯದಲ್ಲೇ ಇಳಿಸಲಾಗಿತ್ತು. ಇದಾದ ನಂತರ ಅವರು ವರ್ಣಬೇಧದ ವಿರುದ್ಧ ಹೋರಾಟ ಆರಂಭಿಸಿದರು. ಆದರೆ ರಾಹುಲ್ ಗಾಂಧಿ ಮಾತನಾಡುವಾಗ ಇಂಗ್ಲೆಂಡ್ ಎಂದಿದ್ದಾರೆ.

ಇದನ್ನು ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಲೆಹರ್ ಸಿಂಗ್, ರಾಹುಲ್ ಗಾಂಧಿ ನೋಡಿ ಯಾರೂ ಇತಿಹಾಸ ಕಲಿಯಬೇಡಿ. ಅವರು ಗಾಂಧೀಜಿ, ತಮ್ಮ ಮುತ್ತಜ್ಜ ನೆಹರೂ ಬಗ್ಗೆಯೇ ತಪ್ಪಾಗಿ ಹೇಳಿದ್ದಾರೆ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರಕ್ತದ ಮಡುವಿನಲ್ಲಿ ನಿವೃತ್ತ ಪೊಲೀಸ್ ಓಂ ಪ್ರಕಾಶ್‌ ಮೃತದೇಹ ಪತ್ತೆ, ಮನೆಯವರೇ ಮೇಲೆ ಡೌಟ್‌