Select Your Language

Notifications

webdunia
webdunia
webdunia
webdunia

ಕೊವಿಡ್ ನಿಂದ ಸತ್ತ ವ್ಯಕ್ತಿಯ ಕುಟುಂಬಸ್ಥರು ವೈದ್ಯರ ಮೇಲೆ ಹಲ್ಲೆ ಮಾಡಿದ್ದೇಕೆ?

ಕೊವಿಡ್ ನಿಂದ ಸತ್ತ ವ್ಯಕ್ತಿಯ ಕುಟುಂಬಸ್ಥರು ವೈದ್ಯರ ಮೇಲೆ ಹಲ್ಲೆ ಮಾಡಿದ್ದೇಕೆ?
ಇಂದೋರ್ , ಸೋಮವಾರ, 26 ಏಪ್ರಿಲ್ 2021 (07:09 IST)
ಇಂದೋರ್ : ಮೃತ ಕೊವಿಡ್-19ರೋಗಿಯ ಕುಟುಂಬ ಸದಸ್ಯರು ವೈದ್ಯರು ಮತ್ತು ಪೊಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ಇಂದೋರ್ ನಲ್ಲಿ ನಡೆದಿದೆ.

ಕುಟುಂಬಸ್ಥರು ಮೃತ ವ್ಯಕ್ತಿಯ ದೇಹವನ್ನು ಪ್ಯಾಕ್ ಮಾಡಲಾದ ಚೀಲದಲ್ಲಿ ರಕ್ತವನ್ನು ನೋಡಿದ್ದಾರೆ. ಆಗ ಕುಟುಂಬಸ್ಥರು ವೈದ್ಯರು ರೋಗಿಯ ಅಂಗಾಂಗಗಳನ್ನು ತೆಗೆದಿದ್ದಾರೆ ಎಂದು ಆರೋಪಿಸಿ ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ. ಆಗ ಪೊಲೀಸರು ಮಧ್ಯ ಪ್ರವೇಶಿಸಿದಾಗ ಪೊಲೀಸರ ಮೇಲೆಯು ಹಲ್ಲೆ ಮಾಡಲು ಶುರು ಮಾಡಿದ್ದಾರೆ.

ಈ ಘಟನೆಯಲ್ಲಿ ಪೊಲೀಸರಿಗೆ ಹಾಗೂ ವೈದ್ಯರಿಗೆ ತೀವ್ರ ಪೆಟ್ಟಾಗಿದ್ದು, ಪೊಲೀಸರು ಮೃತ ವ್ಯಕ್ತಿಯ ಕುಟುಂಬಸ್ಥರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ನೇಹಿತನೊಂದಿಗೆ ತಿರುಗಾಡಲು ಹೋದ ಮಗನಿಗೆ ಇಂತಹ ಗತಿ ತಂದ ತಂದೆ