Webdunia - Bharat's app for daily news and videos

Install App

Tamilnadu: ತಮಿಳುನಾಡಿನಲ್ಲಿ ಎಐಡಿಎಂಕೆ ಜೊತೆಗೆ ಮೈತ್ರಿ ಹಿಂದಿದೆ ಬಿಜೆಪಿ ಭಾರೀ ಲೆಕ್ಕಾಚಾರ

Krishnaveni K
ಶನಿವಾರ, 12 ಏಪ್ರಿಲ್ 2025 (08:25 IST)
ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ಸ್ಥಳೀಯ ಪಕ್ಷ ಎಐಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದೆ. ಇದರ ಹಿಂದೆ ಬಿಜೆಪಿ ಹೈಕಮಾಂಡ್ ಭಾರೀ ಲೆಕ್ಕಾಚಾರ ಹೊಂದಿದೆ.

ಅಣ್ಣಾಮಲೈ ನಾಯಕತ್ವದಲ್ಲಿ ಸಿಗದ ಗೆಲುವು
ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅಧಿಕಾರ ಸ್ವೀಕರಿಸಿದಾಗ ಬಿಜೆಪಿಗೆ ಭಾರೀ ನಿರೀಕ್ಷೆಯಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ಸ್ವತಃ ಅಣ್ಣಾಮಲೈ ಸೋತರು. ಇದರಿಂದಾಗಿ ಏಕಾಂಗಿಯಾಗಿ ಸ್ಪರ್ಧಿಸಿ ಗೆಲ್ಲುವುದು ಕಷ್ಟ ಎಂದು ಬಿಜೆಪಿ ಅರ್ಥ ಮಾಡಿಕೊಂಡಿದೆ.

ತಮಿಳುನಾಡಿನಲ್ಲಿ ಸ್ಥಳೀಯ ಪಕ್ಷದ ನೆರವು ಬೇಕೇ ಬೇಕು
ತಮಿಳುನಾಡು ರಾಜಕೀಯವೇ ಹಾಗೆ. ಹಿಂದಿನಿಂದಲೂ ಇಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ಸ್ಥಳೀಯ ಪಕ್ಷಗಳೇ ಮೇಲುಗೈ ಸಾಧಿಸುತ್ತಿವೆ. ಜಯಲಲಿತಾ ತೀರಿಕೊಂಡ ನಂತರ ಎಐಡಿಎಂಕೆ ಕೊಂಚ ಕಳೆಗುಂದಿದೆ. ಆದರೂ ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಇಲ್ಲಿ ಗೆಲ್ಲಬೇಕಾದರೆ ಸ್ಥಳೀಯ ಪಕ್ಷದ ನೆರವು ಬೇಕು ಎಂಬುದನ್ನು ಅರ್ಥ ಮಾಡಿಕೊಂಡಿದೆ. ಸದ್ಯಕ್ಕೆ ಡಿಎಂಕೆ ಇಲ್ಲಿ ಪ್ರಬಲ ಪಕ್ಷ. ಇದನ್ನು ಮಣಿಸಬೇಕಾದರೆ ಮತ್ತೊಂದು ಸ್ಥಳೀಯ ಪಕ್ಷದ ಬೆಂಬಲ ಬೇಕೇ ಬೇಕು ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಂಡಿದೆ.

ದಕ್ಷಿಣ ಭಾರತ ಕೈ ತಪ್ಪಿ ಹೋಗುವ ಭೀತಿ
ಬಿಜೆಪಿಗೆ ಇತ್ತೀಚೆಗೆ ದಕ್ಷಿಣ ಭಾರತದ ಮೇಲೆ ಹಿಡಿತ ತಪ್ಪುತ್ತಿದೆ. ಈಗಾಗಲೇ ಕೇರಳ, ಕರ್ನಾಟಕ, ತಮಿಳುನಾಡು, ತೆಲಂಗಾಣ ಇಂಡಿಯಾ ಒಕ್ಕೂಟದ ಕೈಯಲ್ಲಿದೆ. ಹೀಗಾಗಿ ತಮಿಳುನಾಡಿನ ಮೂಲಕ ಮತ್ತೆ ದಕ್ಷಿಣ ಭಾರತದಲ್ಲಿ ತನ್ನ ಆಧಿಪತ್ಯ ಸಾಧಿಸಲು ಅಧಿಕಾರ ಸಿಗಬೇಕಿದೆ. ಇದಕ್ಕೆ ಎಐಡಿಎಂಕೆ ಮೈತ್ರಿಗೆ ಮುಂದಾಗಿದೆ. ಇದರ ಜೊತೆಗೆ ಕ್ಷೇತ್ರ ವಿಂಗಡಣೆ ವಿಚಾರದಲ್ಲಿ ದಕ್ಷಿಣ ಭಾರತದ ದೊಡ್ಡ ರಾಜ್ಯವೊಂದರ ಬೆಂಬಲ ಸಿಕ್ಕರೆ ಆನೆಬಲ ಬಂದಂತೆ ಎಂಬುದು ಬಿಜೆಪಿ ಲೆಕ್ಕಾಚಾರವಿರಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಒಂದು ಶವಚೀಲದಲ್ಲಿ ಎರಡು ತಲೆ.. ನಮಗೆ ಪೂರ್ತಿ ದೇಹವೇ ಬೇಕು ಕುಟುಂಬಸ್ಥರ ಪಟ್ಟು

ಅಹಮದಾಬಾದ್ ವಿಮಾನ ದುರಂತ: ಆರ್ ಎಸ್ಎಸ್, ಮುಸ್ಲಿಮರು ಮಾಡುತ್ತಿರುವ ಕೆಲಸ ನೋಡಿ

ಅಹಮದಾಬಾದ್ ವಿಮಾನ ದುರಂತ ಸ್ಥಳಕ್ಕೆ ಬರುತ್ತಿರುವ ಜನರಿಂದಲೇ ತನಿಖಾಧಿಕಾರಿಗಳಿಗೆ ತಲೆನೋವು

ನಮ್ಮವರ ಮೃತದೇಹ ಕೊಡಿ.. ಅಹಮದಾಬಾದ್ ಆಸ್ಪತ್ರೆ ಮುಂದೆ ಕುಟುಂಬಸ್ಥರ ಸಾಲು

ವಿಮಾನದ ಚಕ್ರಗಳು ಎಂಥಾ ಅಪಘಾತಕ್ಕೂ ಬೇಗ ಹಾನಿಯಾಗಲ್ಲ ಯಾಕೆ

ಮುಂದಿನ ಸುದ್ದಿ
Show comments