Select Your Language

Notifications

webdunia
webdunia
webdunia
webdunia

ಶೌರ್ಯಚಕ್ರ ವಿಜೇತ ಯಾರು ಗೊತ್ತ?

ಶೌರ್ಯಚಕ್ರ ವಿಜೇತ ಯಾರು ಗೊತ್ತ?
ಹೊಸದಿಲ್ಲಿ , ಗುರುವಾರ, 9 ಡಿಸೆಂಬರ್ 2021 (10:19 IST)
ಹೊಸದಿಲ್ಲಿ : 2020ರ ಅಕ್ಟೋಬರ್ 12ರಂದು 10 ಸಾವಿರ ಅಡಿಗಳಷ್ಟು ಎತ್ತರದಲ್ಲಿ ಪರೀಕ್ಷಾರ್ಥ ಹಾರಾಟದ ವೇಳೆ ತುರ್ತು ಭೂಸ್ಪರ್ಶದ ಅಪಾಯದಲ್ಲಿದ್ದ ಎಲ್ಸಿಎ ತೇಜಸ್ ಯುದ್ಧ ವಿಮಾನ,

ಬಹಳ ಚಾಣಾಕ್ಷತೆಯಿಂದ ಉಳಿಸಿದ ಸಾಹಸಕ್ಕಾಗಿ ಸ್ವಾತಂತ್ರ್ಯ ದಿನಾಚರಣೆಯಂದು ಶೌರ್ಯ ಚಕ್ರ ಪುರಸ್ಕಾರಕ್ಕೆ ಭಾಜನರಾಗಿದ್ದ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮಾತ್ರ ದುರಂತದಲ್ಲಿ ಬದುಕುಳಿದಿದ್ದಾರೆ. ಅವರಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿವೆ. ವೆಲ್ಲಿಂಗ್ಟನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವರುಣ್ ಅಪಾರ ಕೌಶಲವಿರುವ ಪೈಲಟ್ ಮಾತ್ರವಲ್ಲ, ಪ್ರತಿಕೂಲ ಪರಿಸ್ಥಿತಿಯಲ್ಲೂ ಕ್ಷಮತೆಯನ್ನು ಕಾಯ್ದುಕೊಳ್ಳಬಲ್ಲ ಶಕ್ತಿ ಇರುವ ವ್ಯಕ್ತಿ. ಇದನ್ನು ರಕ್ಷಣಾ ಸಚಿವಾಲಯ ಗುರುತಿಸಿತ್ತು. ಅವರಿಗೆ ಶೌರ್ಯ ಪ್ರಶಸ್ತಿ ನೀಡುವಾಗ ಈ ಅಂಶಗಳನ್ನು ವಿಶೇಷವಾಗಿ ಉಲ್ಲೇಖಿಸಲಾಗಿತ್ತು.
ಅವರು ವೈಫಲ್ಯವನ್ನು ಸರಿಯಾಗಿ ಗುರುತಿಸಿದರು ಮತ್ತು ಕಡಿಮೆ ಎತ್ತರಕ್ಕೆ ಇಳಿಯಲು ಪ್ರಾರಂಭಿಸಿದರು. ಅವರೋಹಣ ಮಾಡುವಾಗ, ಫ್ಲೈಟ್ ಕಂಟ್ರೋಲ್ ಸಿಸ್ಟಮ್ ವಿಫಲವಾಯಿತು ಮತ್ತು ವಿಮಾನವು ಸಂಪೂರ್ಣ ನಿಯಂತ್ರಣದಿಂದ ದೂರವಾಯಿತು.
ಆದರೂ ಎದೆಗುಂದದೆ ವಿಮಾನವನ್ನು ಇಳಿಸಿದ್ದರು. ಉನ್ನತ ಮಟ್ಟದ ವೃತ್ತಿಪರತೆ, ಸಂಯಮ ಮತ್ತು ತ್ವರಿತ ನಿರ್ಧಾರ ತೆಗೆದುಕೊಳ್ಳುವುದು, ತಮ್ಮ ಜೀವ ಅಪಾಯದಲ್ಲಿದ್ದರೂ ಎದೆಗುಂದದೆ ಸ್ವರಕ್ಷಣೆ ಮತ್ತು ವಿಮಾನದ ರಕ್ಷಣೆ ಮಾಡುವುದು, ಅದು ಬಿದ್ದರೆ ಆ ಸ್ಥಳದಲ್ಲಿ ಉಂಟಾಗುವ ಭಾರಿ ಅನಾಹುತವನ್ನು ತಪ್ಪಿಸಿ ಶೌರ್ಯ ಮೆರೆದಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಫ್ರೈಡ್ ರೈಸ್ ನಲ್ಲಿ ವಿಷವಿಕ್ಕಿ ಹೆಂಡತಿ-ಮಕ್ಕಳನ್ನು ಕೊಂದ ಪಾಪಿ