Webdunia - Bharat's app for daily news and videos

Install App

ವಾಟ್ಸಪ್ ಮೆಸೇಜ್ ಹೊಸ ಫೀಚರ್!

Webdunia
ಸೋಮವಾರ, 6 ಡಿಸೆಂಬರ್ 2021 (18:36 IST)
ವಾಟ್ಸಪ್ ಭಾರತದ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ.
ಇದನ್ನು ಜನರು ವೈಯಕ್ತಿಕ ಹಾಗೂ ವೃತ್ತಿಪರ ಸಂವಹನಕ್ಕಾಗಿ ಬಳಸುತ್ತಾರೆ. ವಾಟ್ಸಪ್ ಹೊಸ ಹೊಸ ಫೀಚರ್ಗಳೊಂದಿಗೆ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದು, ಬಳಕೆದಾರರಿಗೆ ಅನುಕೂಲಕರ ಅಪ್ಗ್ರೇಡ್ ಅನ್ನೂ ತರುತ್ತಿದೆ.
ವಾಟ್ಸಪ್ ಗುಂಪನ್ನು ತಯಾರಿಸಿ, ಅದರಲ್ಲಿ ತನ್ನ ಸಂದೇಶವನ್ನು ಕಳುಹಿಸುವಂತೆ ಬಳಕೆದಾರರಿಗೆ ಸೂಚಿಸುತ್ತದೆ. ಆದರೆ ವಾಟ್ಸಪ್ನಲ್ಲಿ ಗುಂಪನ್ನು ರಚಿಸದೇ 5 ಸಂಪರ್ಕಗಳಿಗಿಂತಲೂ ಹೆಚ್ಚು ಜನರಿಗೆ ಸಂದೇಶಗಳನ್ನು ಒಂದೇ ಬಾರಿ ಕಳುಹಿಸಬಹುದು ಎಂಬ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲ.
ಗುಂಪನ್ನು ರಚಿಸುವ ಬದಲು ವಾಟ್ಸಪ್ ಬಳಕೆದಾರರು ಹಲವಾರು ಬಳಕೆದಾರರಿಗೆ ಸಂದೇಶ, ಚಿತ್ರ ಅಥವಾ ವೀಡಿಯೋಗಳನ್ನು ಕಳುಹಿಸಲು ಇನ್ನೊಂದು ಮಾರ್ಗವಿದೆ. ಈ ಟ್ರಿಕ್ ಮೂಲಕ ಒಂದೇ ಬಾರಿ 256 ಜನರೊಂದಿಗೆ ಮಾಹಿತಿಗಳನ್ನು ಹಂಚಿಕೊಳ್ಳಬಹುದು. ವಾಟ್ಸಪ್ನ ಈ ವೈಶಿಷ್ಟ್ಯವನ್ನು ಬ್ರಾಡ್ಕಾಸ್ಟ್ ಲಿಸ್ಟ್ ಎಂದು ಕರೆಯಲಾಗುತ್ತದೆ.
ಬ್ರಾಡ್ಕಾಸ್ಟ್ ಮೆಸೇಜ್ ಮಾಡೋದು ಹೇಗೆ?
ವಾಟ್ಸಪ್ ಅಪ್ಲಿಕೇಶನ್ಗೆ ಹೋಗಿ ಬಲಭಾಗದ ಮೇಲಿನ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ. ಅದರಲ್ಲಿ ಕಂಡು ಬರುವ ಹಲವು ಆಯ್ಕೆಗಳಲ್ಲಿ ಎರಡನೆಯ ನ್ಯೂ ಬ್ರಾಡ್ಕಾಸ್ಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಬ್ರಾಡ್ಕಾಸ್ಟ್ ಮಾಡಲು ಸಂಪರ್ಕಗಳನ್ನು ಆಯ್ಕೆ ಮಾಡುವಂತೆ ಅದು ಸೂಚಿಸುತ್ತದೆ. ನಿಮಗೆ ಬೇಕಾದಷ್ಟು ಸಂಪರ್ಕಗಳನ್ನು ಆಯ್ಕೆಮಾಡಿ. ಇದರಲ್ಲಿ 256 ಸಂಪರ್ಕಗಳನ್ನು ಆಯ್ಕೆ ಮಾಡಬಹುದು.
ಎಲ್ಲಾ ಸಂಪರ್ಕಗಳನ್ನು ಕ್ಲಿಕ್ ಮಾಡಿದ ನಂತರ ಬ್ರಾಡ್ಕಾಸ್ಟ್ ವಿಂಡೋವನ್ನು ರಚಿಸಲು ಟಿಕ್ (ಸರಿ) ಮಾರ್ಕ್ ಮೇಲೆ ಕ್ಲಿಕ್ ಮಾಡಿ. ಆಯ್ಕೆ ಮಾಡಿದ ವಾಟ್ಸಪ್ ಸಂಪರ್ಕಗಳಿಗೆ ಒಂದೇ ಬಾರಿ ಯಾವುದೇ ಸಂದೇಶ, ಫೋಟೋ ಅಥವಾ ವೀಡಿಯೋವನ್ನು ಕಳುಹಿಸಲು ನೀವು ಈ ವಿಂಡೋವನ್ನು ಬಳಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಆಗಿ ಸಿದ್ದರಾಮಯ್ಯ 5 ವರ್ಷ ಪೂರ್ಣಗೊಳಿಸುತ್ತಾರೆ: ಡಾ.ಯತೀಂದ್ರ

ಭಾರೀ ಮಳೆಯ ಮುನ್ಸೂಚನೆ: 24ಗಂಟೆಗಳ ಕಾಲ ಚಾರ್‌ ಧಮ್ ಯಾತ್ರೆ ಸ್ಥಗಿತ

ಪ್ರತಿ ವರ್ಷವೂ ಯೋಗ ದಿನ ಅಂದುಕೊಂಡದಕ್ಕಿಂತ ವಿಶೇಷವಾಗಿರುತ್ತದೆ: ಪ್ರಧಾನಿ ಮೋದಿ ಮೆಚ್ಚುಗೆ

ವಿಷಪ್ರಾಶನದಿಂದ ಐದು ಹುಲಿಗಳು ಸಾವು ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಿದ್ದರಾಮಯ್ಯ

ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ: ಮೂರು ಮಂದಿ ಸಾವು, ಹಲವರಿಗೆ ಗಾಯ

ಮುಂದಿನ ಸುದ್ದಿ
Show comments