Webdunia - Bharat's app for daily news and videos

Install App

ಮತ ಎಣಿಕೆ ದಿನ ದೇಶವೇ ಕುತೂಹಲದಿಂದ ಕಾಯುತ್ತಿದ್ದರೆ ಪ್ರಧಾನಿ ಮೋದಿ ಮಾತ್ರ ಹೀಗಿದ್ದರು!

Webdunia
ಭಾನುವಾರ, 26 ಮೇ 2019 (09:14 IST)
ನವದೆಹಲಿ: ಲೋಕಸಭಾ ಚುನಾವಣೆಯ ಮತ ಎಣಿಕೆ ದಿನ ಯಾವ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಇಡೀ ದೇಶವೇ ಟಿವಿ ಮುಂದೆ ಕೂತು ಕುತೂಹಲದಿಂದ ಫಲಿತಾಂಶ ನೋಡುತ್ತಿದ್ದರೆ ಪ್ರಧಾನಿ ಮೋದಿ ಮಾತ್ರ ಬೇರೆಯೇ ಕೆಲಸ ಮಾಡುತ್ತಿದ್ದರು!


ಗೆದ್ದ ಬಳಿಕ ಬಿಜೆಪಿ ಕಚೇರಿಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವ ಮೋದಿ ನಾನು ಈವತ್ತು ಫಲಿತಾಂಶದ ಬಗ್ಗೆ ಹೆಚ್ಚು ಗಮನಕೊಡಲಿಲ್ಲ. ಎಲ್ಲೆಲ್ಲಿ ಎಷ್ಟು ಸೀಟು ಬಂದಿದೆ ಎಂದು ನೋಡಲು ನನಗೆ ಸಮಯ ಸಿಗಲಿಲ್ಲ. ನಾನು ಬೇರೆ ಕೆಲಸದಲ್ಲಿ ಮಗ್ನನಾಗಿದ್ದೆ ಎಂದು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಆ ಕೆಲಸಗಳು ಏನೆಂದು ಬಹಿರಂಗವಾಗಿದೆ. ಪ್ರಧಾನಿ ಮೋದಿ ಬೆಳಿಗ್ಗೆಯಿಂದಲೂ ತಮಗೆ ಬಂದ ಈಮೇಲ್ ಗಳನ್ನು ನೋಡುತ್ತಾ, ಫಾರ್ವರ್ಡ್ ಮಾಡುತ್ತಾ, ಉತ್ತರಿಸುತ್ತಾ ತಣ್ಣಗೆ ತಮ್ಮ ಕೊಠಡಿಯಲ್ಲಿ ಕೂತಿದ್ದರಂತೆ. 11 ಗಂಟೆಯ ನಂತರವಷ್ಟೇ ತಮ್ಮ ಆಪ್ತರ ಬಳಿ ಕೇಳಿ ಬಿಜೆಪಿ ಲೀಡ್ ಹೇಗಿದೆ ಎಂದು ತಿಳಿದುಕೊಂಡರಂತೆ. ಯಾಕೆಂದರೆ ಅವರಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಆ ಮಟ್ಟಿಗೆ ನಂಬಿಕೆ ಇತ್ತು!

ಮಧ್ಯಾಹ್ನದ ಬಳಿಕ ತಮ್ಮ ವಿದೇಶೀ ಸ್ನೇಹಿತರು ದೂರವಾಣಿ ಕರೆ ಮಾಡಲಾರಂಭಿಸಿದಾಗ ಉತ್ತರಿಸುತ್ತಾ ಕಾಲ ಕಳೆದರಂತೆ. ಅಂತೂ ಮತ ಎಣಿಕೆ ದಿನ ಇಡೀ ದೇಶ ಟೆನ್ಷನ್ ನಲ್ಲಿದ್ದರೆ ಮೋದಿ ಮಾತ್ರ ತಣ್ಣಗೆ ಕುಳಿತಿದ್ದರಂತೆ!

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆನೆ ಜತೆ ಸೆಲ್ಪಿ ವಿಡಿಯೋ ವೈರಲ್, ಇನ್ಮುಂದೆ ಈ ಥರ ಮಾಡುವವರ ವಿರುದ್ಧ ಕ್ರಮಕ್ಕೆ ಈಶ್ವರ್ ಖಂಡ್ರೆ ಸೂಚನೆ

ಪಾಕ್ ವಿರುದ್ಧ ಅದು ಸರಿಯಾದ ಪ್ರತೀಕಾರ: ಆಪರೇಷನ್ ಸಿಂಧೂರ್‌ನ್ನು ಶ್ಲಾಘಿಸಿದ ಜಪಾನಿನ ಕಾರ್ಯತಂತ್ರ ತಜ್ಞ

IPL 2025: ಅನುಚಿತ ವರ್ತನೆಗೆ ಡೆಲ್ಲಿ ವೇಗದ ಬೌಲರ್‌ ಮುಕೇಶ್‌ ಕುಮಾರ್‌ಗೆ ಬಿತ್ತು ದಂಡ

ಜಮ್ಮು ಕಾಶ್ಮೀರದ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಯೋಧ ಹುತಾತ್ಮ

ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ: ಡಿಸಿಎಂ ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments