Select Your Language

Notifications

webdunia
webdunia
webdunia
webdunia

ಚಿಕನ್ ಬಡಿಸಲು ಒಲ್ಲೆ ಎಂದ ಮಾಲೀಕನ ಹೋಟೆಲ್ ಗೆ ಇಂತಹ ಗತಿ ತಂದ ವ್ಯಕ್ತಿಗಳು

ಚಿಕನ್ ಬಡಿಸಲು ಒಲ್ಲೆ ಎಂದ ಮಾಲೀಕನ ಹೋಟೆಲ್ ಗೆ ಇಂತಹ ಗತಿ ತಂದ ವ್ಯಕ್ತಿಗಳು
ಮಹಾರಾಷ್ಟ್ರ , ಮಂಗಳವಾರ, 12 ಜನವರಿ 2021 (10:00 IST)
ಮಹಾರಾಷ್ಟ್ರ : ಮಹಾರಾಷ್ಟ್ರದ ನಾಗ್ಪುರದ ರಸ್ತೆ ಬದಿಯ ಹೋಟೆಲ್ ಗೆ ಇಬ್ಬರು ವ್ಯಕ್ತಿಗಳು ಸೇರಿ ಬೆಂಕಿ ಹಚ್ಚಿದ ಘಟನೆ
ನಡೆದಿರುವುದಾಗಿ ತಿಳಿದುಬಂದಿದೆ.


ಶಂಕರ್ ಟೇಡೆ(29) ಮತ್ತು ಸಾಗರ್ ಪಟೇಲ್(19) ಇಂತಹ ಕೃತ್ಯ ಎಸಗಿದ ಆರೋಪಿಗಳು. ಇವರು ತಡರಾತ್ರಿಯ ವೇಳೆ ಹೋಟೆಲ್ ಗೆ ಭೇಟಿ ನೀಡಿ ಚಿಕನ್ ಬಡಿಸುವಂತೆ ಕೇಳಿದ್ದಾರೆ. ಇದಕ್ಕೆ ಹೋಟೆಲ್ ಮಾಲೀಕ ನಿರಾಕರಿಸಿದ ಹಿನ್ನಲೆಯಲ್ಲಿ ಆತನ ಹೋಟೆಲ್ ಗೆ ಬೆಂಕಿ ಹಚ್ಚಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಲಿಲ್ಲ ಎಂಬುದಾಗಿ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರು ಅಪಘಾತದಲ್ಲಿ ಕೇಂದ್ರ ಸಚಿವ ಶ್ರೀಪಾದ ನಾಯ್ಕ್ ಗಂಭೀರ, ಪತ್ನಿ, ಕಾರ್ಯದರ್ಶಿ ಸಾವು