ಪಶ್ಚಿಮಬಂಗಾಳದ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದ ಮಮತಾ ಬ್ಯಾನರ್ಜಿ ಸುದ್ದಿಗೋಷ್ಠಿಯನ್ನು ನಡೆಸಿ ತಮ್ಮ ಪಕ್ಷಕ್ಕೆ ಗೆಲುವು ತಂದುಕೊಟ್ಟ ಮತದಾರರನ್ನು ಅಭಿನಂದಿಸಿದರು. ನಮ್ಮ ಒಳ್ಳೆಯ ಕೆಲಸಗಳ ಫಲವಾಗಿ ಇಂದು ಗೆಲುವು ಸಿಕ್ಕಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಜನಸಾಮಾನ್ಯರ ಸಂತೋಷವೇ ನಮ್ಮ ಸಂತೋಷವಾಗಿದೆ . ನನಗೆ ವಿಪಕ್ಷಗಳು ಎಂದಿಗೂ ತೊಂದರೆ ನೀಡುತ್ತಿದ್ದವು. ನಮ್ಮ ವಿರೋಧಿಗಳ ಆರೋಪವನ್ನು ಜನರು ತಳ್ಳಿಹಾಕಿದರು. ಆದರೆ ಅರ್ಜುನನ ರೀತಿ ನನ್ನ ಗುರಿ ಸ್ಪಷ್ಟವಾಗಿತ್ತು. ನನ್ನ ಗುರಿಗೆ ಬೆಂಬಲ ನೀಡಿ ನೀವೆಲ್ಲಾ ಹರಿಸಿದ್ದೀರಿ ಎಂದು ಮಮತಾ ಭಾವುಕರಾಗಿ ಹೇಳಿದರು.
ಮಮತಾ ಬ್ಯಾನರ್ಜಿ ಪಕ್ಷವಾದ ಟಿಎಂಸಿ 213 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಅಭೂತಪೂರ್ವ ಗೆಲುವಿನತ್ತ ದಾಪುಗಾಲು ಹಾಕಿದೆ. ಸಿಪಿಎಂ ಮತ್ತು ಕಾಂಗ್ರೆಸ್ ಮೈತ್ರಿಕೂಡ 72 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.