Webdunia - Bharat's app for daily news and videos

Install App

ವಕ್ಫ್ ಮಂಡಳಿ ಕಾನೂನು ತಿದ್ದುಪಡಿ ಮಸೂದೆ ಮಂಡನೆ: ಹಳೆ ಕಾನೂನು ಹೇಗಿತ್ತು, ಹೊಸದರಲ್ಲಿ ಏನು ಬದಲಾವಣೆಯಾಗಿದೆ ಇಲ್ಲಿದೆ ವಿವರ

Krishnaveni K
ಗುರುವಾರ, 8 ಆಗಸ್ಟ್ 2024 (15:23 IST)
ನವದೆಹಲಿ: ಕೇಂದ್ರ ಸರ್ಕಾರದ ಬಹುನಿರೀಕ್ಷಿತ ವಕ್ಫ್ ಮಂಡಳಿ ಕಾನೂನು ತಿದ್ದುಪಡಿ ಮಾಡುವ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಾಯಿತು. ಇದಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದವು.

ವಕ್ಫ್ ಮಂಡಳಿಗೆ ಜನರು ಸ್ವ ಇಚ್ಛೆಯಿಂದ ದಾನವಾಗಿ ನೀಡುತ್ತಿದ್ದಾರೆ. ಧಾರ್ಮಿಕ ಸಂಸ್ಥೆಗಳಿಗೆ ಸ್ಥಿರ ಮತ್ತು ಚರಾಸ್ಥಿ ನೀಡುವ ಅಧಿಕಾರವಿದೆ. ವಕ್ಫ್ ಮಂಡಳಿಗೆ ಬೇರೆ ಧರ್ಮದವರನ್ನು ನೇಮಿಸುವುದು ಸರಿಯಲ್ಲ. ಅಯೋಧ್ಯೆ ಟ್ರಸ್ಟ್ ಗೆ ಬೇರೆ ಧರ್ಮದವರನ್ನು ನಿಯೋಜಿಸುತ್ತೀರಾ ಎಂದು ವಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆದರೆ ಈ ಮಸೂದೆಯಿಂದ ಸಂವಿಧಾನದ ಉಲ್ಲಂಘನೆಯಾಗುತ್ತಿಲ್ಲ ಎಂದು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಹಕ್ಕು ಸಿಗದವರಿಗೆ ಹಕ್ಕು ಪತ್ರ ನೀಡಲು ಈ ಮಸೂದೆ ಮಂಡಿಸಲಾಗುತ್ತಿದೆ. ಇದನ್ನು ಬೆಂಬಲಿಸಿ ಎಂದು ಅವರು ವಿಪಕ್ಷಗಳನ್ನು ಕೋರಿದರು. ಆದರೆ ಇದರ ವಿರುದ್ಧ ಹೋರಾಡುವುದಾಗಿ ವಿಪಕ್ಷ ಸದಸ್ಯ ಅಖಿಲೇಶ್ ಯಾದವ್ ಹೇಳಿದ್ದಾರೆ.

ವಕ್ಫ್ ಮಂಡಳಿ ಹೇಗೆ ಕಾರ್ಯನಿರ್ವಹಿಸುತ್ತದೆ?
1954 ರಲ್ಲಿ ವಕ್ಫ್ ಕಾಯ್ದೆಯನ್ನು ಸಂಸತ್ ನಲ್ಲಿ ಅಂಗೀಕರಿಸಲಾಯಿತು. 1955 ರಲ್ಲಿ ಅದಕ್ಕೆ ತಿದ್ದುಪಡಿ ತರಲಾಯಿತು. 2013 ರಲ್ಲಿ ಮಾಡಿದ್ದ ಕೆಲವೊಂದು ತಿದ್ದುಪಡಿಯಿಂದ ವಕ್ಫ್ ಮಂಡಳಿ ಮತ್ತಷ್ಟು ಪ್ರಬಲವಾಯಿತು. ವಕ್ಫ್ ಮಂಡಳಿಯ ಯಾರೊಬ್ಬರ ಆಸ್ತಿಯನ್ನೂ ತನ್ನದೆಂದು ಘೋಷಿಸಬಹುದು ಮತ್ತು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.

ವಕ್ಫ್ ಆಸ್ತಿ ಮತ್ತು ಧಾರ್ಮಿಕ ಸಂಸ್ಥೆಗಳ ನಿರ್ವಹಣೆಗಾಗಿ ಮಾಡಿದ ಕಾಯ್ದೆ ಇದಾಗಿದೆ. ವಕ್ಫ್ ಕಾಯ್ದೆ 1955 ರ ಪ್ರಕಾರ ಧಾರ್ಮಿಕ ಉದ್ದೇಶಕ್ಕಾಗಿ ಈ ದತ್ತಿಗೆ ಶಾಶ್ವತವಾಗಿ ಚರ ಅಥವಾ ಸ್ಥಿರಾಸ್ಥಿಯನ್ನು ಶಾಶ್ವತವಾಗಿ ಸಮರ್ಪಿಸಬಹುದಾಗಿದೆ.

ಹೊಸ ಕಾಯಿದೆಯಲ್ಲಿ ಏನು ಹೇಳಲಾಗಿದೆ
ತಿದ್ದುಪಡಿ ವಿಧೇಯಕದ ಪ್ರಕಾರ ವಕ್ಫ್ ಮಂಡಳಿಗಳು ತಮ್ಮ ಆಸ್ತಿಗಳನ್ನು ಜಿಲ್ಲಾಧಿಕಾರಿಗಳ ಬಳಿ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸುತ್ತದೆ. ದೇಶದಲ್ಲಿ 30 ವಕ್ಫ್ ಮಂಡಳಿಗಳಿದ್ದು ಕೋಟ್ಯಾಂತರ ಮೌಲ್ಯದ ಆಸ್ತಿ ನೋಡಿಕೊಳ್ಳುತ್ತದೆ. ಇದೆಲ್ಲದರಿಂದ ಕೋಟ್ಯಾಂತರ ರೂಪಾಯಿ ಆದಾ ಯಬರುತ್ತದೆ. ವಕ್ಫ್ ಆಸ್ತಿಯನ್ನು ಧಾರ್ಮಿಕ, ಬಡವರ, ವಿದ್ಯಾಭ್ಯಾಸಕ್ಕಾಗಿ ಬಳಸಿಕೊಳ್ಳಬೇಕು ಎಂಬುದು ನಿಯಮದಲ್ಲಿದೆ.

ವಕ್ಫ್ ಬೋರ್ಡ್ ಇತರರ ಆಸ್ತಿಯನ್ನು ಕಬಳಿಸಿರುವುದರ ಬಗ್ಗೆ ಅನೇಕ ಬಾರಿ ವಿವಾದಗಳಾಗಿದ್ದು ಇದೆ. ಆದರೆ ಈಗಿರುವ ಕಾನೂನು ಪ್ರಕಾರ ವಕ್ಫ್ ಬೋರ್ಡ್ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಧಿಕಾರವೂ ಇಲ್ಲ! 2013 ರಲ್ಲಿ ತಂದ ತಿದ್ದುಪಡಿ ಪ್ರಕಾರ ಭೂ ಮಾಲಿಕತ್ವದ ವಿಚಾರವಾಗಿ ವಿವಾದವಾದರೆ ವಕ್ಫ್ ಮಂಡಳಿಯ ನಿರ್ಧಾರವೇ ಅಂತಿಮವಾದದ್ದು. ಮಂಡಳಿಯ ನಿರ್ಧಾರವನ್ನು ಪ್ರಶ್ನಿಸುವ ಅಥವಾ ರದ್ದು ಮಾಡುವ ಅಧಿಕಾರ ನ್ಯಾಯಮಂಡಳಿಗೆ ಮಾತ್ರವಿದೆ. ನ್ಯಾಯಮಂಡಳಿಯಲ್ಲಿ ಆಡಳಿತಾತ್ಮಕ ಅಧಿಕಾರಿಗಳಿರುತ್ತಾರೆ. ಅವರೇ ವ್ಯಾಜ್ಯಗಳನ್ನು ತೀರ್ಮಾನಿಸುತ್ತಾರೆ. ಆದರೆ ಈಗ ತಂದಿರುವ ತಿದ್ದುಪಡಿಯಲ್ಲಿ ವಕ್ಫ್ ಮಂಡಳಿಯ ಅಧಿಕಾರ ವ್ಯಾಪ್ತಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಇದು ಮುಸ್ಲಿಮ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರದ ಮಸೂದೆ ವಿರುದ್ಧ ಆಕ್ರೋಶ ಹೊರಹಾಕಿರುವ ಸಂಸದ ಅಸವುದ್ದೀನ್ ಓವೈಸಿ ನೀವು ಮುಸ್ಲಿಮರ ಶತ್ರುಗಳು ಎನ್ನುವುದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments