Webdunia - Bharat's app for daily news and videos

Install App

ಹೂ ಮಾರುತ್ತಿದ್ದ ಬಡ ಹುಡುಗಿಗೆ ಹೊಡೆದ ಆಟೋ ಚಾಲಕ: ಕರುಳು ಹಿಂಡುವ ಈ ವಿಡಿಯೋ ನೋಡಿ

Krishnaveni K
ಸೋಮವಾರ, 14 ಜುಲೈ 2025 (13:37 IST)
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲವೊಂದು ವಿಡಿಯೋಗಳು ನಮ್ಮನ್ನು ಕಾಡುತ್ತವೆ. ಅಂತಹದ್ದೇ ವಿಡಿಯೋವೊಂದು ಈಗ ವೈರಲ್ ಆಗಿದೆ. ಇದರಲ್ಲಿ ಹೂಡ ಮಾರುತ್ತಿದ್ದ ಬಡ ಹುಡುಗಿಗೆ ಆಟೋ ಚಾಲಕನೊಬ್ಬ ಹೊಡೆದಿದ್ದಕ್ಕೆ ಆಕೆ ಅಳುತ್ತಿರುವ ದೃಶ್ಯ ಎಂತಹವರ ಕರುಳೂ ಹಿಂಡುವಂತಿದೆ.

ಬಡತನದಿಂದಲೋ ಅನಿವಾರ್ಯದಿಂದಲೋ ಕೆಲವೊಂದು ಮಕ್ಕಳು ಶಾಲೆಗೆ ಹೋಗಿ ಓದಿಕೊಂಡು ಅಪ್ಪ-ಅಮ್ಮನ ಬೆಚ್ಚನೆಯ ಆಸರೆಯಲ್ಲಿರಬೇಕಾದ ವಯಸ್ಸಿನಲ್ಲಿ ಕೆಲಸ ಮಾಡಬೇಕಾಗಿ ಬರುತ್ತಿದೆ. ಇದೇ ರೀತಿ ಹೂ ಮಾರುವ ಹುಡುಗಿಯೊಬ್ಬಳು ರಸ್ತೆಯಲ್ಲಿ ಹೂ ಮಾರುತ್ತಿದ್ದಳು.

ಹೀಗೇ ಮಾರಾಟ ಮಾಡುತ್ತಾ ಆಟೋವೊಂದನ್ನು ಹಿಂಬಾಲಿಸಿಕೊಂಡು ಹೂ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಾ ಓಡಿದ್ದಾಳೆ. ಇದಕ್ಕೆ ಆ ಆಟೋ ಚಾಲಕ ಹೊಡೆದಿದ್ದಾನಂತೆ. ಇದರಿಂದ ಬೇಸರಗೊಂಡ ಬಾಲಕಿ ರಸ್ತೆ ಬದಿ ಕೂತು ಅಳುತ್ತಿದ್ದಳು. ಇದನ್ನು ಗಮನಿಸಿ ಬೈಕ್ ವ್ಲಾಗರ್ ಶಿಖರ್ ಎಂಬವರು ಬೈಕ್ ನಿಲ್ಲಿಸಿ ಅಕೆಯನ್ನು ವಿಚಾರಿಸಿದ್ದಾರೆ.

ಆಟೋ ಹಿಂದೆ ಯಾಕೆ ಓಡಲು ಹೋದೆ? ಅದು ಅಪಾಯ ಅಲ್ವಾ? ಹೋಗ್ಲಿ ಬಿಡು ನಿಂಗೆ ನಾನು ದುಡ್ಡು ಕೊಡ್ತೀನಿ ಎಂದು ಅವರು ದುಡ್ಡು ಕೊಡಲು ಹೋದರೂ ಆ ಬಾಲಕಿ ನಿರಾಕರಿಸಿದ್ದಾಳೆ. ಈ ವಿಡಿಯೋವನ್ನು ವ್ಲಾಗರ್ ಶಿಖರ್ ಎಂಬವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದು ವೈರಲ್  ಆಗಿದೆ. ಸಾಕಷ್ಟು ಜನ ಕಾಮೆಂಟ್ ಮಾಡಿದ್ದು ಪರ-ವಿರೋಧ ಕಾಮೆಂಟ್ ಮಾಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by Shikhar Sahni (@ride_with_shikhar)

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕ್ರೀಡಾ ಸಾಮಾಗ್ರಿ ಖರೀದಿಸುವಾಗ ಎಚ್ಚರ ತಪ್ಪಿದ್ರೆ ಆಗುತ್ತೆ ಪಂಗನಾಮ

ಧರ್ಮಸ್ಥಳ ಬುರುಡೆ ರಹಸ್ಯ: ಯಾವಾಗ ಕೈ ಸೇರುತ್ತೆ ಗೊತ್ತಾ ಎಫ್‌ಎಸ್‌ಎಲ್ ವರದಿ

ಮೂಡುಬಿದಿರೆ, ಬಸ್‌ನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ, ವ್ಯಕ್ತಿ ಅರೆಸ್ಟ್‌

ಧರ್ಮಸ್ಥಳ ಕೇಸ್ ರಹಸ್ಯ ಬಯಲಾಗುತ್ತಿದ್ದಂತೇ ಮಹತ್ವದ ಹೇಳಿಕೆ ಕೊಟ್ಟ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

11ದಿನಗಳಿಂದ ಆಪ್ತ ಸ್ನೇಹಿತೆ ನಾಪತ್ತೆ, ದೂರು ನೀಡಿದಾಗ ಬಯಲಾಯಿತು ಭಯಾನಕ ರಹಸ್ಯ

ಮುಂದಿನ ಸುದ್ದಿ
Show comments