Publish Date: Sat, 11 Jul 2026 (14:03 IST)
Updated Date: Sat, 11 Jul 2026 (14:10 IST)
ತಿರುಪತಿ (ಆಂಧ್ರಪ್ರದೇಶ): ವಿಶ್ವಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ತೆರಳುವ ಅಲಿಪಿರಿ ಕಾಲ್ನಡಿಗೆ ಮಾರ್ಗದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಮೆಟ್ಟಿಲು ಹತ್ತಿ ಸಾಗುತ್ತಿದ್ದ ಸಾವಿರಾರು ಭಕ್ತರಲ್ಲಿ ತೀವ್ರ ಆತಂಕ ಮತ್ತು ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಶುಕ್ರವಾರದಂದು ನಡೆದಿರುವ ಈ ಘಟನೆಯಿಂದಾಗಿ ಕಾಲ್ನಡಿಗೆಯ ಮೂಲಕ ಬೆಟ್ಟ ಹತ್ತುವ ಯಾತ್ರಿಕರ ಸುರಕ್ಷತೆಯ ಕುರಿತು ಮತ್ತೆ ಆತಂಕ ವ್ಯಕ್ತವಾಗಿದೆ.
ಘಟನೆಯ ವಿವರ:
ವರದಿಗಳ ಪ್ರಕಾರ, ಅಲಿಪಿರಿ ಮಾರ್ಗದ ಪ್ರಮುಖ ಕೇಂದ್ರವಾದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದ ಸಮೀಪ ಚಿರತೆ ಕಾಣಿಸಿಕೊಂಡಿದೆ.
ಭಕ್ತರ ಕಿರುಚಾಟ: ದಾರಿಯಲ್ಲಿ ತೆರಳುತ್ತಿದ್ದ ಭಕ್ತರ ಗುಂಪೊಂದು ದೇವಾಲಯದ ಹತ್ತಿರವೇ ಚಿರತೆ ಸಂಚರಿಸುತ್ತಿರುವುದನ್ನು ಗಮನಿಸಿ ಜೋರಾಗಿ ಕಿರುಚಿ ಉಳಿದ ಭಕ್ತರನ್ನು ಎಚ್ಚರಿಸಿದೆ. ಇದರಿಂದಾಗಿ ಕೆಲಕಾಲ ಮಾರ್ಗದಲ್ಲಿ ಗೊಂದಲ ಹಾಗೂ ಭಯದ ವಾತಾವರಣ ಉಂಟಾಯಿತು.
ಅರಣ್ಯ ಇಲಾಖೆ ಕಾರ್ಯಪಡೆ: ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣವೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದಾವಿಸಿದ್ದಾರೆ. ಮೆಟಲ್ ರಾಡ್ಗಳಿಂದ ಭಾರಿ ಶಬ್ದ ಮಾಡುವ ಮೂಲಕ ಚಿರತೆಯನ್ನು ಮತ್ತೆ ದಟ್ಟ ಅರಣ್ಯದೊಳಗೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭಕ್ತರಿಗೆ ಜಾಗರೂಕತೆಯ ಸೂಚನೆ :
ಚಿರತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಟಿಟಿಡಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕಾಲ್ನಡಿಗೆಯಲ್ಲಿ ತೆರಳುವ ಭಕ್ತರಿಗೆ ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ:
ಒಂಟಿಯಾಗಿ ಪ್ರಯಾಣಿಸಬೇಡಿ: ಕಾಲ್ನಡಿಗೆ ಮಾರ್ಗದಲ್ಲಿ ಯಾರೂ ಒಂಟಿಯಾಗಿ ನಡೆಯಬಾರದು. ಕಡ್ಡಾಯವಾಗಿ ಗುಂಪುಗಳಲ್ಲಿ ಪ್ರಯಾಣಿಸಬೇಕು.
ಸುರಕ್ಷತಾ ಮಾನದಂಡ: ವಿಶೇಷವಾಗಿ ಮಕ್ಕಳು ಮತ್ತು ವೃದ್ಧರ ಜೊತೆ ತೆರಳುವಾಗ ಹೆಚ್ಚಿನ ಜಾಗ್ರತೆ ವಹಿಸಬೇಕು ಮತ್ತು ಅಧಿಕಾರಿಗಳು ಸೂಚಿಸಿದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ