Publish Date: Sat, 01 Aug 2026 (10:56 IST)
Updated Date: Sat, 01 Aug 2026 (11:07 IST)
ಇಂಧೋರ್: ಅರೆಬರೆ ಜ್ಞಾನ ಮತ್ತು ಜಾಗೃತಿಯ ಅಭಾವ ಜೀವ ರಕ್ಷಣೆ ಮಾಡುವ ಬದಲು ಮತ್ತಷ್ಟು ಅಪಾಯ ತಂದೊಡ್ಡಬಹುದು ಎಂಬುದಕ್ಕೆ ಮಧ್ಯಪ್ರದೇಶದಲ್ಲಿ ನಡೆದ ಘಟನೆಯೊಂದು ಉದಾಹರಣೆಯಾಗಿದೆ. ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಕೈಲಾರಸ್ ನಿವಾಸಿ, 41 ವರ್ಷದ ಶಿಕ್ಷಕಿ ಲಲಿತಾ ಧಾಕಡ್ ಎಂಬುವರು ಕಡು ಬಿಸಿಲಿನಿಂದಾಗಿ ಚಾಲನೆಯಲ್ಲಿದ್ದ ಸ್ಕೂಟರ್ನಿಂದ ಚಕ್ಕರು ಬಿದ್ದು ರಸ್ತೆಯಲ್ಲಿ ಅಜ್ಞಾತ ಸ್ಥಿತಿಗೆ ಜಾರಿದ್ದರು.
ಸ್ಥಳದಲ್ಲಿದ್ದ ಇಬ್ಬರು ಯುವಕರು ಶಿಕ್ಷಕಿ ಬಿದ್ದಿರುವುದನ್ನು ನೋಡಿ, ಇತ್ತೀಚೆಗೆ ಹೆಚ್ಚುತ್ತಿರುವ ಹಾರ್ಟ್ ಅಟ್ಯಾಕ್ ಸನ್ನಿವೇಶ ಇರಬಹುದು ಎಂದು ಭಾವಿಸಿ, ತಕ್ಷಣವೇ ಜೀವ ರಕ್ಷಿಸುವ ಉದ್ದೇಶದಿಂದ ಸಿಪಿಆರ್ ನೀಡಲು ಪ್ರಾರಂಭಿಸಿದರು.
ಯುವಕರು ಶಿಕ್ಷಕಿಯನ್ನು ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ದಾರಿಯುದ್ದಕ್ಕೂ ಸತತವಾಗಿ ಮತ್ತು ತೀವ್ರ ಒತ್ತಡದಿಂದ ಸಿಪಿಆರ್ ನೀಡುತ್ತಲೇ ಸಾಗಿದರು. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದಾಗ, ಶಿಕ್ಷಕಿಗೆ ಯಾವುದೇ ಹಾರ್ಟ್ ಅಟ್ಯಾಕ್ ಅಥವಾ ಕಾರ್ಡಿಯಾಕ್ ಅರೆಸ್ಟ್ ಆಗಿರಲಿಲ್ಲ, ಕೇವಲ ಬಿಸಿಲ ಝಳ ಮತ್ತು ಡಿಹೈಡ್ರೇಶನ್ನಿಂದಾಗಿ ಚಕ್ಕರು ಬಂದಿತ್ತು ಎಂಬುದು ತಿಳಿದುಬಂತು.
ಚಿಕಿತ್ಸೆಯ ನಂತರ ಶಿಕ್ಷಕಿಗೆ ಪ್ರಜ್ಞೆ ಬಂದರೂ ಎದೆಯಲ್ಲಿ ಅಸಹನೀಯ ನೋವು ಕಾಣಿಸಿಕೊಂಡಿತು. ಎಕ್ಸ್-ರೇ ತಪಾಸಣೆ ನಡೆಸಿದಾಗ, ಅವಶ್ಯಕತೆಯಿಲ್ಲದಿದ್ದರೂ ಮತ್ತು ತಪ್ಪು ವಿಧಾನದಲ್ಲಿ ದೀರ್ಘಕಾಲ ಸಿಪಿಆರ್ ನೀಡಿದ್ದರಿಂದ ಅವರ ಎರಡು ಪಕ್ಕೆಲುಬುಗಳು ಮುರಿದಿರುವುದು ದೃಢಪಟ್ಟಿದೆ.
ವ್ಯಕ್ತಿ ಸಂಪೂರ್ಣ ಅಪ್ರಜ್ಞಾಪೂರ್ವಕ ಸ್ಥಿತಿಯಲ್ಲಿದ್ದು, ಉಸಿರಾಟ ಮತ್ತು ನಾಡಿಮಿಡಿತ ಸಂಪೂರ್ಣ ನಿಂತುಹೋಗಿದ್ದರೆ ಮಾತ್ರ ಸಿಪಿಆರ್ ನೀಡಬೇಕು. ಆದರೆ ಇದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಏನೋ ಮಾಡಲು ಹೋಗಿ ಇನ್ನೇನೋ ಆದ ಪರಿಸ್ಥಿತಿಯಾಯಿತು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ