Webdunia - Bharat's app for daily news and videos

Install App

ಬಡ ವ್ಯಕ್ತಿ ತನ್ನ ಅಳಲು ತೋಡಿಕೊಳ್ಳುತ್ತಿದ್ದರೆ ಜಿಲ್ಲಾಧಿಕಾರಿ ಐಫೋನ್ ಸ್ಕ್ರೋಲಿಂಗ್ ಮಾಡೋದರಲ್ಲೇ ಬ್ಯುಸಿ Video

ಕೃಷ್ಣವೇಣಿ ಕೆ
ಶನಿವಾರ, 22 ಆಗಸ್ಟ್ 2026 (14:14 IST)
ಉತ್ತರ ಪ್ರದೇಶದ ಸಿದ್ಧಾರ್ಥನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಬಂದಿರುವ ದೃಶ್ಯವೊಂದು ಆಡಳಿತ ಯಂತ್ರದ ನಿರಾಸಕ್ತಿ ಮತ್ತು ಬಡವರ ಮೇಲಿನ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ತಾಯಿಯ ಚಿಕಿತ್ಸೆಗೆ ನೆರವು ಮತ್ತು ಕೋತಿಗಳ ಕಾಟದಿಂದ ಮುಕ್ತಿ ಕೋರಿ ಬಂದ ಬಡ ವ್ಯಕ್ತಿಯೊಬ್ಬನಿಗೆ ಕಚೇರಿಯಲ್ಲಿ ಎದುರಾಗಿದ್ದು ತೀವ್ರ ನಿರಾಶೆ.
 
ಯುವಕನ ವೃದ್ಧ ತಾಯಿಯ ಮೇಲೆ ಕೋತಿಗಳು ಭೀಕರವಾಗಿ ದಾಳಿ ಮಾಡಿದ್ದು, ತಲೆಗೆ ತೀವ್ರ ಗಾಯವಾಗಿ ಹಲವು ಹೊಲಿಗೆಗಳು ಬಿದ್ದಿದ್ದವು. ಈ ಹಿಂದೆ ಹಲವು ಬಾರಿ ಸ್ಥಳೀಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ "ಜಿಲ್ಲಾಧಿಕಾರಿಯಾದರೂ ತನ್ನ ಅಳಲನ್ನು ಕೇಳಬಹುದು, ತಾಯಿಯ ಚಿಕಿತ್ಸೆಗೆ ಒಂದಷ್ಟು ಸಹಾಯ ಧನ ಸಿಗಬಹುದು ಹಾಗೂ ಕೋತಿಗಳ ಹಾವಳಿಗೆ ಮುಕ್ತಿ ಸಿಗಬಹುದು" ಎಂಬ ಆಸೆಯಿಂದ ಆತ ಜಿಲ್ಲಾಧಿಕಾರಿಗಳ ಕಚೇರಿಗೆ ಧಾವಿಸಿದನು.
 
ಕಣ್ಣಲ್ಲಿ ನಿರೀಕ್ಷೆ, ಧ್ವನಿಯಲ್ಲಿ ಅಸಹಾಯಕತೆ ತುಂಬಿಕೊಂಡು ಆ ಬಡ ವ್ಯಕ್ತಿ ತನ್ನ ತಾಯಿಯ ನೋವಿನ ಕಥೆಯನ್ನು ವಿವರಿಸುತ್ತಿದ್ದ. ಆದರೆ ಎದುರಿಗಿದ್ದ ಜಿಲ್ಲಾಧಿಕಾರಿ ಗಂಭೀರವಾಗಿ ದೂರು ಕೇಳುವ ಬದಲು, ಕೈಯಲ್ಲಿ ಐಫೋನ್ 17 ಪ್ರೋ (iPhone 17 Pro) ಹಿಡಿದು ಸ್ಕ್ರೀನ್ ಸ್ಕ್ರೋಲ್ ಮಾಡುತ್ತಾ ನಗುತ್ತಾ ತಮ್ಮದೇ ಲೋಕದಲ್ಲಿದ್ದರು.
 
ತನ್ನ ಎದುರು ನಿಂತು ಅಳಲು ತೋಡಿಕೊಳ್ಳುತ್ತಿದ್ದ ವ್ಯಕ್ತಿಯ ಮುಖವನ್ನೊಮ್ಮೆ ನೋಡಲು ಕೂಡ ಅಧಿಕಾರಿ ತಮ್ಮ ತಲೆಯನ್ನು ಮೇಲಕ್ಕೆತ್ತಲಿಲ್ಲ. ಬಡವನ ಅಸಹಾಯಕ ನೋಟ ಮತ್ತು ಅಧಿಕಾರಿಯ ಉದಾಸೀನತೆಯ ಈ ದೃಶ್ಯ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
pic.twitter.com/b2xU40MUKF

 

— Mandeep RajBhar (@MandeepRajBhar9) August 21, 2026

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಹೇಳಿದಷ್ಟು ಸಂಬಳ ಕೊಡದೇ ಬಡ ಕಾರ್ಮಿಕನಿಗೆ ವಂಚನೆ: ಮೇಲಧಿಕಾರಿ ಮುಖಕ್ಕೆ ಬಳೆ ಬಿಸಾಕಿ ಆತ ಹೇಳಿದ್ದೇನು ನೋಡಿ Video

ತಾಯಿ ಕೈ ಹಿಡಿದು ನಡೆಯುತ್ತಿದ್ದ ಮಗು ಕಾಲು ಜಾರಿ ರೈಲ್ವೇ ಹಳಿಗೆ ಬಿದ್ದಾಗ… ರೋಚಕ ಕ್ಷಣದ Video

ಅಪ್ಪ ಮಾಡಿದ ತಪ್ಪು ಕೆಲಸವನ್ನು ಮಗನೇ ಪೊಲೀಸರ ಮುಂದೆ ಬಿಚ್ಚಿಟ್ಟ: Video

ಉತ್ತರಾಖಂಡದ ಗುಹೆಯಲ್ಲಿ ಕಂಡ ಆದಿ ಮಾನವ: ದಿಗ್ಭ್ರಮೆಗೊಳಿಸುವ ವಿಡಿಯೋ ಇಲ್ಲಿದೆ

ಮುಂದಿನ ಸುದ್ದಿ
Show comments