Select Your Language

Notifications

webdunia
webdunia
webdunia
webdunia

ಹಸುವಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ಡಿಕ್ಕಿ !

ಹಸುವಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ಡಿಕ್ಕಿ !
ಜೈಪುರ , ಶನಿವಾರ, 22 ಏಪ್ರಿಲ್ 2023 (11:13 IST)
ಜೈಪುರ : ವೇಗವಾಗಿ ಚಲಿಸುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದು, ಹಸು ಸಾವನ್ನಪ್ಪಿದ್ದಲ್ಲದೇ, ರೈಲ್ವೆ ಅಳಿ ಸಮೀಪದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಸು ಬಿದ್ದು ಆತನೂ ಸಾವಿಗೀಡಾದ ಘಟನೆ ರಾಜಸ್ಥಾನ ಅಲ್ವಾರ್ ಜಿಲ್ಲೆಯ ಅರಾವಳಿ ವಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
 
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ-ಜೈಪುರ-ಅಜ್ಮೀರ್ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು. ವೇಗವಾ
ಗಿ ಚಲಿಸುತ್ತಿದ್ದ ರೈಲು ಅಡ್ಡ ಬಂದ ಹಸುವಿಗೆ ಬಡಿದಿದೆ. ರೈಲು ಬಡಿದ ರಭಸಕ್ಕೆ ಹಾರಿದ ಹಸು ಅಳಿಯ ಪಕ್ಕದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಬಿದ್ದು, ಹಸುವಿನೊಂದಿಗೆ ವ್ಯಕ್ತಿಯೂ ಸಾವನ್ನಪ್ಪಿದ್ದಾನೆ. 

ಮೃತ ವ್ಯಕ್ತಿ ಭಾರತೀಯ ರೈಲ್ವೆಯ ನಿವೃತ್ತ ಎಲೆಕ್ಟ್ರಿಷಿಯನ್ ಶಿವದಯಾಳ್ ಶರ್ಮಾ ಎಂದು ಹೇಳಲಾಗಿದೆ. 23 ವರ್ಷಗಳ ಹಿಂದೆ ಶರ್ಮಾ ನಿವೃತ್ತರಾಗಿದ್ದರು. ಮೂತ್ರ ವಿಸರ್ಜನೆ ಮಾಡುವ ವೇಳೆ ಶರ್ಮಾ ಸಾವನ್ನಪ್ಪಿದ್ದಾರೆ ಎಂದು ಶಿವದಯಾಳ್ ಶರ್ಮ ಅವರ ಸಂಬಂಧಿ ಮಾಹಿತಿ ನೀಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಹಲವೆಡೆ 3 ದಿನ ಮಳೆ ಸಾಧ್ಯತೆ