Webdunia - Bharat's app for daily news and videos

Install App

ವಾಜಪೇಯಿಯವರ ಸಂತಾಪ ಸೂಚನಾ ಸಭೆಯಲ್ಲಿ ಗಹಗಹಿಸಿ ನಕ್ಕಿರುವ ಸಚಿವ ಮಹಾಶಯರು ಯಾರು ಗೊತ್ತಾ?

Webdunia
ಶುಕ್ರವಾರ, 24 ಆಗಸ್ಟ್ 2018 (15:24 IST)
ರಾಯಪುರ : ಚತ್ತೀಸ್ ಘಡ್ ದಲ್ಲಿ ಸಚಿವರಿಬ್ಬರು ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಸಂತಾಪ ಸೂಚನಾ ಸಭೆಯಲ್ಲಿ  ಗಹಗಹಿಸಿ ನಕ್ಕಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಹೌದು. ಗುರುವಾರ ಚತ್ತೀಸ್​ಘಡಲ್ಲಿ ನಡೆದ ಅಟಲ್​ ಜಿ ಅಸ್ಥಿ ವಿಸರ್ಜನೆ ಹಾಗೂ ಸಂತಾಪ ಸೂಚನಾ ಸಭೆಯಲ್ಲಿ ಕೃಷಿ ಸಚಿವ ಬ್ರಿಜ್​ಮೋಹನ್​ ಅಗರ್ವಾಲ್​ ಹಾಗೂ ಆರೋಗ್ಯ ಸಚಿವ ಅಜಯ್​ ಚಂದ್ರಶೇಖರ್​ ಅವರು ವೇದಿಕೆಯಲ್ಲಿ ಟೇಬಲ್​ ತಟ್ಟಿ  ಗಹಗಹಿಸಿ ನಕ್ಕಿದ್ದಾರೆ. ಇದನ್ನು ಕಂಡ ಬಿಜೆಪಿ ವರಿಷ್ಠ ಧರ್ಮಲಾಲ್​ ಕೌಶಿಕ್​ ವೇದಿಕೆಯಲ್ಲಿ ನಗದಂತೆ ಸೂಚನೆ ನೀಡಿದ್ದಾರೆ. ಈ ವಿಡಿಯೋ ಇದೀಗ ಬಾರೀ ಚರ್ಚೆಗೆ ಕಾರಣವಾಗಿದೆ.


ಸಚಿವರ ಈ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್​, ವಾಜಪೇಯಿ ಅವರು ಬದುಕಿದ್ದಾಗ ಬಿಜೆಪಿ ಅವರನ್ನು ಕಡೆಗಣಿಸಿತ್ತು. ಈಗ ಬಿಜೆಪಿ ಸಚಿವರ ಈ ವರ್ತನೆ ವಾಜಪೇಯಿ ಅವರ ಬಗ್ಗೆ ಎಷ್ಟು ಗೌರವ ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ. ಅಟಲ್​ ಜೀ ಅವರ ಮೇಲೆ ಬಿಜೆಪಿ ಹಾಗೂ ಸಿಎಂ ರಮಣಸಿಂಗ್​ ತೋರುತ್ತಿರುವ ಗೌರವ, ಪ್ರೀತಿ ಎಲ್ಲವೂ ನಾಟಕ ಎಂದು ಟೀಕಿಸಿದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ರಾಜಾ ರಘುವಂಶಿ ಹತ್ಯೆಗೆ ಬಳಿಸಿದ್ದ ಮಚ್ಚು ವಶಕ್ಕೆ, ಪ್ರಾಣ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಹೊರಡಿದ್ದ ಉದ್ಯಮಿ

ಹರಿಯಾಣ ಮಾಡೆಲ್‌ ಗಂಟಲು ಸೀಳಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ, ಸಹೋದರಿ ಹೇಳಿದ್ದು ಹೀಗೇ

ಇರಾನ್, ಇಸ್ರೇಲ್ ಯುದ್ಧ ಇಫೆಕ್ಟ್: ಭಾರತದಲ್ಲಿ ಇದರ ಬೆಲೆ ಹೆಚ್ಚೋದು ಗ್ಯಾರಂಟಿ

ಮುಂದಿನ ಸುದ್ದಿ
Show comments