Webdunia - Bharat's app for daily news and videos

Install App

ಅಂಗಡಿ ಎತ್ತು ಎಂದು ಅಮಾಯಕ ವಡಾ ಪಾವ್ ಹುಡುಗಿಗೆ ಮುನ್ಸಿಪಾಲಿಟಿ ಜಬರ್ದಸ್ತು: ಯುವತಿ ಕಣ್ಣೀರು

Krishnaveni K
ಶನಿವಾರ, 16 ಮಾರ್ಚ್ 2024 (11:24 IST)
Photo Courtesy: Twitter
ನವದೆಹಲಿ: ದೆಹಲಿಯಲ್ಲಿ ವಡಾ ಪಾವ್ ಸ್ಟಾಲ್ ಇಟ್ಟುಕೊಂಡು ಜೀವನ ಸಾಗಿಸುವ ಪದವೀಧರೆ ಯುವತಿಗೆ ದೆಹಲಿ ಮುನ್ಸಿಪಾಲಿಟಿ ಅಧಿಕಾರಿಗಳು ಅಂಗಡಿ ಎತ್ತು ಎಂದು ಜಬರ್ದಸ್ತ್ ಮಾಡಿದ್ದಕ್ಕೆ ಆಕೆ ಕಣ್ಣೀರು ಹಾಕಿದ ದೃಶ್ಯಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚಂದ್ರಿಕಾ ಗೆರಾ ದೀಕ್ಷಿತ್ ಎಂಬಾಕೆ ಬೀದಿ ಬದಿ ವಡಾ ಪಾವ್ ಮಾರುತ್ತಿದ್ದ ವಿದ್ಯಾವಂತ ಯುವತಿ. ಈಕೆ ಈ ಮೊದಲು ಹಲ್ದೀರಾಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಬಳಿಕ ಆ ಕೆಲಸ ಬಿಟ್ಟು ತನ್ನದೇ ವಡಾ ಪಾವ್ ಸ್ಟಾಲ್ ಶುರು ಮಾಡಿದ್ದಳು. ಇದಕ್ಕೆ ಭಾರೀ ಪ್ರತಿಕ್ರಿಯೆಯೂ ಕಂಡುಬಂದಿತ್ತು.

ಆದರೆ ಇದೀಗ ಚಂದ್ರಿಕಾಗೆ ಮುನ್ಸಿಪಾಲಿಟಿ ಅಧಿಕಾರಿಗಳೇ ಅಂಗಡಿ ತೆರವುಗೊಳಿಸಲು ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಡಾ ಪಾವ್ ಸ್ಟಾಲ್ ನಲ್ಲಿ ಗ್ರಾಹಕರಿಗೆ ಸರ್ವ್ ಮಾಡುತ್ತಿರುವಾಗ ಆಕೆ ಫೋನ್ ನಲ್ಲಿ ಮಾತನಾಡುತ್ತಾ ಅಳುತ್ತಾಳೆ. ಮುನ್ಸಿಪಾಲಿಟಿ ಅಧಿಕಾರಿಗಳು ತನಗೆ ಕೊಡುತ್ತಿರುವ ಕಿರುಕುಳದ ಬಗ್ಗೆ ತನ್ನ ಸಹೋದರನಿಗೆ ಫೋನ್ ಮಾಡಿ ಹೇಳುತ್ತಾಳೆ. ಚಂದ್ರಿಕಾ ಈ ರೀತಿ ತನ್ನ ಕಷ್ಟ ಹೇಳಿಕೊಂಡು ಅಳುವ ದೃಶ್ಯವನ್ನು ಅಲ್ಲೇ ಇದ್ದ ಗ್ರಾಹಕರು ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಇದೀಗ ಭಾರೀ ವೈರಲ್ ಆಗಿದೆ.

ಮುನ್ಸಿಪಾಲಿಟಿ ಅಧಿಕಾರಿಗಳಿಗೆ ಇತ್ತೀಚೆಗಷ್ಟೇ 30 ರಿಂದ 35 ಸಾವಿರ ರೂ. ಕೊಡಲಾಗಿದೆ. ಹಾಗಿದ್ದರೂ ಕಿರುಕುಳ ನೀಡುತ್ತಿದ್ದಾರೆ ಎಂದು ಆಕೆ ಹೇಳಿಕೊಳ್ಳುತ್ತಾಳೆ. ತಾವು ಕೇಳಿದಷ್ಟು ಹಣ ಕೊಡದೇ ಇದ್ದರೆ ಅಂಗಡಿ ಬಂದ್ ಮಾಡಬೇಕೆಂದು ಧಮ್ಕಿ ಹಾಕಿದ್ದಾರೆ ಎಂದು ಆಕೆ ಅಳಲು ತೋಡಿಕೊಂಡಿದ್ದಾಳೆ. ಆದರೆ ಇದಕ್ಕೆ ಕೆಲವರು ಋಣಾತ್ಮಕವಾಗಿಯೂ ಕಾಮೆಂಟ್ ಮಾಡಿದ್ದಾರೆ. ಒಂದು ವೇಳೆ ನೀನು ಅಂಗಡಿ ಹಾಕಲು ಪರವಾನಗಿ ಪಡೆದಿದ್ದರೆ ಯಾರಿಗೂ ಹೆದರಬೇಕಾಗಿಲ್ಲ ಎಂದು ಕೆಲವರು ಹೇಳಿದರೆ, ಅಳುವಾಗ ಆಕೆ ಮೈಕ್ರೋಫೋನ್ ಹಾಕಿಕೊಂಡಿದ್ದಾಳೆ. ಬಹುಶಃ ಸಿಂಪತಿ ಗಿಟ್ಟಿಸಿಕೊಳ್ಳುವುದಕ್ಕೆ ಈ ರೀತಿ ಮಾಡುತ್ತಿರಬೇಕು ಎಂದು ವ್ಯಂಗ್ಯ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಗಂದೂರು ಸೇತುವೆ ಉದ್ಘಾಟನೆಗೆ ಕರೆದಿಲ್ಲ: ಮೋದಿಗೆ ಸಿದ್ದರಾಮಯ್ಯ ಬರೆದ ಪತ್ರದಲ್ಲಿ ಏನಿದೆ

ನೀವು ನಂ1 ಮಿನಿಸ್ಟರ್ ಅಂತ ಸುರ್ಜೇವಾಲ ನನ್ನ ಹೊಗಳಿದ್ದಾರೆ: ಜಮೀರ್ ಅಹ್ಮದ್

Gold price: ದಾಖಲೆ ಬರೆದ ಬೆಳ್ಳಿ ಬೆಲೆ, ಚಿನ್ನದ ಬೆಲೆ ಎಷ್ಟಾಗಿದೆ ನೋಡಿ

2003 ರಲ್ಲಿ ನಡೆದಿದ್ದ ಟೆಕಿ ಗಿರೀಶ್ ಹತ್ಯೆ ಕೇಸ್: ಭಾವೀ ಪತಿ ಹತ್ಯೆಗೈದಿದ್ದ ಶುಭಾ ಕೇಸ್ ಗೆ ಟ್ವಿಸ್ಟ್

ಲೋ ಬಿಪಿಯಿಂದ ಹೃದಯಾಘಾತವಾಗುವುದು ನಿಜಾನಾ: ಡಾ ಸಿಎನ್ ಮಂಜುನಾಥ್ ಹೇಳುವುದೇನು

ಮುಂದಿನ ಸುದ್ದಿ
Show comments